ಯಲಬುರ್ಗಾದಲ್ಲಿ ಎರಡು ಹೊಸ ಜಿಪಂ ಕ್ಷೇತ್ರ

ಐದಕ್ಕೇರಿದ ಜಿಪಂ ಕ್ಷೇತ್ರಗಳ ಸಂಖ್ಯೆ

Team Udayavani, Mar 24, 2021, 3:14 PM IST

ಯಲಬುರ್ಗಾದಲ್ಲಿ ಎರಡು ಹೊಸ ಜಿಪಂ ಕ್ಷೇತ್ರ

ಯಲಬುರ್ಗಾ: ಒಣಬೇಸಾಯ ಕ್ಷೇತ್ರ ಹೊಂದಿದ, ಬಿಸಿಲು ನಾಡು ಎಂಬ ಖ್ಯಾತಿಗೆ ಪ್ರಸಿದ್ಧಿಯಾದ ತಾಲೂಕಿನಲ್ಲಿ ಇದೀಗ ಜಿಪಂ, ತಾಪಂ ಚುನಾವಣೆಯ ಚರ್ಚೆ ಜೋರಾಗಿ ನಡೆದಿದೆ. ಜಿಪಂ, ತಾಪಂಕ್ಷೇತ್ರಗಳ ಪುನರ್‌ವಿಂಗಡನೆ ಕಾರ್ಯ ನಡೆಯುತ್ತಿದ್ದು,ತಾಲೂಕಿನಲ್ಲಿ ಎರಡು ನೂತನ ಜಿಪಂ ಕ್ಷೇತ್ರಗಳು ರಚನೆಯಾಗುವ ಸಾಧ್ಯತೆ ಇದೆ.

ನೂತನವಾಗಿ ಬೇವೂರು, ಬಳೂಟಗಿಗೆ ಜಿಪಂ ಕ್ಷೇತ್ರಗಳ ಕೇಂದ್ರ ಸ್ಥಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಾಡಳಿತ ಸಲ್ಲಿಸಿರುವ ಈ ಪ್ರಸ್ತಾವನೆ ಸಿಂಧುವಾದರೆಬೇವೂರು, ಬಳೂಟಗಿ ನೂತನ ಜಿಪಂ ಕ್ಷೇತ್ರಗಳೆಂದು ಅಂತಿಮಗೊಳ್ಳಲಿದೆ.

ಬೇವೂರಿಗೆ ಒಲಿದ ಭಾಗ್ಯ: ಬೇವೂರು ಗ್ರಾಮ ಯಲಬುರ್ಗಾ ತಾಲೂಕಿನಲ್ಲೇ ದೊಡ್ಡ ಗ್ರಾಮವಾಗಿದೆ.ಪೊಲೀಸ್‌ ಠಾಣೆ, ಶಾಲೆ, ಕಾಲೇಜು, ರೈತ ಸಂಪರ್ಕಕೇಂದ್ರ, ಆರೋಗ್ಯ ಕೇಂದ್ರ ಸೇರಿದಂತೆ ಹತ್ತುಹಲವಾರು ಸೌಲಭ್ಯಗಳನ್ನು ಹೊಂದಿದೆ. ಬೇವೂರುಹಾಗೂ ಸುತ್ತಮುತ್ತಲಿನ ಜನತೆ ಬೇವೂರು ಗ್ರಾಮವನ್ನುಹೋಬಳಿ ಕೇಂದ್ರ ಮಾಡುವಂತೆ ಆಗ್ರಹಿಸಿ ಹೋರಾಟಮಾಡುತ್ತಿದ್ದಾರೆ. ಈ ಮಧ್ಯೆ ಬೇವೂರು ಜಿಪಂ ಕ್ಷೇತ್ರಕ್ಕೆಪ್ರಸ್ತಾವನೆ ಸಲ್ಲಿಸಿದ್ದು, ಆ ಭಾಗದ ಜನತೆಗೆ ಸಂತಸ ತಂದಿದೆ.

ಜಿಪಂ ಕ್ಷೇತ್ರಗಳು: ಚುನಾವಣಾ ಆಯೋಗ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದರೆ ಮುಧೋಳ, ಹಿರೇವಂಕಲಕುಂಟಾ,ಚಿಕ್ಕಮ್ಯಾಗೇರಿ, ಬೇವೂರು, ಬಳೂಟಗಿ ಜಿಪಂಕ್ಷೇತ್ರಗಳಾಗಲಿವೆ.

12 ತಾಪಂ ಕ್ಷೇತ್ರಗಳು: ಮುಧೋಳ, ಹಿರೇಮ್ಯಾಗೇರಿ,ಬಂಡಿ, ಬಳೂಟಗಿ, ಹಿರೇಅರಳಿಹಳ್ಳಿ,ಹಿರೇವಂಕಲಕುಂಟಾ, ಗಾಣಧಾಳ,ತಾಳಕೇರಿ, ಬೇವೂರು, ಮುರಡಿ, ಗೆದಗೇರಿ, ಚಿಕ್ಕಮ್ಯಾಗೇರಿ ಇವುಗಳು ತಾಪಂ ಕ್ಷೇತ್ರಗಳಾಗಿವೆ. ಈ ಮೊದಲಿದ್ದಕರಮುಡಿ, ಮಾಟಲದಿನ್ನಿ ತಾಪಂಕ್ಷೇತ್ರಗಳನ್ನು ಕೈಬಿಡಲಾಗಿದೆ. ಯಲಬುರ್ಗಾವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕುಕನೂರುಇದೀಗ ಹೊಸ ತಾಲೂಕಾಗಿ ಬೇರ್ಪಟ್ಟಿದ್ದರಿಂದ ಕ್ಷೇತ್ರಗಳಪುನರ್‌ ರಚನೆ ವಿಂಗಡನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಿಪಂ, ತಾಪಂ ಹಾಲಿ ಇರುವ ಸದಸ್ಯರಅವಧಿ ಈ ತಿಂಗಳು ಕೊನೆಗೊಳ್ಳಲಿದೆ.ಮುಂದಿನ ತಿಂಗಳು ಚುನಾವಣೆ ಘೋಷಣೆಯಾಗಲಿದೆ.

ಮೀಸಲಾತಿಯಲ್ಲಿ ಪ್ರಭಾವ: ಯಲಬುರ್ಗಾ ತಾಲೂಕಿನಲ್ಲಿ ಐದು ಜಿಪಂ, 12 ತಾಪಂ ಕ್ಷೇತ್ರಗಳಿಗೆಮೀಸಲಾತಿ ನಿಗದಿಯಲ್ಲಿ ಭಾರಿ ಪ್ರಭಾವ ಬೀರುಕಾರ್ಯಗಳು ನಡೆಯುತ್ತವೆ. ಕಳೆದ ಬಾರಿ ಕ್ಷೇತ್ರ ಪುನರ್‌  ವಿಂಗಡನೆ ಹಾಗೂ ಮೀಸಲಾತಿ ನಿಗದಿ ವೇಳೆ ಬಸವರಾಜರಾಯರಡ್ಡಿ ಶಾಸಕರಾಗಿ ಸಚಿವರು ಆಗಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇತ್ತು ಹೀಗಾಗಿಬಸವರಾಜ ರಾಯರಡ್ಡಿ ಇಚ್ಛಿಸಿದ ಕ್ಷೇತ್ರಗಳ ಪುನರವಿಂಗಡನೆ ಹಾಗೂ ಮೀಸಲಾತಿ ನಿಗದಿಯಲ್ಲಿ ವಿಶೇಷಆಸಕ್ತಿ ವಹಿಸಿದ್ದರು. ಇದೀಗ ಬಿಜೆಪಿ ಸರಕಾರವಿದ್ದುಹಾಲಪ್ಪ ಆಚಾರ್‌ ಶಾಸಕರಾಗಿದ್ದಾರೆ. ಹೀಗಾಗಿ ಈಬಾರಿ ಶಾಸಕ ಹಾಲಪ್ಪ ಆಚಾರ್‌ ಅಣತಿಯಂತೆಕ್ಷೇತ್ರಗಳ ರಚನೆ, ಮೀಸಲಾತಿ ನಿಗದಿಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತದೆ.

ವಿಂಗಡನೆ ಅವೈಜ್ಞಾನಿಕ: ಹೊಸ ಕ್ಷೇತ್ರಗಳ ರಚನೆ ಕ್ಷೇತ್ರಗಳಪುನರವಿಂಗಡನೆ ಕಾರ್ಯ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಂಪರ್ಕವಿಲ್ಲದಊರುಗಳನ್ನು ಸೇರ್ಪಡೆ ಮಾಡಲಾಗಿದೆ. ಬೇಕಾಬಿಟ್ಟಿಮನಸೋ ಇಚ್ಛೆ ವಿಂಗಡಿಸಲಾಗಿದೆ, ಬಳೂಟಗಿ, ಜಿಪಂ ಕ್ಷೇತ್ರಗಳಲ್ಲಿ ಗ್ರಾಮಗಳ ಸೇರ್ಪಡೆ ಅವೈಜ್ಞಾನಿಕವಾಗಿದೆಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಉದಯವಾಣಿ’ಗೆ ಲಭ್ಯವಾದ ಮಾಹಿತಿ ಪ್ರಕಾರ ಯಲಬುರ್ಗಾ ತಾಲೂಕಿನಲ್ಲಿ 5 ಜಿಪಂ ಕ್ಷೇತ್ರ ಹಾಗೂ 12 ತಾಪಂ ಕ್ಷೇತ್ರಗಳ ಪುನರ್‌ ವಿಂಗಡನೆ ಪ್ರಸ್ತಾವನೆಯನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಕಳುಹಿಸಿದ್ದು,ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.ತಾಲೂಕಿನಿಂದ ಕಳುಹಿಸಿದ ಪ್ರಸ್ತಾವನೆಯಲ್ಲಿಕೆಲ ತಿದ್ದುಪಡಿಯಾಗವ ಸಾಧ್ಯತೆಗಳನ್ನು ಸಹ ಅಲ್ಲಗಳೆಯುವಂತಿಲ್ಲ ಎನ್ನಬಹುದು.

 

ಮಲ್ಲಪ್ಪ ಮಾಟರಂಗಿ

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

9-gangavathi

Anegundi ಸ್ವಚ್ಛ ಗ್ರಾಮಕ್ಕೆ ಸಹಕರಿಸಿ: ಸಿಇಓ ರಾಹುಲ್ ರತ್ನಂ ಪಾಂಡೆ;ಗ್ರಾ.ಪಂ. ಸಾಮಾನ್ಯ ಸಭೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.