ಸ್ವಯಂಚಾಲಿತ ಪಾವತಿಗೆ ಬ್ರೇಕ್
ಆರ್ ಬಿ ಐ ಹೊಸ ನೀತಿಗಳನ್ನು ಪಾಲಿಸದ ಬ್ಯಾಂಕುಗಳು ಹಾಗೂ ಒಟಿಟಿ ಪ್ಲ್ಯಾಟ್ ಫಾರ್ಮ್ ಗಳು
Team Udayavani, Mar 30, 2021, 11:54 AM IST
ನವದೆಹಲಿ: ನೀವು ಮೊಬೈಲ್ ಬಿಲ್, ನೆಟ್ ಫ್ಲಿಕ್ಸ್- ಅಮೆಜಾನ್ನಂತಹ ಒಟಿಟಿ ಸೇವೆಗಳು ಹಾಗೂ ಇತರೆ ಬಿಲ್ಗಳನ್ನು ಆಟೋಮ್ಯಾಟಿಕ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿಸುತ್ತಿ ದ್ದೀರಾ? ಹಾಗಿದ್ದರೆ ಏಪ್ರಿಲ್ ತಿಂಗಳಲ್ಲಿ ನೀವು ಭಾರೀ ಸಮಸ್ಯೆ ಎದುರಿಸ ಬೇಕಾಗಬಹುದು! ಹೌದು. ಗ್ರಾಹಕರ ಆಟೋ ಮ್ಯಾಟಿಕ್ ಪಾವತಿಗೆ ಸಂಬಂಧಿಸಿ ಹೆಚ್ಚುವರಿ ದೃಢೀಕರಣ ನಿಯಮವನ್ನು ಜಾರಿಗೆ ತಂದಿದ್ದ ಆರ್ಬಿಐ, ಮಾ.31ರೊಳಗಾಗಿ ಎಲ್ಲ ಬ್ಯಾಂಕುಗಳು, ಕಾರ್ಡ್ ಜಾಲಗಳು ಹಾಗೂ ಆನ್ ಲೈನ್ ವರ್ತಕರು ಇದನ್ನು ಅನುಸರಿ ಸುವಂತೆ ಹಾಗೂ ಅದಕ್ಕೆ ತಕ್ಕಂತೆ ಸಿಸ್ಟಂಗಳನ್ನು ಮೇಲ್ದರ್ಜೆಗೇರಿಸುವಂತೆ ಸೂಚಿಸಿದೆ. ಆದರೆ, ಬಹುತೇಕ ಬ್ಯಾಂಕುಗಳು ಹಾಗೂ ಇತರೆ ನೆಟ್ ವರ್ಕ್ಗಳು ಇದನ್ನು ಇನ್ನೂ ಜಾರಿ ಮಾಡಿಲ್ಲ. ಹೀಗಾಗಿ, ಏಪ್ರಿಲ್ ಆರಂಭವಾಗುತ್ತಿದ್ದಂತೆ ಗ್ರಾಹಕರ ಖಾತೆಯಿಂದ ಆಟೋಮ್ಯಾಟಿಕ್ ಪೇಮೆಂಟ್ ಸ್ಥಗಿತಗೊಳ್ಳುವುದು ಖಚಿತ. ಗ್ರಾಹಕರು ಪ್ರತಿಯೊಬ್ಬ ವರ್ತಕನ ಪೇಮೆಂಟ್ ಪೇಜ್ಗೆ ಭೇಟಿ ನೀಡಿ, ಬಿಲ್ ಪಾವತಿ ಮಾಡ ಬೇಕಾಗುತ್ತದೆ.
ಓದಿ : ಬಸವಕಲ್ಯಾಣದಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ
ಏನಿದು ನಿಯಮ ?
ಗ್ರಾಹಕರ ಖಾತೆಯಿಂದ ಹಣ ಕಡಿತಗೊಳ್ಳುವ 5 ದಿನಗಳ ಮುಂಚಿತ ವಾಗಿ ಬ್ಯಾಂಕುಗಳು ಆ ಗ್ರಾಹಕರಿಗೆ ನೋಟಿಫಿಕೇಷನ್ ಕಳುಹಿಸಬೇಕು. ಗ್ರಾಹಕ ಅದಕ್ಕೆ ಸಮ್ಮತಿಸಿದ ಬಳಿಕವೇ ಹಣ ಕಡಿತಗೊಳ್ಳಬೇಕು. ಅದರಲ್ಲೂ, 5 ಸಾವಿರ ರೂ.ಗಿಂತ ಹೆಚ್ಚಿನ ಪಾವತಿ ಆಗಬೇಕಿದ್ದರೆ, ಗ್ರಾಹಕರಿಗೆ ಬ್ಯಾಂಕು ಒನ್ ಟೈಂ ಪಾಸ್ ವರ್ಡ್ ಅನ್ನೂ ರವಾನಿಸಬೇಕು ಎನ್ನುವುದು ಆರ್ ಬಿ ಐ ಹೊಸ ನಿಯಮ.
ಯಾವುದರ ಮೇಲೆ ಪರಿಣಾಮ?
ಕ್ರೆಡಿಟ್-ಡೆಬಿಟ್ ಕಾರ್ಡ್, ಒಟಿಟಿ, ಮಾಧ್ಯಮ ಚಂದಾದಾರಿಕೆ, ಯುಟಿಲಿಟಿ ಬಿಲ್ಗಳು, ಎಂಎಸ್ಎಂಇ, ಕಾರ್ಪೊರೇಟ್ಗಳ ಪಾವತಿ ಸೇರಿದಂತೆ ಸುಮಾರು 2 ಸಾವಿರ ಕೋಟಿ ರೂ.ಗಳ ಪಾವತಿ ಮೇಲೆ ಪರಿಣಾಮ ಬೀರಲಿದೆ. ಆದರೆ, ಎನ್ ಪಿಸಿಐ ಪಾವತಿ ವಿಧಾನದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Coldplay, Diljit ಕಾರ್ಯಕ್ರಮದ ನಕಲಿ ಟಿಕೆಟ್ ಮಾರಾಟ: ಬೆಂಗಳೂರು ಸೇರಿ ಹಲವೆಡೆ ಇ.ಡಿ ದಾಳಿ!
Bangaluru: 1 ಕೆ.ಜಿ. ಬೆಳ್ಳಿಗೆ 3,000 ರೂ. ಇಳಿಕೆ
Sensex 662, Nifty 218 ಅಂಕ ಕುಸಿತ: 2ನೇ ತ್ರೈಮಾಸಿಕ ಫಲಿತಾಂಶ ಪರಿಣಾಮ
Ujjivan Small Finance Bank; 233 ಕೋಟಿ ರೂ.ನಿವ್ವಳ ಲಾಭ
First Look:ವಂದೇ ಭಾರತ್ ಸ್ಲೀಪರ್ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!
MUST WATCH
ಹೊಸ ಸೇರ್ಪಡೆ
Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್ ಸಿಂಗ್
Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ
Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.