ಮೊದಲ ಓದು ಮಕ್ಕಳ ಮಡಿಲಿಗೆ ಹೊಸ ಪುಸ್ತಕಗಳು


Team Udayavani, Mar 17, 2021, 6:36 PM IST

ಮೊದಲ ಓದುಮಕ್ಕಳ ಮಡಿಲಿಗೆ ಹೊಸ ಪುಸ್ತಕಗಳು

ನನ್ನ ಮಗಳು ಸದಾ ನನ್ನ ಮತ್ತು ಆಕೆಯ ಅಜ್ಜಿಯ ಹಣೆಯ ಬೊಟ್ಟು, ಕುಂಕುಮವನ್ನು ತನ್ನ ಕೈಬೆರಳುಗಳಿಂದ  ಕೀಳುತ್ತಾ ತನ್ನ ಮುಖದಲ್ಲೆಲ್ಲಅಂಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ. ಹೀಗಿರುವಾಗ ನಮ್ಮ ಪುಟ್ಟಿಗೆ ವನಿತಾ ರಚಿಸಿರುವ ಪುಸ್ತಕದ ಒಂದು ಪುಟದಲ್ಲಿರುವ ‘ಅಜ್ಜಿಯ ಬೊಟ್ಟು’ ಎನ್ನುವ ಚಿತ್ರ ಅದೆಷ್ಟು ಪುಳಕವನ್ನು ಉಂಟುಮಾಡುತ್ತದೆ ಎಂದರೆ, ಅದನ್ನ ನೋಡಿಯೇ ಆನಂದಿಸಬೇಕಷ್ಟೇ. ಅಜ್ಜನ ಕನ್ನಡಕ ಆಕೆಗೊಂದು ದೊಡ್ಡ ಅಚ್ಚರಿ. ಅಜ್ಜನಹತ್ತಿರ ಇರುವಷ್ಟು ಹೊತ್ತೂ ಹೇಗಾದರೂಮಾಡಿ ಆ ಕನ್ನಡಕವನ್ನು ತಾನೂ ಹಾಕಿಕೊಳ್ಳಲು ಹರಸಾಹಸ ಮಾಡುತ್ತಿರುತ್ತಾಳೆ.

ಹೀಗಿರುವಾಗ ಪುಸ್ತಕದ ಪುಟದಲ್ಲಿ ಅಜ್ಜನ ಕನ್ನಡಕದ ಚಿತ್ರ ಕಂಡಾಗ ಅವಳ ಅಜ್ಜ ಮತ್ತು ಕನ್ನಡಕಇಬ್ಬರೂ ಒಟ್ಟಿಗೆ ಸಿಕ್ಕಷ್ಟು ಖುಷಿ ಮಗಳ ಮುಖದಲ್ಲಿ. ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ- ಮಾವ ಹೀಗೆ ಮನೆಯ ಹಾಗೂ ಕುಟುಂಬದ ಇತರ ಎಲ್ಲ ಸದಸ್ಯರನ್ನೂ ಪರಿಚಯಿಸುವ ಮೊದಲ ಓದು ಪುಸ್ತಕನಮ್ಮೆಲ್ಲರಿಗೂ ನನ್ನ ಮಗಳಿಗೆ ಕಂಡಷ್ಟೇ ಆಪ್ತವಾಗಿ ಕಾಣುತ್ತದೆ. ನನ್ನ ಮಗಳು ಲೆಲಾ, ಚಿಕ್ಕಂದಿನಿಂದಲೂ ಪುಸ್ತಕ- ಪೆನ್ನುಗಳ ಜೊತೆ ಆಟ ಆಡಲು ಶುರು ಮಾಡಿದಳು. ಅವಳಿಗೆ ಓದುವ ಆಸಕ್ತಿಯನ್ನು ಬೆಳೆಸುವ ಸಲುವಾಗಿ ಆಕರ್ಷಕವಾದ, ಕ್ರಿಯಾಶೀಲವಾದ ಪುಸ್ತಕಗಳನ್ನು ತರಲು ಶುರು ಮಾಡಿದೆವು.

ಮಕ್ಕಳಿಗೆ ಬೇರೆ ಭಾಷೆಯಲ್ಲಿ ಆಕರ್ಷಕವಾದ ಪುಸ್ತಕಗಳು ಸಿಗುತ್ತಿದ್ದರೂಕನ್ನಡದಲ್ಲಿ ಅಷ್ಟು ವಿಶೇಷವಾದಂತಹಯಾವುದೇ ಪುಸ್ತಕಗಳು ದೊರಕಿರಲಿಲ್ಲ.ಈ ಸಂದರ್ಭದಲ್ಲಿಯೇ ನಮಗೆ ಪರಿಚಯವಾಗಿದ್ದು ಎಲ್ಲರ ಪುಸ್ತಕ ಪ್ರಕಾಶನ. ಇತ್ತೀಚೆಗೆ ಈ ಪ್ರಕಾಶನ ಮಕ್ಕಳಿಗಾಗಿ ರುಚಿ ಮತ್ತು ಮೊದಲುಓದು ಎಂಬ ಪುಸ್ತಕಗಳನ್ನು ಹೊರತಂದಿದೆ. ಇವನ್ನು ರಚಿಸಿದವರು ವನಿತಾ ಅಣ್ಣಯ್ಯ ಯಾಜಿ. ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ವನಿತ ಅನೇಕ ಶಾಲೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ರಚಿಸಿರುವ ಪುಸ್ತಕಗಳು ಮಕ್ಕಳಿಗೆ ತುಂಬಾ ಆಪ್ತವಾಗಲು ಅನೇಕ ಕಾರಣಗಳಿವೆ. ಈ ಪುಸ್ತಕಗಳನ್ನು ವನಿತಾಅವರು ರಚಿಸಿದ್ದು ತಮ್ಮ ಮಗಳು ಸುರಗಿಗಾಗಿ. ಮಗಳ ಕಲಿಕೆಯ ದೃಷ್ಟಿಯಿಂದ ಮಗಳಿಗೋಸ್ಕರವೇ ತಾವೇ ಕೈಯಲ್ಲಿ ಚಿತ್ರಿಸಿ ಬಟ್ಟೆಯ ಮುಖಪುಟವನ್ನು ಹೊದಿಸಿ ತಯಾರು ಮಾಡಿದ ಪುಸ್ತಕಗಳು ಇವು. ಚಿಕ್ಕ ಮಕ್ಕಳ ಪುಟ್ಟ ಬೆರಳುಗಳಿಗೆ ಪುಸ್ತಕದ ಪುಟಗಳನ್ನು ತಿರುಗಿಸುವುದುಸುಲಭವಾಗಲಿ ಎನ್ನುವ ಉದ್ದೇಶದಿಂದ ಪುಸ್ತಕದ ಪುಟಗಳನ್ನು ರಟ್ಟಿನಲ್ಲಿಮುದ್ರಿಸಲಾಗಿದೆ. ವರ್ಣರಂಜಿತ ಚಿತ್ರಗಳು ಮಕ್ಕಳ ಗಮನವನ್ನು ತಕ್ಷಣವೇ ಸಳೆಯುತ್ತವೆ.

 

ಮಧು ಜಿ ಸಿ

ಟಾಪ್ ನ್ಯೂಸ್

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Kaup LaxmiJanardhana Temple: Manohar Shetty elected as Management Committee Chairman

Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.