ತಾಲೂಕು ಸಾಹಿತ್ಯ ಸಮ್ಮೇಳದಲ್ಲಿ ರಾಜ್ಯ ಕಸಾಪ ಅಭ್ಯರ್ಥಿ ಶೇಖರಗೌಡ ಪರ ಪ್ರಚಾರ: ಆಕ್ರೋಶ
Team Udayavani, Mar 15, 2021, 1:41 PM IST
ಗಂಗಾವತಿ: ಕಸಾಪ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ಸಮ್ಮೇಳನದ ವೇದಿಕೆಯಲ್ಲಿ ಶೇಖರಗೌಡ ಮಾಲೀಪಾಟೀಲ್ ಪರವಾಗಿ ಅವರ ಬಣದ ಕೆಲವರು ವೇದಿಕೆ ಮೇಲೆ ಹಾಗೂ ಸಮ್ಮೇಳನಕ್ಕೆ ಆಗಮಿಸಿದ ಕಸಾಪ ಅಜೀವ ಸದಸ್ಯ ಮತದಾರರಿಗೆ ಶೇಖರಗೌಡ ಮಾಲೀಪಾಟೀಲ್ ಫೋಟೊ ಇರುವ ಕರಪತ್ರಗಳನ್ನು ವಿತರಿಸಿ ಬೆಂಬಲಿಸುವಂತೆ ಕೋರಿದರು.
ಸಮ್ಮೇಳನದಲ್ಲಿ ಕಸಾಪ ರಾಜ್ಯ ಅಭ್ಯರ್ಥಿ ಶೇಖರಗೌಡ ಮಾಲೀಪಾಟೀಲ್ ಪರ ಅವರ ಬೆಂಬಲಿಗರೊಬ್ಬರು ಭಿತ್ತಿ ಪತ್ರಗಳನ್ನು ಅತಿಥಿಗಳಿಗೆ ವಿತರಿಸಿದ್ದು, ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾಯಿತು.
ಕಲ್ಗುಡಿ ಗ್ರಾಮದಲ್ಲಿ ಚಿದಾನಂದ ಅವಧೂತರ ಮಹಾಮಂಟಪದಲ್ಲಿ ನಡೆದ 2ನೇ ದಿನದ ಸಮ್ಮೇಳನದಲ್ಲಿ ಕವಿಗೋಷ್ಠಿಯ ವೇದಿಕೆಯಲ್ಲಿ ಬೆಂಗಳೂರಿನ ಶೇಖರಗೌಡ ಬೆಂಬಲಿಗ ಮಹೇಶ ಎನ್ನುವರು ವೇದಿಕೆ ಮೇಲಿದ್ದ ಅತಿಥಿಗಳಿಗೆ ಚುನಾವಣೆಯ ಕರ ಪತ್ರಗಳನ್ನು ವಿತರಿಸಿ ಪ್ರಚಾರ ನಡೆಸಿದರು. ಶೇಖರಗೌಡ ಅವರು ವೇದಿಕೆ ಮುಂದೆ ಕುಳಿತು ಪ್ರಚಾರ ನಡೆಸಿದರು. ಇದು ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾಯಿತು.
ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ಬಹುತೇಕ ಪದಾಧಿಕಾರಿಗಳ ಹತ್ತಿರ ಶೇಖರಗೌಡ ಮಾಲೀಪಾಟೀಲ್ ಪೊಟೊ ಇರುವ ಕರಪತ್ರ ಕಂಡುಬಂದವು.
ಕರಪತ್ರ ಹಂಚಿದ್ದು ಗೊತ್ತಿಲ್ಲ: ವೇದಿಕೆಯಲ್ಲಿ ನನ್ನ ಪರವಾಗಿ ಚುನಾವಣಾ ಕರಪತ್ರ ಹಂಚಿಕೆ ಮಾಡಿರುವುದು ನನಗೆ ಗೊತ್ತಿಲ್ಲ ಚುನಾವಣೆ ನೀತಿಸಂಹಿತೆ ಇರುವುದರಿಂದ ನಾನು ವೇದಿಕೆಗೆ ಹೋಗಿಲ್ಲ. ಸಮ್ಮೇಳನ ವೀಕ್ಷಣೆ ಮಾಡಲು ಬಂದಿದ್ದೆ. ಯಾರು ಸಹ ಚುನಾವಣೆ ಪ್ರಚಾರಕ್ಕೆ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಉಪಯೋಗುಸಿಕೊಳ್ಳಬಾರದೆಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಶೇಖರಗೌಡ ಮಾಲೀಪಾಟೀಲ್ ಉದಯವಾಣಿ ಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ajekar Case: ಆರೋಪಿ ದಿಲೀಪ್ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು
Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.