ಸವಾಲಾಯ್ತು ಕೋಡಿ ಸೇತುವೆ ಕಾಮಗಾರಿ


Team Udayavani, Mar 24, 2021, 3:08 AM IST

ಸವಾಲಾಯ್ತು ಕೋಡಿ ಸೇತುವೆ ಕಾಮಗಾರಿ

ಕುಂದಾಪುರ: ವಿನಾಯಕ ಥಿಯೇಟರ್‌ ಬಳಿಯಿಂದ ಕೋಡಿಗೆ ಹೋಗುವ ರಸ್ತೆಯಲ್ಲಿ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಸವಾಲಾಗಿ ಪರಿಣಮಿಸಿದೆ.

ಫ್ಯಾಕ್ಟರಿ, ಬೀಚ್‌, ಶಾಲೆ, ದೇವಾಲಯ ಸೇರಿದಂತೆ ಮನೆಗಳಿರುವ ಪ್ರದೇಶಕ್ಕೆ ಹೋಗುವ ಘನ ವಾಹನಗಳು ಸದಾ ಓಡಾಡುವ ರಸ್ತೆ ಇದು. ಸಮುದ್ರಕ್ಕಿಂತ ಹೆಚ್ಚು ದೂರದಲ್ಲಿ ಇಲ್ಲದ ಕಾರಣ, ಹಿನ್ನೀರು ಬರುವ ಕಾರಣ ಇಲ್ಲಿ ಕಾಮಗಾರಿ ನಿರ್ವಹಣೆ ಎಲ್ಲ ಕಡೆಯಂತೆ ಸಾಧ್ಯವಿಲ್ಲ. ಈ ಹಿಂದೆ ಮಣ್ಣು ಪರೀಕ್ಷೆ ನಡೆಸಿದಾಗ ಕಲ್ಲು ದೊರೆತಿದೆ ಎಂದು ವರದಿ ಬಂದು ಅದರ ಅನ್ವಯ ಸೇತುವೆ ರಚನೆಗೆ ವಿನ್ಯಾಸ ಮಾಡಲಾಗಿತ್ತು. ಆದರೆ ಕಾಮಗಾರಿ ಮಾಡುವ ವೇಳೆ ಸಮೀಪದಲ್ಲೇ ವಿದ್ಯುತ್‌ ಕಂಬ, ಮನೆ, ಮರಗಳು, ಆವರಣಗೋಡೆ ಇತ್ಯಾದಿಗಳಿದ್ದು ಆತಂಕವಾಗಿದೆ. ಎಷ್ಟು ಆಳ ಮಾಡಿದರೂ ನೀರು ಹರಿದು ಬಂದು ಸಮಸ್ಯೆಯಾಗುತ್ತಿದೆ. ವಿಸ್ತಾರ ಮಾಡಿದಂತೆ ಆವರಣ ಗೋಡೆಗಳು ಬಿರುಕು ಬಿಡುತ್ತಿದ್ದು ಸಮೀಪದ ಮನೆಗಳಿಗೂ ಆತಂಕದ ವಾತಾವರಣ ಉಂಟಾಗಿದೆ.

ಇತರೆಡೆ ಸೇತುವೆ ರಚಿಸಿದಂತೆ ಆಳ ಮಾಡದೇ ಪಿಲ್ಲರ್‌ ಹಾಕಿದರೆ ಇಲ್ಲಿ ಬಾಳಿಕೆ ಬರುವುದು ಕಷ್ಟ ಎನ್ನುವುದು ಸ್ಥಳೀಯರ ಅಭಿಪ್ರಾಯ. ಆನಗಳ್ಳಿ ಸೇತುವೆ ರಚಿಸಿದಂತೆ ನೀರಿನಲ್ಲಿ ಅಥವಾ ನೀರು ನಿಲ್ಲಿಸಿ ಸೇತುವೆಗೆ ಪಿಲ್ಲರ್‌ ಹಾಕಬೇಕು ಎನ್ನುತ್ತಾರೆ ಇಲ್ಲಿನ ಜನ. ಪಂಚಾಂಗ ಹಾಕಿದಾಗ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಹರ್ಷವರ್ಧನ, ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಮಂಜು ಬಿಲ್ಲವ, ಗೋರಕ್ಷಾ ಪ್ರಮುಖ್‌ ಮಹೇಶ್‌ ಶೆಣೈ, ಮಹೇಶ್‌ ಪೂಜಾರಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಮಗಾರಿಯನ್ನು ಪರಿಶೀಲಿಸಿದ ಎಂಜಿನಿಯರ್‌ ಪೂರ್ಣಪ್ರಮಾಣದಲ್ಲಿ ಪಂಚಾಂಗ ತೆಗೆಸಿದ್ದು ಮತ್ತೆ ಆಳ ಮಾಡಿ ಪಂಚಾಂಗ ಹಾಕಲು ಸೂಚಿಸಿದ್ದಾರೆ. 70 ಚೀಲದಷ್ಟು ಸಿಮೆಂಟ್‌, ಮರಳು, ಕಬ್ಬಿಣ, ಜಲ್ಲಿ ಎಂದು ಹಾಕಿದ್ದು ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಹಾಗಿದ್ದರೂ ಗುಣಮಟ್ಟದಲ್ಲಿ ರಾಜಿ ಆಗಲು ಬಿಡದೆ, ಘನ ವಾಹನಗಳು ಹೋಗುವ ಸೇತುವೆ ಆದ್ದರಿಂದ ಕಾಮಗಾರಿ ಸೂಚಿಸಿದ ರೀತಿಯಲ್ಲಿಯೇ ಆಗಬೇಕೆಂದು ಲೋಕೋಪಯೋಗಿ ಇಲಾಖೆ ಸೂಚಿಸಿದೆ. ಅದರಂತೆ ಕಾಮಗಾರಿ ನಡೆಯುತ್ತಿದೆ.

ಆಳ ತೆಗೆದಾಗ ಕೆಸರು ಬರುತ್ತಿದೆ, ನೀರು ನಿಲ್ಲುತ್ತದೆ. ಕಡಿಮೆ ಆಳ ತೆಗೆದರೆ ಪಿಲ್ಲರ್‌ ಗಟ್ಟಿಯಾಗದು ಎನ್ನುವ ಸಂಶಯ ಇದೆ. ಒಂದೆಡೆ ನೀರು ನಿಯಂತ್ರಣಕ್ಕೆ ದೊರೆಯುತ್ತಿಲ್ಲ. ಅದರ ಮೇಲೆ ಕಾಂಕ್ರೀಟ್‌ ಹಾಕುವಂತ್ತಿಲ್ಲ. ಇದೆಲ್ಲ ಸವಾಲುಗಳ ಮಧ್ಯೆ ಮಳೆಗಾಲಕ್ಕಿಂತ ಮೊದಲೇ ಕಾಮಗಾರಿ ಪೂರೈಸಿ ವಾಹನ ಓಡಾಟಕ್ಕೆ ಬಿಟ್ಟುಕೊಡಬೇಕಾದ ಅನಿವಾರ್ಯವೂ ಇದೆ. ಕಾಮಗಾರಿಯ ಗುಣಮಟ್ಟ ಕಾಪಾಡುವ ಜತೆಗೆ ಸ್ಥಳೀಯವಾಗಿ ಆಗುತ್ತಿರುವ ನೈಸರ್ಗಿಕ ತೊಂದರೆಗಳನ್ನು ನಿವಾರಿಸಿ, ಹತ್ತಿರದ ಮನೆಗಳಿಗೆ ಅಡಚಣೆಯಾಗದಂತೆ ಕಾಮಗಾರಿ ಮುಗಿಸುವ ಹೊಣೆಗಾರಿಕೆ ಇಲಾಖೆ ಹಾಗೂ ಗುತ್ತಿಗೆದಾರರ ಮೇಲಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.