30 ವರ್ಷದ ಬಳಿಕ ಮನೆ ಸೇರಿಸಿದ ಯೋಧರು!


Team Udayavani, Mar 22, 2021, 7:50 AM IST

30 ವರ್ಷದ ಬಳಿಕ ಮನೆ  ಸೇರಿಸಿದ ಯೋಧರು!

ಹೊಸದಿಲ್ಲಿ: ಭಾರತೀಯ ಯೋಧರು ದೇಶ ರಕ್ಷಣೆಯ ಜತೆಜತೆಗೇ ತಮ್ಮ ಮಾನವೀಯ ವರ್ತನೆಯ ಕಾರಣಕ್ಕೆ ವಿಶ್ವಾದ್ಯಂತ ಗೌರವ ಪಡೆದಿದ್ದಾರೆ. ಅಂತಹದ್ದೊಂದು ಅತ್ಯಪೂರ್ವ ಮಾನವೀಯ ನಡತೆಯ ಕಾರಣಕ್ಕೆ ಇಂಡೋ- ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯ ಮೂವರು ಯೋಧರಿಗೆ ಸ್ಮರಣಿಕೆ, ಪದಕಗಳನ್ನು ನೀಡಿ ಗೌರವಿಸಲಾಗಿದೆ. ವಿಶೇಷವೆಂದರೆ ಇದರಲ್ಲಿ ಇಬ್ಬರು ಕನ್ನಡಿಗರು. ಈ ಮೂವರು ಸೇರಿ; 30 ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಬೇರ್ಪಟ್ಟು ಅಲೆಯುತ್ತಿದ್ದ ಕರ್ನಾಟಕದ ಕೆಂಚಪ್ಪ ಗೋವಿಂದಪ್ಪ ಎನ್ನುವವರನ್ನು ಮರಳಿ ಮನೆಗೆ ಮುಟ್ಟಿಸಿದ್ದಾರೆ. ಅಂದಹಾಗೆ ಗೋವಿಂದಪ್ಪನವರ ವಯಸ್ಸು 70!

ಉತ್ತರಾಖಂಡದ ಲೋಹಘಾಟ್‌ನಲ್ಲಿ ಭಾರತ-ಚೀನ ಗಡಿಕಾಯುವ ಐಟಿಬಿಪಿಯಲ್ಲಿ ಈ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. 36ನೇ ಬೆಟಾಲಿಯನ್‌ನಲ್ಲಿದ್ದುಕೊಂಡು ಅತ್ಯಂತ ಹೃದಯ ಸ್ಪರ್ಶಿ ಸೇವೆ ಮಾಡಿದ್ದನ್ನು ಗೌರವಿಸಿ ಐಟಿಬಿಪಿಯ ಮಹಾನಿರ್ದೇಶಕರ ಸ್ಮರಣಿಕೆ ಹಾಗೂ ಬೆಳ್ಳಿ ತಟ್ಟೆಯನ್ನು ನೀಡಲಾಗಿದೆ. ಅದನ್ನು ಅತ್ಯಪೂರ್ವ ಸೇವೆ ಸಲ್ಲಿಸಿದವರಿಗೆ ಮಾತ್ರ ನೀಡಲಾಗುತ್ತದೆ.

ಆಗಿದ್ದೇನು? :

ಉತ್ತರಾಖಂಡದ ಲೋಹಘಾಟ್‌ ಸನಿಹದ ಚಲ್ತಿ ಹಳ್ಳಿಯಲ್ಲಿ ಅತ್ಯಂತ ದುರವಸ್ಥೆಯಲ್ಲಿದ್ದ ಕೆಂಚಪ್ಪ ಗೋವಿಂದಪ್ಪ ಅವ ರ ನ್ನು ಯೋಧ ರಿಯಾಜ್‌ ಸುಂಕದ್‌ ಈ ವರ್ಷಾರಂಭದಲ್ಲಿ ನೋಡಿದ್ದಾರೆ. ಸಣ್ಣ ಹೊಟೇಲ್‌ವೊಂದರಲ್ಲಿ ಗೋವಿಂದಪ್ಪ ನಿಂತುಕೊಂಡಿದ್ದರು. ಆ ದುಸ್ಥಿತಿಯನ್ನು ನೋಡಿ ಕರಗಿದ ರಿಯಾಜ್‌, ಕರ್ನಾಟಕದಿಂದಲೇ ಬಂದಿರುವ ತನ್ನಿಬ್ಬರು ಹಿರಿಯ ಯೋಧರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಕೂಡಲೇ ಕರ್ನಾಟಕದ ಪ್ರೇಮಾನಂದ ಪೈ, ಶರಣ ಬಸವ ರಾಗಾಪುರ ಹೊಟೇಲ್‌ಗೆ ತೆರಳಿದ್ದಾರೆ.

ಆಗ ಟ್ರಕ್‌ ಒಂದರಲ್ಲಿ ಚಲ್ತಿ ಹಳ್ಳಿಗೆ ಈ ವ್ಯಕ್ತಿ ಬಂದಿರುವುದು ತಿಳಿದಿದೆ. ಆದರೆ ಗೋವಿಂದಪ್ಪನವರಿಗೆ ಕನ್ನಡ ಬಿಟ್ಟು ಬೇರೇನೂ ಬರದಿರುವುದರಿಂದ ಯಾರಿಗೂ ಏನೂ ಅರ್ಥವಾಗಿಲ್ಲ. ಪರಿಣಾಮ 1991ರಿಂದ ಇಲ್ಲಿಯವರೆಗೆ ಅವರು ಹೊಟೇಲ್‌ ಸನಿಹದ ಬಸ್‌ನಿಲ್ದಾಣವೊಂದರಲ್ಲಿ ಮಲಗಿ ಕಾಲ ಕಳೆಯುತ್ತಿದ್ದರು. ಹೊಟೇಲ್‌ ಕೆಲಸ ಮಾಡುತ್ತಿದ್ದರಿಂದ ಚಿಲ್ಲರೆ ಹಣವನ್ನು ನೀಡಲಾಗುತ್ತಿತ್ತು. ಆ ವೇಳೆ ತನ್ನವರನ್ನು ಸೇರಲಾಗದ ದುಃಖದಿಂದ ಗೋವಿಂದಪ್ಪ ಆಘಾತಕ್ಕೊಳಗಾಗಿದ್ದು ಕಂಡುಬಂತು. ಆ ವ್ಯಕ್ತಿಯ ಕುರಿತು ಒಂದು ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಲಾಯಿತು. ಕರ್ನಾಟಕದ  ವಕೀಲ ರೊಬ್ಬರು, ಅವರು ತನಗೆ ಗೊತ್ತು. ಧಾರವಾಡದ ಕಲಘಟಗಿ ಹಳ್ಳಿಯವರು ಎಂದು ತಿಳಿಸಿದರು.

ಕೂಡಲೇ ಗೋವಿಂದಪ್ಪನವರನ್ನು ದಿಲ್ಲಿಗೆ ಒಯ್ದು ಅಲ್ಲಿನ ಹೊಟೇಲೊಂದರಲ್ಲಿ ಉಳಿಸಿ, ûೌರ, ಸ್ನಾನ ಮಾಡಿಸಿ, ಹೊಸಬಟ್ಟೆ ಹಾಕಿಸಿ, ಕರ್ನಾಟಕದ ರೈಲಿನಲ್ಲಿ ಕರೆದೊಯ್ದಿದ್ದಾರೆ. ಅಂತಿಮವಾಗಿ ಕುಟುಂಬಕ್ಕೆ ತಲುಪಿಸಿದ್ದಾರೆ. ಗೋವಿಂದಪ್ಪನವರನ್ನು ಮನೆ ಸೇರಿಸಲು ಒಟ್ಟು 2,000 ಕಿ.ಮೀ. ದೂರವನ್ನು ಯೋಧರು ಕ್ರಮಿಸಿದ್ದಾರೆ! ಗೋವಿಂದಪ್ಪನವರಿಗೆ 4 ಗಂಡು, 2 ಹೆಣ್ಣು ಸೇರಿ ಒಟ್ಟು ಆರು ಮಕ್ಕಳು. ಅವರು 1991ರಲ್ಲೇ ಕೆಲಸ ಹುಡುಕಿಕೊಂಡು ಊರುಬಿಟ್ಟಿದ್ದರು. ಮೊದಲು ಮಹಾರಾಷ್ಟ್ರಕ್ಕೆ ಹೋಗಿ, ಅನಂತರ ಉತ್ತರಾಖಂಡ ಸೇರಿಕೊಂಡಿದ್ದರು.

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.