ಪರಿಮಿತಿ ಉಲ್ಲಂಘನೆ ಆರೋಪ : IDBI ಬ್ಯಾಂಕ್ ಗೆ ಕ್ಲೀನ್ ಚಿಟ್ ಕೊಟ್ಟ RBI ..!
Team Udayavani, Mar 11, 2021, 2:15 PM IST
ನವ ದೆಹಲಿ : ಐ ಡಿ ಬಿ ಐ ಬ್ಯಾಂಕ್ ಲಿಮಿಟೆಡ್ ಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
“ಪ್ರಸ್ತುತ ಆರ್ ಬಿ ಐ ನ ಪ್ರಾಂಪ್ಟ್ ಕರೆಕ್ಟಿವ್ ಆ್ಯಕ್ಷನ್ ಫ್ರೇಮ್ ವರ್ಕ್ (ಪಿಸಿಎಎಫ್) ಅಡಿಯಲ್ಲಿರುವ ಐ ಡಿ ಬಿ ಐ ಬ್ಯಾಂಕ್ ಲಿಮಿಟೆಡ್ ನ ಕಾರ್ಯಕ್ಷಮತೆಯನ್ನು 2021 ರ ಫೆಬ್ರವರಿ 18 ರಂದು ನಡೆದ ಸಭೆಯಲ್ಲಿ ಮಂಡಳಿಯ ಹಣಕಾಸು ಮೇಲ್ವಿಚಾರಣೆ (ಬಿ ಎಫ್ ಎಸ್) ಪರಿಶೀಲಿಸಿದೆ. ಪ್ರಕಟಿತ ಫಲಿತಾಂಶಗಳ ಪ್ರಕಾರ ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ನಿಯಂತ್ರಕ ಬಂಡವಾಳ, ನಿವ್ವಳ ಎನ್ ಪಿ ಎ ಮತ್ತು ಹತೋಟಿ ಅನುಪಾತದ ಪಿಸಿಎ ನಿಯತಾಂಕಗಳನ್ನು ಉಲ್ಲಂಘಿಸಿಲ್ಲ ” ಎಂದು ಆರ್ ಬಿ ಐ ತಿಳಿಸಿದೆ.
ಓದಿ : ರುದ್ರಾಕ್ಷಿ ರೂಪದ ಕೋಟಿ ಶಿವಲಿಂಗ; ಇದು ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿ
ಕನಿಷ್ಠ ನಿಯಂತ್ರಕ ಬಂಡವಾಳ, ನಿವ್ವಳ ಎನ್ ಪಿ ಎ ಮತ್ತು ಹತೋಟಿ ಅನುಪಾತದ ಮಾನದಂಡಗಳನ್ನು ಅದು ನಿರಂತರವಾಗಿ ಅನುಸರಿಸಲಿದೆ ಎಂದು ಬ್ಯಾಂಕ್ ಲಿಖಿತ ಬದ್ಧತೆಯನ್ನು ಒದಗಿಸಿದೆ ಮತ್ತು ಇದು ಜಾರಿಗೆ ತಂದಿರುವ ರಚನಾತ್ಮಕ ಮತ್ತು ವ್ಯವಸ್ಥಿತ ಸುಧಾರಣೆಗಳ ಕುರಿತು ಆರ್ ಬಿ ಐ ಗೆ ತಿಳಿಸಿದೆ.
“ಮೇಲಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಐಡಿಬಿಐ ಬ್ಯಾಂಕ್ ಲಿಮಿಟೆಡ್ ನನ್ನು ಕೆಲವು ಷರತ್ತುಗಳು ಮತ್ತು ನಿರಂತರ ಮೇಲ್ವಿಚಾರಣೆಗೆ ಒಳಪಟ್ಟು ಪಿಸಿಎ ಚೌಕಟ್ಟಿನಿಂದ ಹೊರತೆಗೆಯಲು ನಿರ್ಧರಿಸಲಾಗಿದೆ” ಎಂದು ಆರ್ ಬಿ ಐ ಹೇಳಿದೆ.
ಓದಿ : ಪಶ್ಚಿಮಬಂಗಾಳ ಚುನಾವಣಾ ಪ್ರಚಾರ: ನಟ ಮಿಥುನ್ ಚಕ್ರವರ್ತಿಗೆ “ವೈ ಪ್ಲಸ್” ಕಮಾಂಡೋ ಭದ್ರತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
High Court: ಪ್ರಜ್ವಲ್ “ಮಾಸ್ ರೆಪಿಸ್ಟ್’ ಹೇಳಿಕೆ: ರಾಹುಲ್ ತುರ್ತು ವಿಚಾರಣೆ ಇಲ್ಲ!
Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ
Karnataka; ರಾಜ್ಯ ಟೆನಿಸ್ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ
Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಎಂಆರ್ಐ ಸೇವೆ ವ್ಯತ್ಯಯ
Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.