![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Mar 9, 2021, 4:37 PM IST
ಕೆಲವು ದಿನಗಳ ಹಿಂದಷ್ಟೇ ಪುನೀತ್ ರಾಜ್ಕುಮಾರ್ ಅವರ “ಯುವರತ್ನ’ ಚಿತ್ರದ ಗುರುವಿನ ಕುರಿತಾದ ಪಾಠಶಾಲಾ ಹಾಡು ಬಿಡುಗಡೆಯಾಗಿತ್ತು. ಈಗ ಚಿತ್ರತಂಡ ಮೈಗುರು ಎಂಬ ಅಭಿಯಾನ ಶುರು ಮಾಡಿ, ಒಬ್ಬೊಬ್ಬರಿಗೆ ಟ್ಯಾಗ್ ಮಾಡುತ್ತಿದೆ. ಇಲ್ಲಿ ತಮ್ಮ ಗುರು ಯಾರೆಂದು ಹೇಳಬೇಕು.
ಈಗಾಗಲೇ ಪುನೀತ್ರಾಜ್ಕುಮಾರ್, ಧ್ರುವ, ನಿರ್ದೇಶಕ ಪವನ್ ಒಡೆಯರ್ ತಮ್ಮ ಗುರುವಿನ ಫೋಟೋ ಜೊತೆಗೆ ಬರೆದುಕೊಂಡಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮೀ ಟೀಚರ್ ನನ್ನ ಗುರು ಎಂದು ಅವರ ಜೊತೆಗಿನ ಫೋಟೋಶೇರ್ ಮಾಡಿದ್ದಾರೆ.
ನಟ ಧ್ರುವ ಸರ್ಜಾ ಅವರಿಗೆ ಅವರ ಸಹೋದರ ಚಿರಂಜೀವಿ ಸರ್ಜಾ ಅವರೇ ಗುರುವಂತೆ. ಚಿರು ಜೊತೆಗಿನ ಫೋಟೋ ಜೊತೆಗೆ, “ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’ ಎಂದಿದ್ದಾರೆ.
ನಿರ್ದೇಶಕ ಪವನ್ ಒಡೆಯರ್ ಅವರಿಗೆ ಅವರ ಲೆಕ್ಕ ಕಲಿಸಿದ ಸತೀಶ್ ಮೇಷ್ಟ್ರು ಗುರುವಂತೆ. ಹೀಗೆ ಕನ್ನಡ ಚಿತ್ರರಂದಲ್ಲಿ ಸದ್ಯ ಗುರು ನಮನ ನಡೆಯುತ್ತಿದೆ. ಮುಂದೆ ಮತ್ತೂಂದಿಷ್ಟು ಮಂದಿ ತಮ್ಮ ಗುರುಗಳನ್ನು ನೆನೆಸಿಕೊಳ್ಳಲಿದ್ದಾರೆ
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.