ಬೇಂದ್ರೆ ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು
Team Udayavani, Mar 8, 2021, 4:46 PM IST
ಧಾರವಾಡ: ನಾವಿಂದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ನಮ್ಮತನದ ಬೇರು, ಪರಂಪರೆಗಳನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಅವುಗಳನ್ನು ಪುನಃ ಪಡೆದುಕೊಳ್ಳಬೇಕಾದರೆ ಅದಕ್ಕೆ ಬೇಂದ್ರೆಯವರ ಕಾವ್ಯಗಳೇ ದಾರಿಯಾಗಬಲ್ಲವು ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.
ಕೆಸಿಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ.ರಾ. ಬೇಂದ್ರೆಯವರ 125ನೇ ಜನ್ಮದಿನದಪ್ರಯುಕ್ತ ನಾಡಿನ 65 ಸಾಹಿತಿಗಳು ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ “ಕಂಡವರಿಗಷ್ಟೇ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಪರಂಪರೆ ಪ್ರಕಾರ ಯಾರು 125ನೇ ಜನ್ಮದಿನದ ನಂತರ ನೆನಪಿನಲ್ಲಿ ಉಳಿಯುತ್ತಾರೆಯೋ ಅವರು ಚಿರಂಜೀವಿ ಆಗುತ್ತಾರೆ ಎನ್ನುತ್ತಾರೆ. ಹಾಗೆಯೇ ಬೇಂದ್ರೆಯವರು ಈಗ ಚಿರಂಜೀವಿ ಆಗಿದ್ದಾರೆ. ಬೇಂದ್ರೆ ಓರ್ವ ಭಕ್ತ ಕವಿ ಆಗಿದ್ದರು. ಅವರಲ್ಲಿದೊಡ್ಡ ಪ್ರಮಾಣದ ಭಕ್ತಿ ಇತ್ತು. ವೇದವನ್ನು ತುಂಬಾ ಚೆನ್ನಾಗಿ ಅನುಸರಿಸಿಕೊಂಡು ಬಂದಿದ್ದರು. ಅವರನ್ನು ಕಾವ್ಯ ಮತ್ತು ಶಾಸ್ತ್ರದ ದೃಷ್ಟಿಯಿಂದ ತುಂಬಾ ಕಡಿಮೆ ಅರ್ಥೈಸಿಕೊಂಡಿದ್ದೇವೆ. ಅವರನ್ನು ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು ಎಂದರು.
ಹಿರಿಯ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಬೇಂದ್ರೆ ಪುಸ್ತಕಗಳನ್ನು ಅನಂತಕಾಲ ಪ್ರಕಟಿಸಿದ ಹಾಗೂ ಇನ್ನೂ ಅನೇಕ ವರ್ಷ ಪ್ರಕಟಿಸುವ ಶಕ್ತಿವುಳ್ಳವರು ನಮ್ಮಲ್ಲಿದ್ದಾರೆ. ಅಂಥವರು ಯಾರೂ ನಾವೇ ಇಂತಹ ಪುಸ್ತಕಪ್ರಕಟಿಸುತ್ತೇವೆ ಬನ್ನಿ ಎಂದು ಆಹ್ವಾನ ನೀಡದೇ ಇರುವುದು ಬೇಸರದ ಸಂಗತಿ. ಅದೇನೇ ಆಗಿರಲಿ ಬೇಂದ್ರೆಯವರ ಸ್ವಾಭಿಮಾನದ ಆಶಯಭಾವದಂತೆಯೇ ಸ್ವಂತ ಪುಸ್ತಕ ಪ್ರಕಟಿಸಿ, ಸ್ವಂತ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕಂಡವರಿಗಷ್ಟೇ ಕೃತಿಯ ಸಂಪಾದಕರಾದ ಡಾ| ಗೀತಾ ವಸಂತ, ಡಾ| ರಾಜಕುಮಾರ ಮಡಿವಾಳರ ಇದ್ದರು.
ಕನ್ನಡ ಸಾಹಿತ್ಯಕ್ಕೆ ಬೇಂದ್ರೆ ಅಗಾಧ ಶಕ್ತಿ ಇದ್ದಂತೆ. ಅವರ ಸಮಾನರಾದ ಕವಿ ಮತ್ತೂಬ್ಬರಿಲ್ಲ. ಹಿಂದಿ, ಇಂಗ್ಲಿಷ್ನಲ್ಲಿಯೂ ಬೇಂದ್ರೆಯವರ ಮಾದರಿಯಲ್ಲಿ ಬರೆಯುವ ಕವಿಗಳ ಕಾವ್ಯಗಳನ್ನು ನಾನು ಓದಿದ್ದೇನೆ. ಆದರೆ ಅವರ್ಯಾರೂ ಸಹ ಬೇಂದ್ರೆಯವರಿಗೆ ಸಮಾನರಾಗುವುದೇ ಇಲ್ಲ. – ಡಾ| ಗುರುಲಿಂಗ ಕಾಪಸೆ, ಹಿರಿಯ ಸಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ
ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Hagga movie review: ರೋಚಕ ರಹಸ್ಯದ ಕಥಾನಕ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.