ಉತ್ತಮ ಯೋಜನೆ; ಅನುದಾನ ಕಡಿಮೆ
Team Udayavani, Mar 9, 2021, 1:07 AM IST
ಫಸಲ್ ವಿಮಾ ಯೋಜನೆಗೆ 900 ಕೋ.ರೂ., ಕೃಷಿ ಸಂಚಯಿ ಯೋಜನೆಗೆ 831 ಕೋ.ರೂ. ಗುರುತಿಸಿರುವುದು ಗಮನಾರ್ಹ ವಿಚಾರ. ಕೃಷಿಯ ಫಸಲು ನಷ್ಟವಾದರೆ ವಿಮಾ ಯೋಜನೆ ಮೂಲಕ ಪರಿಹಾರ ಒದಗಿಸುವುದು ಯೋಜನೆಯ ಗುರಿ. ಈ ಯೋಜನೆಯಡಿ ಶೇ. 2-3 ಶೇರು ಮಾತ್ರ ರೈತರಿಗೆ ಪಾವತಿಸಲಿಕ್ಕಿದೆ, ಉಳಿದ ಅಂಶವನ್ನು ಸರಕಾರ ಭರಿಸಲಿದೆ.
ಕಿಸಾನ್ ಸಮ್ಮಾನ್ ಯೋಜನೆ ಮುಂದುವರಿಯಲಿದ್ದು ರೈತರಿಗೆ ವಾರ್ಷಿಕ 4,000 ರೂ. ಸಹಾಯಧನ ಜಮೆ ಆಗಲಿದೆ. ಕೇಂದ್ರ ಸರಕಾರದ 6,000 ರೂ. ವಿತರಣೆಯೊಂದಿಗೆ ಇದು ಹೆಚ್ಚುವರಿ ಸಹಾಯ. ಇದು ಸಂಕಷ್ಟದಲ್ಲಿರುವ ಕೃಷಿಕರಿಗೆ ಉತ್ತೇಜನವಾಗಲಿದೆ.
300 ಕೋ.ರೂ.ಗಳನ್ನು ಸಾವಯವ ಕೃಷಿಗೆ ಮೀಸಲಿರಿಸಲಾಗಿದೆ. ರಾಷ್ಟ್ರೀಯ ಇ ಮಾರುಕಟ್ಟೆ ಮೂಲಕ ಸಾವಯವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಇದೊಂದು ಹೊಸ ಉಪಕ್ರಮ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಸಾವಯವ ಇಂಗಾಲ ಹೆಚ್ಚಿಸುವ ಯೋಜನೆಗೆ 75 ಕೋ.ರೂ. ಇರಿಸಿರುವುದು ಸಾವಯವ ಕೃಷಿ ಕ್ಷೇತ್ರಕ್ಕೆ ಆಶಾವಾದ ಹುಟ್ಟಿಸಲಿದೆ. ಕೃಷಿ ರಫ್ತು ವಲಯ ಸ್ಥಾಪನೆ (ಔಷಧೀಯ ಗಿಡಗಳು)ಗೆ ಪ್ರೋತ್ಸಾಹ ನೀಡಲಾಗುವುದು.
ಇದರಿಂದ ಭಾರತದ ಪುರಾತನ ಆಯುರ್ವೇದ ಮತ್ತು ಗಿಡಮೂಲಿಕೆ ಜ್ಞಾನಕ್ಕೆ ವೇಗವರ್ಧನೆಯಾಗಬಹುದು.
ಸಾಕಷ್ಟು ಉತ್ತಮ ಯೋಜನೆಗಳು ಕಂಡುಬಂದರೂ ಕೃಷಿ ಕ್ಷೇತ್ರದ ಗಾತ್ರವನ್ನು ನೋಡಿದರೆ ಅನುದಾನ ಏನೇನೂ ಸಾಲದು ಎಂದೆನಿಸುತ್ತದೆ. ಬಹುತೇಕ ಯೋಜನೆಗಳು ಬಜೆಟ್ ಕಡತದಲ್ಲಿಯೇ ಉಳಿಯುತ್ತವೆ, ಅನುಷ್ಠಾನ ಆಗುವುದು ಕಡಿಮೆ. ಆದ್ದರಿಂದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
– ರಾಮಕೃಷ್ಣ ಶರ್ಮ ಬಂಟಕಲ್ಲು , ಅಧ್ಯಕ್ಷರು, ಜಿಲ್ಲಾ ಕೃಷಿಕ ಸಂಘ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʻಬ್ರಾಂಡ್ ಬೆಂಗಳೂರುʼ ಪರಿಕಲ್ಪನೆಯಡಿ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ
ಎಲ್ಲಾ ದೇವಸ್ಥಾನಗಳಿಗೆ ಸಮಾನ ಸಹಾಯ ಅನುದಾನ: ಧಾರ್ಮಿಕ ದತ್ತಿ ಕ್ಷೇತ್ರಕ್ಕೆ ಸಿಕ್ಕಿದ್ದೇನು?
Budget: ಮಹಿಳೆಯರಿಗೆ ಶಕ್ತಿ ತುಂಬಲು ‘ಉದ್ಯಮ ಶಕ್ತಿ’ ಯೋಜನೆಯಡಿ 100 ಪೆಟ್ರೋಲ್ ಬಂಕ್
ಮೂಲಸೌಕರ್ಯ ಅಭಿವೃದ್ಧಿ, ಬಂದರು,ಒಳನಾಡು ಜಲಸಾರಿಗೆ ಇಲಾಖೆಗೆ ಬಜೆಟ್ನಲ್ಲಿ ಸಿಕ್ಕಿದ್ದೇನು?
Budget ಕೆರೆ ಪುನರುಜ್ಜೀವನಕ್ಕೆ ಹಲವು ಕ್ರಮ; ಜಲಸಂಪನ್ಮೂಲ & ಸಣ್ಣನೀರಾವರಿಗೆ ಸಿಕ್ಕಿದ್ದೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ
Hiriyur: ಹೆದ್ದಾರಿಗೆ ಮಣ್ಣು ಕುಸಿದು ಹತ್ತು ಕಿ.ಮೀ ಟ್ರಾಫಿಕ್ ಜಾಮ್
Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?
Bengaluru: ಬಿಡಿಎಗೆ ವಂಚನೆ: 19 ಮಂದಿ ವಿರುದ್ಧ ಕೇಸ್
Uttarakhand: 200 ಅಡಿ ಆಳದ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್, 30ಕ್ಕೂ ಹೆಚ್ಚು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.