![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 13, 2021, 8:24 AM IST
ನಟ ರಕ್ಷಿತ್ ಶೆಟ್ಟಿ ಈಗ ಲವ್ನಲ್ಲಿ ಬಿದ್ದಿದ್ದಾರೆ. ಅದು ಇಂಟೆನ್ಸ್ ಲವ್ಸ್ಟೋರಿ. ತನ್ನ ಪ್ರೀತಿಗಾಗಿ ವಿಭಿನ್ನ ಅವತಾರವೆತ್ತಲಿದ್ದಾರೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಇದು ರಕ್ಷಿತ್ ಶೆಟ್ಟಿಯ ಹೊಸ ಸಿನಿಮಾದ ಸ್ಟೋರಿಲೈನ್.
ರಕ್ಷಿತ್ ಇಷ್ಟು ವರ್ಷಗಳ ಸಿನಿಮಾ ಜರ್ನಿಯಲ್ಲಿ ಔಟ್ ಅಂಡ್ ಔಟ್ ಲವ್ಸ್ಟೋರಿ ಮಾಡಿಲ್ಲ. ಆದರೆ, ಈ ಬಾರಿ ಇಂಟೆನ್ಸ್ ಲವ್ ಸ್ಟೋರಿಯೊಂದನ್ನು ಮಾಡಲು ಮುಂದಾಗಿದ್ದಾರೆ. ಅದು “ಸಪ್ತಸಾಗರದಾಚೆ ಎಲ್ಲೋ’ ಮೂಲಕ. ಹೇಮಂತ್ ರಾವ್ ನಿರ್ದೇಶನದ “ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಮುಹೂರ್ತ ಶುಕ್ರವಾರ ನಡೆದಿದೆ. ಈ ಮೂಲಕ “ಗೋಧಿ ಬಣ್ಣ…’ ನಂತರ ಮತ್ತೂಮ್ಮೆ ಈ ಜೋಡಿ ಒಂದಾಗಿದೆ.
ಇದನ್ನೂ ಓದಿ:ಮೊದಲ ದಿನವೇ ‘ರಾಬರ್ಟ್’ ಪೈಸಾ ವಸೂಲಿ : ಫಸ್ಟ್ ಡೇ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ ?
ಈ ಬಾರಿ ಹೇಮಂತ್ ನಟ ರಕ್ಷಿತ್ ಶೆಟ್ಟಿಯವರನ್ನು ಲವರ್ ಬಾಯ್ ಆಗಿ ತೋರಿಸಲು ಹೊರಟಿದ್ದಾರೆ. ಹಾಗಂತ ರೆಗ್ಯುಲರ್ ಶೈಲಿಯ ಲವ್ ಸ್ಟೋರಿಯಲ್ಲ. ಹೊಸ ಬಗೆಯಲ್ಲಿ ಲವ್ಸ್ಟೋರಿ ಹೇಳಲಿದ್ದಾರೆ. ಪ್ರೀತಿಯೊಂದರ ತೀವ್ರತೆ, ಅದರ ಸೌಂದರ್ಯ, ಸಂಬಂಧಗಳ ಸೂಕ್ಷ್ಮತೆ … ಹೀಗೆ ಹಲವು ಅಂಶಗಳನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದಿನ ಲವ್ಸ್ಟೋರಿಯೊಂದಿಗೆ ಸಿನಿಮಾ ಸಾಗಲಿದೆ. ಈ ಸಿನಿಮಾದಲ್ಲಿ ರಕ್ಷಿತ್ ಎರಡು ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಗೆಟಪ್ಗಾಗಿ ಈಗಾಗಲೇ ಸುಮಾರು 10 ಕೆ.ಜಿ.ತೂಕ ಇಳಿಸಿಕೊಂಡಿರುವ ರಕ್ಷಿತ್, ಇನ್ನೊಂದು ಗೆಟಪ್ಗೆ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು ರಕ್ಷಿತ್ ತಾವು ಹೊಸದಾಗಿ ಆರಂಭಿಸಿರುವ “ಪರಂವಾ ಪಿಕ್ಚರ್’ನಡಿ ನಿರ್ಮಾಣ ಮಾಡಲಿದ್ದಾರೆ.
ನಿರ್ದೇಶಕ ಹೇಮಂತ್ ಹಾಗೂ ರಕ್ಷಿತ್ ಇಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿರುವ ಖುಷಿ ಹಾಗೂ ಹೊಸ ಬಗೆಯ ಕಥೆಯ ಬಗ್ಗೆ ಹೇಳಿಕೊಂಡರು.
ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದ್ದು, ಒಂಭತ್ತು ಹಾಡುಗಳನ್ನು ನೀಡಲಿದ್ದಾರಂತೆ. ಅದ್ವೈತ್ ಅವರ ಛಾಯಾಗ್ರಹಣ, ಉಲ್ಲಾಸ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರು, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.