ಮೌಸ್‌ ಹಿಡಿವ ಕೈಯಲ್ಲಿ ಪೇಂಟಿಂಗ್‌ ಬ್ರಷ್‌

ಸದ್ದಿಲ್ಲದೆ ಸೇವಾನಿರತ ಯುವ ಉದ್ಯಮಿಗಳು | ವೀಕೆಂಡ್‌ನ‌ಲ್ಲಿ ಹಂಪ್‌, ಜೀಬ್ರಾ ಕ್ರಾಸಿಂಗ್‌ಗೆ ಬಣ್ಣ ಲೇಪನ

Team Udayavani, Mar 13, 2021, 11:15 AM IST

ಮೌಸ್‌ ಹಿಡಿವ ಕೈಯಲ್ಲಿ ಪೇಂಟಿಂಗ್‌ ಬ್ರಷ್‌

ಬೆಂಗಳೂರು: “ಅಯ್ಯೋ ಏನ್ರೀ, ಮುಂದೆ ಹಂಪ್‌ ಇರೋದು ಕಾಣಿಸಲಿಲ್ವಾ? ಹಂಪ್‌ ಇರುವ ಕಡೆ ಗುರುತು ಮಾಡೋಕೆ ಏನು ರೋಗ ಈ ಆಡಳಿತಕ್ಕೆ.. ಎಂದು ಶಪಿಸುವ ಘಟನೆಗಳು ಅನುಭವಕ್ಕೆ ಬಂದಿರಬೇಕು ಅಲ್ಲವೇ?ಹೌದು, ಬೈಕ್‌, ಕಾರು, ಆಟೋ ಸೇರಿದಂತೆ ಇತರೆ ವಾಹನಗಳಲ್ಲಿ ಪ್ರಯಾಣಿಸುವಾಗ ಸ್ಪೀಡ್‌ ಬ್ರೇಕರ್‌ ಗುರುತು ಕಾಣದೆ, ವಾಹನ ಚಾಲಕರು ಈ ರೀತಿಯ ಘಟನೆ ಎದುರಿಸಿಯೇ ಇರುತ್ತಾರೆ. ಇದನ್ನೆಲ್ಲಾ, ಗಮನಿಸಿದ ಬೆಂಗಳೂರಿನ ಜೆ.ಪಿ.ನಗರದ ಯುವ ಉದ್ಯಮಿ ಮತ್ತು ಸಹೋದ್ಯೋಗಿಗಳು (ಕೋಡ್‌ ಆಫ್ ಕಂಡಕ್ಟ್-ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿ ಉದ್ಯಮಿಗಳು) ರಾಜಧಾನಿಯಲ್ಲಿ ಸದ್ದಿಲ್ಲದೇ, ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಸದ್ದಿಲ್ಲದೆ ಸೇವೆ: ಸಿಲಿಕಾನ್‌ ಸಿಟಿಯಲ್ಲಿ ಎಲ್ಲೆಲ್ಲಿ ಸ್ಪೀಡ್‌ ಬ್ರೇಕರ್‌, ಜೀಬ್ರಾ ಕ್ರಾಸಿಂಗ್‌ ಇವೆ. ಅಲ್ಲಿ ಗುರುತು ಮಾಡಲಾಗಿದೆಯೇ? ಇಲ್ಲವೇ ಎಂಬ ಬಗ್ಗೆ ಉದ್ಯಮಿಗಳು, ಮೊದಲು ಮಾಹಿತಿ ಸಂಗ್ರಹಿಸುತ್ತಾರೆ. ಬಳಿಕ, ತಮ್ಮ ವೈಯಕ್ತಿಕ ಹಣ ಬಳಸಿಕೊಂಡು ಸ್ವತಃ ತಾವೇ, ಕೈಯಲ್ಲಿ ಹಗ್ಗ, ಪೇಯಿಂಟ್‌ ಡಬ್ಬ, ಬ್ರಷ್‌ ಹಿಡಿಡು ಗುರುತು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ವಾಹನ ಸವಾರರು, ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಇವರು ವೈಯಕ್ತಿಕ ಹಣ ವ್ಯಯ ಮಾಡಿ, ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದ್ದಾರೆ.

ಅಪಘಾತಕ್ಕೆ ಆಹ್ವಾನ?: ಬೆಂಗಳೂರಿನಲ್ಲಿ ಜೀಬ್ರಾ ಕ್ರಾಸಿಂಗ್‌ ಮತ್ತು ಹಂಪ್‌ ಗುರುತು ಕಾಣದ ಸಾಕಷ್ಟು ರಸ್ತೆಗಳಿವೆ. ಇಲ್ಲಿ ಅನೇಕ ಅಪಘಾತಗಳು ನಡೆದಿದ್ದು, ಕೆಲವಾಹನ ಸವಾರರು ಪ್ರಾಣ ತೆತ್ತ ಘಟನೆಯೂ ನಡೆದಿದೆ. ಬೈಕ್‌ ಸವಾರರು ಹೆಚ್ಚು ಈ ಅಪಘಾತಗಳಿಗೆ ಆಹ್ವಾನಿತರಾಗಿದ್ದಾರೆ. ಸೊಂಟ ಮುರಿತ, ಕೈ ನೋವು, ಹಲ್ಲು ಮುರಿತ ಮತ್ತು ತಲೆಗೆ ಪೆಟ್ಟು ಮಾಡಿಕೊಂಡವರ ಪಟ್ಟಿಯೂ ದೊಡ್ಡದಿದೆ. ಕಾರು ಹಾಗೂ ಬಸ್‌ನ ಮುಂಬದಿ ಸೀಟ್‌ನಲ್ಲಿ ಕುಳಿತವರು ಈ ರೀತಿಯ ಅನುಭವಕ್ಕೆ ಒಳಗಾಗಿದ್ದಾರೆ.

ಜನಪ್ರತಿಧಿಗಳು ಕಣ್ತೆರೆಯಲಿ: ಚುನಾವಣೆ ವೇಳೆ ಮತಕ್ಕಾಗಿ ನಾಗರಿಕರೆಡೆ ಹೆಜ್ಜೆ ಹಾಕುವ ಜನಪ್ರತಿನಿಧಿ ಗಳು, ಬಳಿಕ ಕೈಗೆಟುಕದಂತಾಗುತ್ತಾರೆ. ನಾಗರಿಕರ ಸಮಸ್ಯೆ ಆಲಿಸಿ ಸುಮ್ಮನಾಗುವ ಆಡಳಿತ ರಸ್ತೆ ನಿಯಮ ಫ‌ಲಕಗಳು, ಗುರುತು ಸೇರಿದಂತೆ ವಿವಿಧ ನಿತ್ಯ ಕಾರ್ಯಗಳ ಬಗ್ಗೆ ಅಗತ್ಯವಾಗಿ ಗಮನ ಹರಿಸಬೇಕಿದೆ.

250 ಕಡೆ ಪೇಂಟಿಂಗ್‌ ಗುರಿ ;

ನಗರದ ಜಯನಗರ 9ನೇ ಬ್ಲಾಕ್‌, ಜೆ.ಪಿ.ನಗರ, ಜೆ.ಪಿ.ನಗರ ಮಿನಿ ಫಾರೆಸ್ಟ್‌ ರಸ್ತೆ, ಜಯನಗರ ಈಸ್ಟ್‌, ಉತ್ತರಹಳ್ಳಿ ಮುಖ್ಯ ರಸ್ತೆ, ತಿಲಕ್‌ ನಗರ, ಭೈಸಂದ್ರ, ಪುಟ್ಟೇನಹಳ್ಳಿ ಸೇರಿಂತೆ ಈಗಾಗಲೇ 31 ಕಡೆ ಗುರುತೇ ಕಾಣದ ಸ್ಪೀಡ ಬ್ರೇಕರ್‌ ಹಾಗೂ ಜೀಬ್ರಾ ಕ್ರಾಸಿಂಗ್‌ಗಳಿಗೆ ಪೇಂಟಿಂಗ್‌ ಮಾಡಲಾಗಿದೆ. ಈ ರೀತಿಯ ಸಮಸ್ಯೆ ಕುರಿತು ಸಾಕಷ್ಟು ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದ್ದು, 250 ಕಡೆ ಗುರುತು ಮಾಡವ ಗುರಿ ಹೊಂದಲಾಗಿದೆ ಎಂದು ಯುವ ಉದ್ಯಮಿ ಅರ್ಜುನ್‌ ಎಂ.ಎಸ್‌ ತಿಳಿಸಿದರು.

ಒಮ್ಮೆ ಉತ್ತರಹಳ್ಳಿ ರಸ್ತೆಯಲ್ಲಿ ಜನ ಗುಂಪು ಕಟ್ಟಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ, ವೃದ್ಧ ದಂಪತಿ ಅಪಘಾತಕ್ಕೆ ಒಳಗಾಗಿದ್ದರು. ಹಂಪ್‌ ಗುರುತು ಕಾಣದೆ, ದಿಢೀರನೆ ಬ್ರೇಕ್‌ ಹಾಕಿದ ಪರಿಣಾಮ ಹಿಂದಿನಿಂದ ಬಂದ ವಾಹನವೊಂದು ವೃದ್ಧ ದಂಪತಿ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದು ತಿಳಿಯಿತು. ಈ ಘಟನೆ ನಮ್ಮ ಕೆಲಸಕ್ಕೆ ಪ್ರೇರಣೆ –ಅರ್ಜುನ್‌ ಎಂ.ಎಸ್‌., ಯುವ ಉದ್ಯಮಿ, ಜೆ.ಪಿ.ನಗರ

 

ವಿಕಾಸ್‌ ಆರ್‌.

ಟಾಪ್ ನ್ಯೂಸ್

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

V.kageri

BJP Meeting: ಸಿದ್ದರಾಮಯ್ಯ ರಾಜೀನಾಮೆ ಸೇರಿ 3 ನಿರ್ಣಯ ಅಂಗೀಕಾರ

BJP-Meeting

B.Y.Vijayendra: ಅಧಿವೇಶನದಲ್ಲಿ ಸರಕಾರದ ಬಂಡವಾಳ ಬಯಲು: ಬಿಜೆಪಿ ಗುಡುಗು

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

River

Monsoon Rain: ಆರಿದ್ರ ಅಬ್ಬರಕ್ಕೆ ಜನಜೀವನ ತತ್ತರ,  ಇಬ್ಬರು ಸಾವು

mamata

Governor;ಜು.10ಕ್ಕೆ ಸಿಎಂ ಮಮತಾ ವಿರುದ್ಧ ಮಾನಹಾನಿ ಪ್ರಕರಣ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!

Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

V.kageri

BJP Meeting: ಸಿದ್ದರಾಮಯ್ಯ ರಾಜೀನಾಮೆ ಸೇರಿ 3 ನಿರ್ಣಯ ಅಂಗೀಕಾರ

BJP-Meeting

B.Y.Vijayendra: ಅಧಿವೇಶನದಲ್ಲಿ ಸರಕಾರದ ಬಂಡವಾಳ ಬಯಲು: ಬಿಜೆಪಿ ಗುಡುಗು

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.