![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 26, 2021, 1:46 PM IST
ಬೇಸಿಗೆ ಕಾಲದಲ್ಲಿ ಸೂರ್ಯನ ಝಳ ಎಲ್ಲರನ್ನೂ ಹೈರಾಣಾಗಿಸುತ್ತದೆ. ಬೇಸಿಗೆ ಶುರುವಾಯಿತು ಅಂದ್ರೆ ಎಲ್ಲರಲ್ಲೂ ಆತಂಕ ಮನೆ ಮಾಡುತ್ತೆ. ಸೂರ್ಯನ ಉಗ್ರ ಪ್ರತಾಪದಿಂದ ಪಾರಾಗಲು ಹಲವು ಉಪಾಯ ಕಂಡುಕೊಳ್ಳಬೇಕಾಗುತ್ತೆ.
ಸಹಜವಾಗಿ ಬೇಸಿಗೆಯಲ್ಲಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಚರ್ಮ ಕಪ್ಪಾಗುವುದು, ಕಣ್ಣು ಉರಿ ಕಾಣಿಸಿಕೊಳ್ಳುವುದು ಸಹಜ. ಸಾಕಷ್ಟು ಜನರು ನೆತ್ತಿ ಸುಡುವ ಝಳ ತಪ್ಪಿಸಿಕೊಳ್ಳಲು ಕೊಡೆ ಬಳಸುತ್ತಾರೆ. ಆದರೆ, ಕಣ್ಣುಗಳ ಸಂರಕ್ಷಣೆ ಮರೆತು ಬಿಡುತ್ತಾರೆ.
ಸಮ್ಮರ್ ಸೀಸನ್ ನಲ್ಲಿ ಮೈಕಾಂತಿಗೆ ನೀಡುವ ಪ್ರಾಮುಖ್ಯತೆ ನಮ್ಮ ನೇತ್ರಗಳಿಗೂ ನೀಡುವುದು ಅತ್ಯವಶ್ಯ. ಕಾರಣ ಸೂರ್ಯನ ಸುಡುವ ಕಿರಣಗಳು ಮೊದಲು ಹಾನಿ ಮಾಡುವುದು ಕಣ್ಣುಗಳ ಮೇಲೆಯೇ. ಹಾಗಾಗಿ ಕಣ್ಣುಗಳ ರಕ್ಷಣೆ ಎಲ್ಲರ ಮೊದಲ ಆದ್ಯತೆಯಾಗಬೇಕು.
ಪರಿಹಾರ ಏನು ?
ಬೇಸಿಗೆ ಕಾಲದಲ್ಲಿ ಕಣ್ಣುಗಳ ರಕ್ಷಣೆ ಮಾಡ ಬಯಸುವವರು ತಪ್ಪದೆ ಸನ್ ಗ್ಲಾಸ್ ಬಳಸುವುದು ಉತ್ತಮ. ಮನೆಯಿಂದ ಹೊರಗೆ ಹೋಗುವ ಮುನ್ನ ಕಣ್ಣುಗಳಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸುವುದು ಒಳ್ಳೆಯ ಉಪಾಯ. ಅದರಲ್ಲೂ ಬೈಕ್ ಮೇಲೆ ಪ್ರಯಾಣಿಸುವವರು ಸನ್ ಗ್ಲಾಸ್ ಮರೆಯದಿರಿ. ಕಾರಣ ಸೂರ್ಯನ ಬಿಸಿಲಿನಿಂದ ಕೆಂಡದಂತಾಗಿರುವ ಟಾರ್ ರಸ್ತೆಯ ಝಳ ಕಣ್ಣಿಗೆ ತಾಗುತ್ತದೆ. ಇದರಿಂದ ಬೈಕ್ ಓಡಿಸಲು ಕಷ್ಟವಾಗಬಹುದು.
ಗುಣಮಟ್ಟದ ಸನ್ ಗ್ಲಾಸ್ :
ಸನ್ ಗ್ಲಾಸ್ ಖರೀದಿಸುವ ಮುನ್ನ ಕೆಲವೊಂದು ವಿಷಯಗಳತ್ತ ಗಮನ ಹರಿಸುವುದು ಉತ್ತಮ. ಕಡಿಮೆ ಬೆಲೆಗೆ ಸಿಗುವ ಗ್ಲಾಸ್ ಗಳ ಮೊರೆ ಹೋಗದಿರಿ. ಸ್ವಲ್ಪ ಹಣ ಖರ್ಚಾದರೂ ಪರವಾಗಿಲ್ಲ ಉತ್ತಮ ಗುಣಮಟ್ಟದ ಕೂಲಿಂಗ್ ಗ್ಲಾಸ್ ತೆಗೆದುಕೊಳ್ಳುವುದು ಒಳ್ಳೆಯದು. ಇದು ದೀರ್ಘಕಾಲ ಬಾಳಿಕೆ ಬರುವುದರ ಜತೆಗೆ ಹೆಚ್ಚು ರಕ್ಷಣಾತ್ಮಕವಾಗಿರುತ್ತದೆ.
ಇರಲಿ ಫ್ಯಾಶನ್ :
ಈಗಂತೂ ಹಲವು ಬಗೆಯ ಸನ್ ಗ್ಲಾಸ್ ಗಳು ಮಾರುಕಟ್ಟೆಯಲ್ಲಿ ಲಭ್ಯ. ಆನ್ ಲೈನ್ ಹಾಗೂ ಶೋರೂಂಗಳಲ್ಲಿ ಟ್ರೆಂಡಿಯಾಗಿರುವ ಕೂಲಿಂಗ್ ಗ್ಲಾಸ್ ಗಳು ದೊರೆಯುತ್ತವೆ. ನಮ್ಮ ಕಣ್ಣುಗಳ ರಕ್ಷಣೆ ಜತೆಗೆ ಸುಂದರವಾಗಿ ಕಾಣಿಸಿಕೊಳ್ಳ ಬಯಸುವವರು ಹೊಸ ಫ್ಯಾಶನ್ ಗ್ಲಾಸ್ ತೆಗೆದುಕೊಳ್ಳಬಹುದು.
ಕಣ್ಣಿನ ರಕ್ಷಣೆಗೆ ಹಲವು ಕ್ರಮ :
ಬಿಸಿಲಿನಿಂದ ಕಣ್ಣುಗಳ ರಕ್ಷಣೆಗೆ ಕೇವಲ ಸನ್ ಗ್ಲಾಸ್ ಮೊರೆ ಹೋದರೆ ಸಾಲದು. ನಾವು ತಿನ್ನುವ ಆಹಾರದತ್ತ ಗಮನ ಹರಿಸುವುದು ಕೂಡ ಅಗತ್ಯ. ವಿಟಮಿನ್ ಹೆಚ್ಚಿರುವ ಕ್ಯಾರೆಟ್, ಹಾಲು ಮೊಟ್ಟೆ, ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವುದನ್ನು ಮರೆಯಬೇಡಿ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.