ಹೆಸ್ಕಾಂ ವಿದ್ಯುತ್‌ ದರ ಏರಿಕೆಗೆ ವಿರೋಧ


Team Udayavani, Feb 23, 2021, 4:24 PM IST

ಹೆಸ್ಕಾಂ ವಿದ್ಯುತ್‌ ದರ ಏರಿಕೆಗೆ ವಿರೋಧ

ಧಾರವಾಡ: ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಆರ್ಥಿಕ ವರ್ಷ 2021-22ಕ್ಕೆ ಅಂದಾಜಿಸಿರುವ ಒಟ್ಟು974.77 ರೂ. ಕೋಟಿ ಕಂದಾಯ ಕೊರತೆ ನೀಗಿಸಲುವಿದ್ಯುತ್‌ ಬಳಕೆಯ ಶುಲ್ಕ ಪ್ರತಿ ಯೂನಿಟ್‌ಗೆ 0.73ರೂ. (73 ಪೈಸೆ )ಏರಿಕೆಗೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಸಾರ್ವಜನಿಕರು ಖಂಡಿಸಿ, ಅದನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.

ಕರ್ನಾಟಕ ವಿದ್ಯುತ್‌ತ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ ಮೀನಾ, ಸದಸ್ಯರಾದಎಂ.ಡಿ. ರವಿ ಮತ್ತು ಎಚ್‌.ಎಂ. ಮಂಜುನಾಥಅವರ ಸಮ್ಮುಖದಲ್ಲಿ ನಗರದಲ್ಲಿ ವಿದ್ಯುತ್ಛಕ್ತಿ ದರ ಪಟ್ಟಿನಿಗದಿ ಕುರಿತು ಸಾರ್ವಜನಿಕ ಆಕ್ಷೇಪಣಾ ಅರ್ಜಿಗಳವಿಚಾರಣಾ ಸಭೆಯಲ್ಲಿ 26 ಅರ್ಜಿಗಳು ಸಲ್ಲಿಕೆಯಾಗಿ ವಿದ್ಯುತ್‌ ದರ ಏರಿಕೆ ಮಾಡದಂತೆ ಒಕ್ಕೊರಲಿನಿಂದ ಒತ್ತಾಯಿಸಲಾಯಿತು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ. ಮುನಿರಾಜು ಮಾತನಾಡಿ, ಹೆಸ್ಕಾಂಗೆ ಮಂಜೂರಾದ16, 936 ಸಿಬ್ಬಂದಿಗಳ ಪೈಕಿ 9,588 ಸಿಬ್ಬಂದಿಕಾರ್ಯನಿರ್ವಹಿಸುತ್ತಿದ್ದರೆ ; 7,348 ಹುದ್ದೆಗಳು ಖಾಲಿಇವೆ. ಈ ಮಧ್ಯೆ ವಿದ್ಯುತ್‌ ಖರೀದಿ ವೆಚ್ಚಕ್ಕಾಗಿ 7792.87ಕೋಟಿ ರೂ., 1439.60 ಕಾರ್ಯ ಮತ್ತು ಪಾಲನೆ ವೆಚ್ಚ,296.40 ಕೋಟಿ ರೂ. ಸವಕಳಿ, 612.05 ಕೋಟಿ ರೂ. ಬಡ್ಡಿ ಹಾಗೂ ಆರ್ಥಿಕ ವೆಚ್ಚವಾಗಲಿದೆ. ಈ ಹಿಂದಿನ ವರ್ಷದ ಲಾಭ 137.60 ಕೋಟಿ ರೂ. ಹಾಗೂ ಇತರೆಆದಾಯ 285.97 ಕೋಟಿ ರೂ. ಕಳೆದು ಹೊಸ ಆರ್ಥಿಕ ವರ್ಷಕ್ಕೆ ಒಟ್ಟು ಸರಾಸರಿ ವಾರ್ಷಿಕ ಕಂದಾಯ ಅಗತ್ಯತೆ 9890.71 ಕೋಟಿ ರೂ.ಇದೆ ಎಂದರು.

ಪ್ರಸ್ತುತ ವಿದ್ಯುತ್‌ ದರಗಳಿಂದ ಬರುವ ಒಟ್ಟು ಕಂದಾಯ 8915.95 ಕೋಟಿ ರೂ. ಆಗಿದೆ. ಹೀಗಾಗಿ974.77 ಕೋಟಿ ರೂ. ಕೊರತೆ ಉಂಟಾಗಲಿದೆ. ಹುಕ್ಕೇರಿ ಸೊಸೈಟಿ ಬಳಕೆ ಹೊರತುಪಡಿಸಿ ಈ ಕೊರತೆ ನೀಗಿಸಲು ಬೇಕಿರುವ ದರ ಏರಿಕೆ ಒಟ್ಟು 11762.58 ಮಿ.ಯು ವಿದ್ಯುತ್‌ ಮಾರಾಟಕ್ಕೆ ಪ್ರತಿ ಯುನಿಟ್‌ಗೆ 0.73ರೂ. ಹೆಚ್ಚಳ ಅಗತ್ಯವಿದೆ. ಹೀಗಾಗಿ ದರ ಏರಿಕೆಯ ಪ್ರಸ್ತಾವನೆಪುರಸ್ಕರಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಶಿರಸಿಯ ಉತ್ತರಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಹಾಗೂ ಕೃಷಿ ಸಂಸ್ಥೆಯಜಿ.ಜಿ. ಹೆಗಡೆ, ಹೆಸ್ಕಾಂನ ವಾರ್ಷಿಕ ಆಯವ್ಯಯದಲ್ಲಿಬಹಳ ದೋಷಗಳಿವೆ. ಇನ್ನು ಕಂಪನಿಯ ಸಿಬ್ಬಂದಿಯ ಕಾರ್ಯಕ್ಷಮತೆಯ ಪರಿಣಾಮ ಹಾನಿ ಆಗಿದ್ದು, ಇದನ್ನು ಗ್ರಾಹಕರ ಮೇಲೆ ಹೊರೆಸುವ ಬದಲು ಸಿಬ್ಬಂದಿಗಳಿಂದಲೇ ವಸೂಲಿ ಮಾಡಬೇಕು. 2002-2003 ರಿಂದ 2020-2021ನೇ ಸಾಲಿನವರೆಗೆ ವಿದ್ಯುತ್‌ ಸರಬುರಾಜುಕಂಪನಿಗಳಿಗೆ 13568.59 ಕೋಟಿ ರೂ. ಸರಕಾರದಿಂದ ಸಹಾಯಧನ ಬರಬೇಕಿದೆ. ಸ್ಥಳೀಯ ಸಂಸ್ಥೆಗಳಿಂದಬರಬೇಕಿರುವ 606.08 ಕೋಟಿ ರೂ. ಪಾವತಿಸುವಂತೆಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಗಂಗಾ ಕಲ್ಯಾಣ ಭ್ರಷ್ಟಾಚಾರ: ಗಂಗಾ ಕಲ್ಯಾಣ ಹೆಸ್ಕಾಂ ಕಲ್ಯಾಣ ಆಗುವಂತೆ ಆಗಿದ್ದು, ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಅದರಲ್ಲೂ ಹೆಸ್ಕಾಂ ಗ್ರಾಹಕರ ಮೊರೆ ಕೇಳಲ್ಲ. ಗ್ರಾಹಕರ ಜಾಗೃತಿಗಾಗಿ ಕರಪತ್ರ ಸೇರಿದಂತೆಇನ್ನಿತರಕ್ಕಾಗಿ ಸಾಕಷ್ಟು ಹಣ ವ್ಯಯಿಸುತ್ತಿದ್ದು,ಅದರ ಬದಲಿಗೆ ಗ್ರಾಹಕರಿಗೆ ಹೊರೆ ಬೀಳದಂತೆನೋಡಿಕೊಳ್ಳಬೇಕು. ಹೀಗಾಗಿ ದರ ಪರಿಷ್ಕರಣೆಗೆ ಅವಕಾಶ ನೀಡಬಾರದೆಂದು ಆಯೋಗಕ್ಕೆ ಮನವಿ ಮಾಡಿದರು.

ಕುಮಟಾದ ಅರವಿಂದ ಪೈ ಮಾತನಾಡಿ, ಕೋವಿಡ್‌ ಸಂಕಷ್ಟದ ಈ ಸಮಯದಲ್ಲಿ ಸರಕಾರವೇ ಸಾಕಷ್ಟು ರಿಯಾಯಿತಿ ಘೋಷಣೆ ಮಾಡುತ್ತಿದ್ದರೆ ಹೆಸ್ಕಾಂ ದರ ಏರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕೋವಿಡ್‌ ಮಹಾಮಾರಿ ಸಂಪೂರ್ಣ ತೊಗಲಿ ಹೋಗಿರುವುದಾಗಿ

ಸರಕಾರವೇ ಹೇಳುವವರೆಗೂ ಹಾಗೂ ಹೆಸ್ಕಾಂನಲ್ಲಿ ಆಗಿರುವ ಅವ್ಯವಹಾರ ಬಗ್ಗೆ ಐಎಎಸ್‌ ಅಧಿಕಾರಿಗಳನ್ನು ಬಿಟ್ಟು ಹೊರಗಿನವರಿಂದಲೇ ತನಿಖೆ ಕೈಗೊಳ್ಳುವವರೆಗೂದರ ಪರಿಷ್ಕರಣೆ ಮಾಡಲೇಬಾರದು. ಹೆಸ್ಕಾಂನ ಈ ಪ್ರಸ್ತಾವನೆ ತಿರಸ್ಕರಿಸಬೇಕು. ಪ್ರತಿ ಸಲವೂ ಹೆಸ್ಕಾಂ ಬಗ್ಗೆ ಮೃಧು ಧೋರಣೆ ತೋರುವ ಆಯೋಗವು ಈಸಲವಾದರೂ ಚಾಟಿ ಬೀಸಬೇಕೆಂದು ಆಗ್ರಹಿಸಿದರು.ಹುಬ್ಬಳ್ಳಿಯ ಗೋಪಾಲ ದಿವಟಗಿ, ಹೆಸ್ಕಾಂಗೆಮಂಜೂರಾದ 16,936 ಸಿಬ್ಬಂದಿ ಪೈಕಿ 7,348 ಹುದ್ದೆಗಳುಖಾಲಿ ಇವೆ. ಈ ಹುದ್ದೆ ಭರ್ತಿ ಮಾಡಿಕೊಂಡು ವಿದ್ಯುತ್‌ ಸೋರಿಕೆಗೆ ಕಡಿವಾಣ ಹಾಕಬೇಕು. ಇದರ ಮೂಲಕಆಗುತ್ತಿರುವ ನಷ್ಟ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ದರ ಏರಿಸಬಾರದು ಎಂದರು.

ಧಾರವಾಡದ ನಾಯಕನಹುಲಿಕಟ್ಟಿಯ ಮಂಜುನಾಥ ಗೌರಿ, ಹಾರೋಬೆಳವಡಿಯ ಶಂಕ್ರರಪ್ಪ ಆಯಟ್ಟಿ, ಭಾರತೀಯ ಕಿಸಾನ್‌ ಸಂಘದ ಕಿರಣ ಮಜ್ಜಗಿ, ಬೆಳಗಾವಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಪ್ರಭಾಕರ್‌ ನಾಗರಮುನೊಳ್ಳಿ, ಹಾವೇರಿಯಭಾರತೀಯ ಕಿಸಾನ್‌ ಸಂಘದ ಆರ್‌.ಕೆ.ದೇಶಪಾಂಡೆ,ಭರತೇಶ ಪಡನಾಳ, ಬೆಳಗಾವಿಯ ರವಿ ಸಿದ್ದಣ್ಣವರ, ಜಯಶ್ರೀ ಗೂಳಣ್ಣವರ, ಎ.ಸ್‌.ಕುಲಕರ್ಣಿ ಅವರು, ಹೆಸ್ಕಾಂನ ಟಿಸಿ ನಿರ್ವಹಣೆ, ವಿದ್ಯುತ್‌ ಪೂರೈಕೆಯಲ್ಲಿನಲೋಷದೋಷಗಳ ಬಗ್ಗೆ ಗಮನ ಸೆಳೆದು, ಯಾವುದೇಕಾರಣಕ್ಕೂ ದರ ಏರಿಕೆಗೆ ಆಯೋಗ ಅವಕಾಶಮಾಡಬಾರದೆಂದು ಮನವಿ ಮಾಡಿದರು.

ಕರ್ನಾಟಕ ವಾಣಿಜ್ಯೋದಮ ಸಂಸ್ಥೆ, ಕರ್ನಾಟಕಕರಾವಳಿ ಮಂಜುಗಡ್ಡೆ ಘಟಕ ಮತ್ತು ಶೈತ್ಯಾಗಾರಮಾಲೀಕರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆಯಿಂದಲೂ ದರ ಪರಿಷ್ಕರಣೆ ಮಾಡದಂತೆ ಮನವಿ ಸಲ್ಲಿಸಲಾಯಿತು. ತಾಂತ್ರಿಕ ನಿರ್ದೇಶಕ ಎ.ಎಚ್‌. ಕಾಂಬ್ಳೆ, ಹಣಕಾಸು ನಿರ್ದೇಶಕ ಸುರೇಶ್‌.ಆರ್‌. ತೇರದಾಳ ಸೇರಿದಂತೆ ಹೆಸ್ಕಾಂನ ಹಿರಿಯ ಅಧಿಕಾರಿಗಳು, ರೈತರ ಮುಖಂಡರು ಸಭೆಯಲ್ಲಿದ್ದರು.

ಹೆಸ್ಕಾಂ ರಾತ್ರಿ ಹೊತ್ತು ವಿದ್ಯುತ್‌ ನೀಡುತ್ತಿರುವ ಕಾರಣ ಹೊಲಕ್ಕೆ ರಾತ್ರಿ ಹೊತ್ತು ನೀರು ಬಿಡಲು ಹೋದ ಗಂಡಮನೆಗೆ ಕ್ಷೇಮವಾಗಿ ಬರುವವರೆಗೂ ನೆಮ್ಮದಿಇಲ್ಲದಂತಾಗಿದೆ. ಕುಟುಂಬದ ನೆಮ್ಮದಿ,ಆರೋಗ್ಯಕ್ಕೆ ಹಾನಿಗೆ ಕಾರಣ ಆಗಿರುವ ಈಪದ್ಧತಿ ಕೈ ಬಿಟ್ಟು ಹಗಲು ಹೊತ್ತು ಏಳು ತಾಸುವಿದ್ಯುತ್‌ ಪೂರೈಸಿದರೆ ರೈತಾಪಿ ಸಮುದಾಯಕ್ಕೆಅನುಕೂಲ ಆಗಲಿದೆ. ಕೋವಿಡ್‌ ಸಂಕಷ್ಟದಲ್ಲಿ ಈಗಂತೂ ದರ ಏರಿಕೆ ಬೇಡ.  –ಜಯಶ್ರೀ ಗೂಳಣ್ಣವರ, ರೈತ ಮಹಿಳೆ

ಹೆಸ್ಕಾಂ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಂಡರೆಗುಣಮಟ್ಟದ ಸೇವೆ ನೀಡುವುದರ ಜತೆಗದರ ಕಡಿಮೆ ಮಾಡಬಹುದು. ಆದರೆ ಈಇಚ್ಛಾಶಕ್ತಿಯ ಕೊರತೆ ಇದೆ. ಕೋವಿಡ್‌ಸಂಕಷ್ಟದಲ್ಲಿ ಜನರು ಗ್ರಾಹಕರ ಮೇಲೆ ಹೊರೆ ಬೀಳದಂತೆ ದರ ಪರಿಷ್ಕರಣೆ ಕೈಬಿಡಬೇಕು.  –ಶಂಕ್ರರಪ್ಪ ಆಯಟ್ಟಿ, ಹಾರೋಬೆಳವಡಿ ಗ್ರಾಮಸ್ಥ

 ಕೋವಿಡ್‌ ಮಧ್ಯೆ ಭಾಗದಲ್ಲಿಯೇ ದರ ಏರಿಕೆ ಮಾಡಿದ ಕ್ರಮ ಸರಿಯಲ್ಲ. ಅಫಿಡೆವಿಟ್‌ನಲ್ಲಿಯೇ ಸುಳ್ಳು ಮಾಹಿತಿ ನೀಡುವ ಹೆಸ್ಕಾಂ ಮಾತು ನಂಬಿದರ ಪರಿಷ್ಕರಣೆ ಮಾಡಬಾರದು. ಈಗಂತೂ 10 ವರ್ಷ ದರ ಏರಿಸುವ ಅಗತ್ಯವೇ ಇಲ್ಲ.  –ಅರವಿಂದ ಪೈ,ಕುಮಟಾ

ಕೋವಿಡ್‌ ಸಂಕಷ್ಟದ ಮಧ್ಯೆ ಕಳೆದ ನವೆಂಬರ್‌ ನಲ್ಲಿ ಆಯೋಗವು ಯುನಿಟ್‌ ಒಂದಕ್ಕೆ 0.25ಪೈಸೆ ಹೆಚ್ಚಿಸಿದ್ದು, ಈ ಹೊರೆಯನ್ನು ಭರಿಸಲಾಗದೇನಷ್ಟ ಅನುಭವಿಸುವಂತಾಗಿದೆ. ಹೀಗಿರುವಾಗ ಮತ್ತೆದರ ಏರಿಕೆ ಮಾಡಬಾರದು. ರಾಜೇಂದ್ರ ಸುವರ್ಣ, ಅಧ್ಯಕ್ಷ, ಕರ್ನಾಟಕ ಕರಾವಳಿ ಮಂಜುಗಡ್ಡೆ ಘಟಕ ಮತ್ತು ಶೈತ್ಯಾಗಾರ ಮಾಲೀಕರ ಸಂಘ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.