ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ
Team Udayavani, Apr 3, 2021, 9:11 PM IST
ದಾಂಡೇಲಿ: ಸಮೀಪದ ಅವೇಡಾ ಗ್ರಾಪಂ ವ್ಯಾಪ್ತಿಯ ಕೊಂಡಪಾ ಗ್ರಾಮಸ್ಥರಿಗೆ ಕಳೆದೆರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸ್ಥಳೀಯರು ಬಸವಳಿದಿದ್ದಾರೆ. ಸ್ಥಳೀಯ ಪಂಚಾಯ್ತನವರಿಗೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆಯದ್ದರಿಂದ ನೀರಿನ ಸಮಸ್ಯೆ ಕಳೆದೆರಡು ವರ್ಷಗಳಿಂದ ಹಾಗೆನೇ ಮುಂದುವರಿದಿದೆ.
ಇಲ್ಲಿ 11 ಮನೆಗಳಿದ್ದು, ಪ್ರತಿಮನೆಗಳಿಗೂ ಗ್ರಾಪಂನಿಂದ ನೀರಿನ ನಳದ ಸಂಪರ್ಕ ನೀಡಲಾಗಿತ್ತು. ಆದರೆ ಕಳೆದೆರಡು ವರ್ಷಗಳ ಹಿಂದೆ ಇಲ್ಲಿ ರಸ್ತೆ ಮತ್ತು ಗಟಾರ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿ ನಡೆಯುವಾಗ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಸಮಸ್ಯೆ ತಲೆದೋರಿದೆ. ಇಲ್ಲಿರುವ 11 ಕುಟುಂಬಗಳಲ್ಲಿ ಸಧ್ಯಕ್ಕೆ ಲಕ್ಷ್ಮಣ ಸಾವಂತ ಅವರ ಮನೆಗೆ ಬರುವ ನೀರನ್ನೆ ಎಲ್ಲರೂ ಆಶ್ರಯಿಸಬೇಕಾದ ಸ್ಥಿತಿಯಿದೆ.
ಅಂದ ಹಾಗೆ ಇಲ್ಲಿ ಒಡೆದು ಹೋದ ಪೈಪನ್ನು ದುರಸ್ತಿಗೊಳಿಸಲು ನಿರಾಸಕ್ತಿ ಯಾಕೆ ಎಂಬ ಪ್ರಶ್ನೆಯೂ ಸ್ಥಳೀಯರನ್ನು ಕಾಡತೊಡಗಿದೆ. ಗ್ರಾಮದ ಸಮಸ್ಯೆಗಳಿಗೆ ಅದರಲ್ಲೂ ಮುಖ್ಯವಾಗಿ ಮೂಲಭೂತ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕಾದ ಅವೇಡಾ ಗ್ರಾಪಂ ದಿವ್ಯ ನಿರ್ಲಕ್ಷé ಎದ್ದು ಕಾಣುತ್ತಿದೆ.
ಇನ್ನಾದರೂ ನಿದ್ದೆಯಿಂದ ಎದ್ದು, ಇಲ್ಲಿಯ ನೀರಿನ ಸಮಸ್ಯೆಯಿಂದ ಬಸವಳಿದು ಸುಸ್ತು ಹೊಡೆದ ಕೊಂಡಪಾ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಸ್ಥಳೀಯರಾದ ಲಕ್ಷ್ಮಣ ಸಾವಂತ, ಸುಶೀಲಾ ಸಾವಂತ, ಗಂಗಪ್ಪಾ ವಡ್ಡರ, ಲಕ್ಷ್ಮೀಬಾಯಿ ವಡ್ಡರ, ಸುರೇಖಾ ಮೋರೆ, ಶಂಕರ ಸಿಂಧೆ, ರಾಮು ಸಿಂಧೆ, ಹನುಮಂತ ಅಪ್ಪಗೋಳ, ಬಾಳು ಕರಡಿ ಮತ್ತು ರಾಮಕ್ಕಾ ಜುಜ್ಜುವಾಡಕರ ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಆಗ್ರಹಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!
Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ
Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್
Vaccine: ಇನ್ನೆರಡು ವರ್ಷದೊಳಗೆ ಕೆಎಫ್ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್
Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ
Mangaluru: ಡಿಜಿಟಲ್ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್ ಗಟ್ಟಿ ಕಾಪಿಕಾಡ್
Kasaragod: ಉದ್ಯೋಗ ಭರವಸೆ ನೀಡಿ ವಂಚನೆ; ಸಚಿತಾ ರೈ
Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ
Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.