![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 8, 2021, 4:56 PM IST
ಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾ ಕನ್ನಡ ಸಂಘ ಕ್ವೀನ್ಸ್ಲ್ಯಾಂಡ್ (ಕೆಎಸ್ಕ್ಯೂ) ಸದಸ್ಯರಲ್ಲಿ ಫೆ. 14 ಹತ್ತಿರವಾಗುತ್ತಿದ್ದಂತೆ ಕುತೂಹಲ ಕಾತರ ಹೆಚ್ಚಾಗುತ್ತಿತ್ತು. ಎಲ್ಲರೂ ತಮ್ಮ ಸ್ನೇಹಿತರು, ಬಂಧುಗಳಿಗೆ ಫೇಸ್ಬುಕ್, ವಾಟ್ಸ್ ಆ್ಯಪ್, ಮಿಂಚಂಚೆಯ ಮೂಲಕ ಈ ವಿಶೇಷ ದಿನದ ಬಗ್ಗೆ ನೆನಪಿಸುತ್ತಿದ್ದರು.
ಹೆಚ್ಚಾಗಿ ತರುಣ ತರುಣಿಯರು ಉತ್ಸಾಹದಿಂದ ಆಚರಿಸುವ ಈ ದಿನವನ್ನು ಕನ್ನಡ ಸಂಘದ ವತಿಯಿಂದ ಯಾಕೆ ಆಯೋ ಜಿ ಸ ಲು ಹೊರಟಿ¨ªಾರೆ ಎಂಬ ಆಶ್ಚರ್ಯ ಎಲ್ಲರಲ್ಲೂ ಇತ್ತು. ಆದರೆ ಕನ್ನಡ ಸಂಘ ಕ್ವೀನ್ಸ್ಲ್ಯಾಂಡ್ ಆಸ್ಟ್ರೇಲಿಯಾದಲ್ಲಿ ಪ್ರಪ್ರಥಮ ಬಾರಿಗೆ “ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ಆಯೋಜಿಸಿ ಈ ದಿನವನ್ನು ವಿಶೇಷವಾಗಿಸಲು ನಿರ್ಧ ರಿ ಸಿ ತ್ತು. ಅಲ್ಲದೇ ಕ್ವಿಜ್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರೇ ಖು¨ªಾಗಿ ಕಾರ್ಯಕ್ರಮ ನಡೆಸಿಕೊಡುವವರಿದ್ದರು. ಪ್ರೇಮ ಸಂಭ್ರಮ ಜಾಲ ವಿಶೇಷ ಕ್ವಿಜ್ ಸ್ಪರ್ಧೆಯ ಮೂಲಕ ರಸಪ್ರಶ್ನೆಗಳ ಸವಾಲನ್ನೆದುರಿಸಲು ಕೆಎಸ್-ಕ್ಯೂ ಸದಸ್ಯರಿಂದ ಆರು ಗಂಡ-ಹೆಂಡಿರ ಜೋಡಿಗಳು ಸಿದ್ಧವಾಗಿದ್ದರು. ಗೆದ್ದವರಿಗೆ ಬಹುಮಾನವಾಗಿ ಇ-ಪುಸ್ತಕಗಳನ್ನು ಕೊಡಲು ಮೈಲ್ಯಾಂಗ್ ಮತ್ತು ಸಾವಣ್ಣ ಬುಕÕ… ಮುಂದೆ ಬಂದಿದ್ದವು.
ಸಂಘದ ವತಿಯಿಂದ ಸೋಮೇಶ್ವರ ಅವರನ್ನು ಸ್ವಾಗತಿಸಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅಖೀಲ- ಅನಿಲ…, ರೋಹಿಣಿ- ಚಂದನ್, ರೂಪ- ಕುಮಾರ್, ಗೌರಿ- ಮಹಾಂತೇಶ್, ದೀಪಾ- ರಾಘವೇಂದ್ರ ಮತ್ತು ಶಾಂಭವಿ- ನಂದೀಶ್ ಅವರನ್ನು ಪರಿಚಯಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಸ್ಪರ್ಧೆಯಲ್ಲಿ ಅಮರ ಪ್ರೇಮಕಥೆಗಳು, ದುರಂತ ಪ್ರೇಮ ಕಥೆಗಳು, ಅಕ್ಷರಗಳ ಜೋಡಣೆ, ಪ್ರಶ್ನೋತ್ತರ, ಪದಬಂಧ, ಪದವಿನೋದ, ಶ್ರವ್ಯಕಾವ್ಯ ಮತ್ತು ಚಟ್ ಪಟ್ ಚಿನಕುರಳಿ ಎಂಬಂತೆ ಎಂಟು ಸುತ್ತುಗಳಿರುತ್ತವೆ ಎಂದು ಸೋಮೇಶ್ವರ್ ಘೋಷಿಸಿದರು.
ಆಗಾಗ buzzer ವ್ಯವಸ್ಥೆ ಕೈಕೊಟ್ಟರೂ ಸ್ಪರ್ಧಾಳುಗಳು ಉತ್ಸಾಹದಿಂದ ಮುನ್ನಡೆದಿದ್ದರು. ಕೊನೆಗೆ ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸಿ ಗೌರಿ- ಮಹಾಂತೇಶ್ ದಂಪತಿ ವಿಜಯಿಗಳಾಗಿದ್ದರು. ಅವರು ಕೊಟ್ಟ ಉತ್ತರಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅವರಿಗಿರುವ ಆಸಕ್ತಿ ಎದ್ದು ಕಂಡಿತು.
ಕಾರ್ಯಕ್ರಮದಲ್ಲಿ ಕ್ವಿಜ್ ಮಾಸ್ಟರ್ ಪ್ರಶ್ನೆ ಕೇಳಿದ ಅನಂತರ ಅದಕ್ಕೆ ಉತ್ತರವನ್ನು ಆಲೋಚಿಸುತ್ತಾ ಜೋಡಿಗಳು ತಲೆ ಕೆರೆದುಕೊಳ್ಳುತ್ತಿ¨ªಾಗ ಆ ಅರವತ್ತು ಸೆಕೆಂಡುಗಳಲ್ಲಿ ಹಳೆ ಕನ್ನಡ ಚಲನಚಿತ್ರ ಹಾಡುಗಳ ವಾದ್ಯಸಂಗೀತವನ್ನು ಕೇಳುವ ರಸದೌತಣವಿತ್ತು.
ಒಮ್ಮೊಮ್ಮೆ ಪ್ರಶ್ನೆಗಳ ಜತೆ ವಾದ್ಯಸಂಗೀತವು ಪೈಪೋಟಿ ಹೂಡಿ, ಯಾವುದರ ಕಡೆಗೆ ಗಮನ ಕೊಡಬೇಕು ಎಂಬ ಗೊಂದಲ ಉಂಟುಮಾಡಿ ಹಾಟ್ ಸೀಟಿನಲ್ಲಿ ಕೂತಿದ್ದ ಜೋಡಿಗಳ ಪರದಾಟ ನಗು ತರಿಸಿತ್ತು.
ಉತ್ತರ ಕರ್ನಾಟಕದ ಭಾಷೆಗೂ ಮೈಸೂರು ಪ್ರಾಂತ್ಯದ ಕನ್ನಡಕ್ಕೂ ಇದ್ದ ವ್ಯತ್ಯಾಸ ಸೂಕ್ಷ್ಮವಾಗಿ ಕಾಣುತ್ತಿತ್ತು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.