ಬ್ರೆಟ್‌ ಲೀ ಮೇಲೆ ಅಭಿಮಾನ, ಮಸಾಲೆ ದೋಸೆ ಮೇಲೆ ಆಸೆ… : ಪ್ರಸಿದ್ಧ್ ಕೃಷ್ಣ


Team Udayavani, Mar 25, 2021, 6:30 AM IST

prasidh-krishna

ಪ್ರಸಿದ್ಧ್ ಕೃಷ್ಣ!
ಕರ್ನಾಟಕದ ಈ ವೇಗಿಯ ಹೆಸರು ದಿಢೀರನೇ ಟೀಮ್‌ ಇಂಡಿಯಾದಲ್ಲಿ ಚಾಲ್ತಿಗೆ ಬಂದಿದೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ತಂಡಕ್ಕೆ ಆಯ್ಕೆಯಾಗುವಷ್ಟರಲ್ಲಿ ಮೊದಲ ಪಂದ್ಯದ ಆಡುವ ಬಳಗದಲ್ಲೂ ಕಾಣಿಸಿಕೊಂಡ ಅದೃಷ್ಟಶಾಲಿ. ಅಷ್ಟೇ ಅಲ್ಲ. ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ವಿಕೆಟ್‌ ಪಡೆದ ಭಾರತೀಯ ಬೌಲರ್‌ ಎಂಬ ದಾಖಲೆಗೂ ಪಾತ್ರರಾದರು. ಖಂಡಿತ ಇದೊಂದು ಕನಸಿನ ಆರಂಭ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧಿಗೆ ಬರುವ ಸೂಚನೆಯನ್ನು ಒಂದೇ ಪಂದ್ಯದಲ್ಲಿ ರವಾನಿಸಿದ್ದಾರೆ ಪ್ರಸಿದ್ಧ್ ಕೃಷ್ಣ.

ಸಹಜವಾಗಿಯೇ ಎಲ್ಲರಿಗೂ ಈ ಕ್ರಿಕೆಟಿಗನ ಬಗ್ಗೆ ಕುತೂಹಲ ಹೆಚ್ಚಿದೆ. ಭಾರತ ತಂಡದಲ್ಲಿ ಈಗಾಗಲೇ ಸಾಕಷ್ಟು ಮಂದಿ ವೇಗಿಗಳಿದ್ದಾರೆ. ಅನೇಕರು ಹೊಸಬರು. ಸಾಕಷ್ಟು ಯಶಸ್ಸನ್ನೂ ಕಂಡಿದ್ದಾರೆ. ಸಿರಾಜ್‌, ನಟರಾಜನ್‌, ಠಾಕೂರ್‌, ಸೈನಿ… ಇವರೆಲ್ಲರ ಮಧ್ಯೆ ಈ 25 ವರ್ಷದ ಪ್ರಸಿದ್ಧ್ ಕೃಷ್ಣ ಆಯ್ಕೆಯಾದಾಗ ಅಚ್ಚರಿಯಾದದ್ದು ಸಹಜ. ಆದರೆ ಈ ಆಯ್ಕೆಯನ್ನು ಮೊದಲ ಪಂದ್ಯದಲ್ಲೇ ಸಮರ್ಥಿಸಿಕೊಂಡದ್ದು ಪ್ರಸಿದ್ಧ್ ಹೆಚ್ಚುಗಾರಿಕೆ.

ಆಸ್ಟ್ರೇಲಿಯದ ನಂಟು
25 ವರ್ಷದ ಪ್ರಸಿದ್ಧ್ ಕೃಷ್ಣ ಬ್ರೆಟ್‌ ಲೀ ಅವರನ್ನು ಅತಿಯಾಗಿ ಆರಾಧಿಸುತ್ತಾರೆ. ಅವರ ಪಕ್ಕಾ ಅಭಿಮಾನಿ. ಹಾಗೆಯೇ ಮಸಾಲೆ ದೋಸೆಯನ್ನು ಬಹಳ ಇಷ್ಟಪಡುತ್ತಾರೆ, ಆಸ್ಟ್ರೇಲಿಯದೊಂದಿಗೆ ಈತನದ್ದು ನಿಕಟ ಸಂಬಂಧ ಎನ್ನುತ್ತಾರೆ ತಂದೆ ಮುರಳೀಕೃಷ್ಣ. ಮೊದಲು ಆಲ್‌ರೌಂಡರ್‌ ಆಗಿದ್ದ ಪ್ರಸಿದ್ಧ್ 14 ವರ್ಷದ ಬಳಿಕ ವೇಗದ ಬೌಲಿಂಗನ್ನೇ ಗಂಭೀರವಾಗಿ ತೆಗೆದುಕೊಂಡರು.

11ನೇ ವರ್ಷದಿಂದಲೇ ಪ್ರಸಿದ್ಧ್ ಕೃಷ್ಣನ ಕ್ರಿಕೆಟ್‌ ಮತ್ತು ಬೌಲಿಂಗ್‌ ನಂಟು ಮೊದಲ್ಗೊಳ್ಳುತ್ತದೆ. ಮೊದಲು ಎಂಆರ್‌ಎಫ್ ಫೌಂಡೇಶನ್‌ ಮತ್ತು ಆಸೀಸ್‌ ಮಾಜಿ ವೇಗಿಗಳಾದ ಜೆಫ್ ಥಾಮ್ಸನ್‌, ಗ್ಲೆನ್‌ ಮೆಗ್ರಾತ್‌ ಗರಡಿಯಲ್ಲಿ ಪಳಗುವ ಅವಕಾಶ ಲಭಿಸಿತು.

2017ರಲ್ಲಿ “ಐಡಿಬಿಐ ಫೆಡರಲ್‌ ಬೌಲಿಂಗ್‌ ಫೌಂಡೇಶನ್‌’ನೊಂದಿಗೆ ಪ್ರಸಿದ್ಧ್ ಕೃಷ್ಣ ಮತ್ತೆ ಆಸ್ಟ್ರೇಲಿಯಕ್ಕೆ ಪಯಣಿಸುತ್ತಾರೆ. ತುಷಾರ್‌ ದೇಶಪಾಂಡೆ ಮತ್ತು ಇತರ ಇಬ್ಬರು ವೇಗಿಗಳೂ ಇರುತ್ತಾರೆ. ಅಲ್ಲಿ ಥಾಮ್ಸನ್‌ ಮಾರ್ಗದರ್ಶನ ಲಭಿಸುತ್ತದೆ.

ಬುದ್ಧಿವಂತ ಬೌಲರ್‌
ಮಾಜಿ ಕ್ರಿಕೆಟ್‌ ಆಡಳಿತಾಧಿಕಾರಿ ಮಕರಂದ್‌ ವೈಂಗಣರ್‌ ಹೇಳುವ ಪ್ರಕಾರ, ಬ್ರಿಸ್ಬೇನ್‌ನ “ಕ್ರಿಕೆಟ್‌ ಆಸ್ಟ್ರೇಲಿಯ ಅಕಾಡೆಮಿ’ಯಲ್ಲಿ ತರಬೇತಿ ಲಭಿಸಿದ್ದು ಪ್ರಸಿದ್ದ್ ಗೆ ಭಾರೀ ಲಾಭ ತಂದಿತು.

“ಅವರೋರ್ವ ಜಾಣ್ಮೆಯ ಹಾಗೂ ಬುದ್ಧಿವಂತ ಬೌಲರ್‌. ಮೊದಲ 3 ಓವರ್‌ಗಳಲ್ಲಿ ದಂಡಿಸಿ ಕೊಂಡ ಬಳಿಕ ತಿರುಗಿ ಬಿದ್ದ ರೀತಿಯೇ ಇದಕ್ಕೆ ಸಾಕ್ಷಿ’ ಎನ್ನುತ್ತಾರೆ ಅಂಕಣಕಾರರೂ ಆಗಿರುವ ವೈಂಗಣRರ್‌.

2015ರಲ್ಲೇ ಈ ಬೌಲರ್‌ ಮೇಲೆ ಕಣ್ಣಿಟ್ಟಿದ್ದೆ ಎನ್ನುತ್ತಾರೆ ಎಂಆರ್‌ಎಫ್ನ ಪ್ರಧಾನ ಕೋಚ್‌ ಸೆಂಥಿಲನಾಥನ್‌. ಅಂದು ಬಾಂಗ್ಲಾ “ಎ’ ವಿರುದ್ಧ ಪ್ರಸಿದ್ಧ್ ಮಿಂಚಿನ ಬೌಲಿಂಗ್‌ ನಡೆಸಿದ್ದರು. ಇಂಥದೇ ಪರಾಕ್ರಮವೀಗ ಟೀಮ್‌ ಇಂಡಿಯಾ ದಲ್ಲೂ ಮುಂದುವರಿಯುವ ಸೂಚನೆ ಸಿಕ್ಕಿದೆ.

“ಕಷ್ಟಪಟ್ಟು ಮೇಲೆ ಬಂದಿದ್ದೇನೆ’
“ಎಲ್ಲ ಕ್ರಿಕೆಟಿಗರೂ ಕಷ್ಟಪಟ್ಟು ಮೇಲಕ್ಕೆ ಬರುತ್ತಾರೆ. ಇದಕ್ಕೆ ನಾನೂ ಹೊರತಲ್ಲ. ತಂದೆ, ತಾಯಿ, ಕುಟುಂಬ ಮತ್ತು ಗೆಳೆಯರಿಗೆ ಈ ಆಯ್ಕೆಯನ್ನು ಅರ್ಪಿಸುತ್ತಿದ್ದೇನೆ. ಇವರೇ ನನ್ನಲ್ಲಿ ಪ್ರೋತ್ಸಾಹ ತುಂಬಿದವರು. ಹೆತ್ತವರಂತೂ ಏನೂ ಇಲ್ಲ ಎಂದು ಹೇಳಿದವರೇ ಅಲ್ಲ…’ ಎಂದು ಪ್ರಸಿದ್ಧ್ ಕೃಷ್ಣ “ಉದಯವಾಣಿ’ಯೊಂದಿಗೆ ಹೇಳಿಕೊಂಡಿದ್ದರು. ಇವರ ಯಶಸ್ವಿ ಪದಾರ್ಪಣೆಯ ಬಳಿಕ ತಂದೆ ಮುರಳೀಕೃಷ್ಣ ಮಗನ ಕುರಿತು ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.