ಅಂಗಡಿಗೆ ಪರವಾನಿಗೆ ಇದೆ; ಪಾರ್ಕಿಂಗ್‌ಗೆ ಇಲ್ಲ ! ಸಮರ್ಪಕ ನೀತಿ ರೂಪಣೆಯ ಕೊರತೆ


Team Udayavani, Apr 16, 2021, 3:00 AM IST

ಅಂಗಡಿಗೆ ಪರವಾನಿಗೆ ಇದೆ; ಪಾರ್ಕಿಂಗ್‌ಗೆ ಇಲ್ಲ ! ಸಮರ್ಪಕ ನೀತಿ ರೂಪಣೆಯ ಕೊರತೆ

ಮುಂದಾಲೋಚನೆ ಅಥವಾ ದೂರದೃಷ್ಟಿ ಇಲ್ಲದಿರುವುದೇ ಹಲವಾರು ಸಮಸ್ಯೆಗಳಿಗೆ ಮೂಲ ಕಾರಣ. ನಮ್ಮಲ್ಲಿ ಹಲವಾರು, ಅಂಗಡಿ, ಮಳಿಗೆಗಳು ಇವೆ. ಆದರೆ ಅಲ್ಲಿಗೆ ವಾಹನಗಳಲ್ಲಿ ಬಂದರೆ ಅದನ್ನು ನಿಲ್ಲಿಸುವುದಕ್ಕೆ ಜಾಗವೇ ಇಲ್ಲ. ಇದೇ ಇಂದಿನ ಪ್ರಮುಖ ಸಮಸ್ಯೆಯಾಗಿದೆ.

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅಂಗಡಿ, ಮಳಿಗೆಗಳು, ಸರಕಾರಿ ಕಚೇರಿಗಳಿವೆ. ಆದರೆ ಹೆಚ್ಚಿನ ಕಡೆ ಇಲ್ಲಿಗೆ ಬರುವ ಜನರು ವಾಹನ ನಿಲ್ಲಿಸುವುದಕ್ಕೆ ವ್ಯವಸ್ಥೆ ಇಲ್ಲವಾಗಿದೆ. ಇನ್ನು ಪುರಸಭೆಯಿಂದ ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆ ನೀಡಲಾಗುತ್ತಿದೆ. ಆದರೆ ಅಂಗಡಿ ಎದುರು ವಾಹನ ನಿಲ್ಲಿಸಲು ಮಾತ್ರ ಜಾಗ ಇರುವುದಿಲ್ಲ. ಒಂದು ವೇಳೆ ನಿಲ್ಲಿಸಿದರೆ ದಂಡ ಬೀಳುತ್ತದೆ. ಕಾರಣ ಅಲ್ಲಿ ಪಾರ್ಕಿಂಗ್‌ಗೆ ಅನುಮತಿ ಇಲ್ಲ.

ಅಂಗಡಿ, ಮಳಿಗೆಗಳಿಗೆ ಪರವಾನಿಗೆ ನೀಡುವಾಗಲೇ ಪಾರ್ಕಿಂಗ್‌ ಕುರಿತೂ ಗಮನ ಹರಿಸುತ್ತಿದ್ದರೆ ಸಮಸ್ಯೆ ಈಗ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ. ಇತ್ತೀಚೆಗೆ ನಿರ್ಮಿಸಿದ ಕೆಲವೇ ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಮಾತ್ರ ಪಾರ್ಕಿಂಗ್‌ಗೆ ಜಾಗ ಮೀಸಲಿಡಲಾಗುತ್ತಿದೆಯಷ್ಟೇ.

ಇನ್ನು ಕೆಲವು ಅಂಗಡಿಗಳ ಎದುರಿನಲ್ಲಿ “ನಮ್ಮ ಗ್ರಾಹಕರಿಗೆ ಮಾತ್ರ’ ಎಂಬ ಬೋರ್ಡ್‌ ಇರುತ್ತದೆ. ಹೆಚ್ಚಿನ ಕಡೆ ಇದು ಅವರ ಜಾಗವೇ ಆಗಿರುವುದಿಲ್ಲ. ಅದು ರಸ್ತೆ ಬದಿಯಾಗಿದ್ದು, ಪುರಸಭೆಯದ್ದಾಗಿರುತ್ತದೆ. ಬೋರ್ಡ್‌ ಮಾತ್ರ ಅವರದ್ದಾಗಿ ರುತ್ತದೆ. ಇದನ್ನು ಕೇಳಿದರೆ ಧಮಕಿ ಬೇರೆ ಹಾಕುತ್ತಾರೆ!. ಈ ಬಗ್ಗೆ ಪುರಸಭೆಯಾಗಲಿ, ಪೊಲೀಸರಾಗಲಿ ಗಮನ ಹರಿಸುತ್ತಿಲ್ಲ.

ಸಂಚಾರಿ ದಂಡ
ಯಾರು ರಸ್ತೆ ಬದಿ ವಾಹನ ನಿಲ್ಲಿಸಿ ಹೋದರೂ ಸಂಚಾರ ಠಾಣೆ ಪೊಲೀಸರು ಬಂದು ದಂಡ ಹಾಕುತ್ತಾರೆ. ಚಕ್ರಕ್ಕೆ ಲಾಕ್‌ ಹಾಕುತ್ತಾರೆ. ಆದರೆ ನೋ ಪಾರ್ಕಿಂಗ್‌ಗೆ ಸೂಕ್ತ ನೋಟಿಫಿಕೇಶನ್‌ ಆಗದೆ ವಾಹನ ನಿಲ್ಲಿಸಿದವರ ಮೇಲೆ ಹೇಗೆ ಕೇಸು ಹಾಕುತ್ತಾರೆ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಇಲ್ಲ. ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹೊರತು ಎಲ್ಲಿಯೂ ವಾಹನ ನಿಲ್ಲಿಸಬಾರದು ಎನ್ನುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಾರೆ. ವಾಹನ ನಿಲ್ಲಿಸಲು ಅಂಗಡಿ ಮಾಲಕ ಸಹಾಯ ಮಾಡುವುದು ಮುಖ್ಯ. ಜತೆಗೆ ಆ ಮಾಲಕ ಪುರಸಭೆಗೆ ತೆರಿಗೆ ಕಟ್ಟುವ ಕಾರಣ ವ್ಯಾಪಾರಕ್ಕೆ ಅನುಕೂಲವಾಗುವಂತೆ ಅಲ್ಲಿಗೆ ಬರುವ ಗ್ರಾಹಕರ ವಾಹನ ಇಡಲು ಸ್ಥಳೀಯಾಡಳಿತ ವ್ಯವಸ್ಥೆ ಮಾಡಿಕೊಡುವುದೂ ಅಷ್ಟೇ ಅವಶ್ಯ.

ಫ್ಲೈಓವರ್‌ ಕೆಳಗೆ ಅವಕಾಶ
ನಗರದಲ್ಲಿ ಅಡ್ಡಗೋಡೆಯಂತೆ ಫ್ಲೈಓವರ್‌ ನಿರ್ಮಾಣವಾಗುತ್ತಿದ್ದು ಅದರ ಕೆಳಗೆ ವಾಹನ ನಿಲ್ಲಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಇದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿಯವರು ಒಪ್ಪಿಗೆ ನೀಡುವ ಭರವಸೆ ನೀಡಿ ದ್ದಾರೆ. ಇದಲ್ಲದೇ ಬೇರೆ ಕಡೆಗಳಲ್ಲೂ ಪುರಸಭೆ ಮುತುವರ್ಜಿ ವಹಿಸಿ ಪಾರ್ಕಿಂಗ್‌ಗೆ ಸೂಕ್ತ ಏರ್ಪಾಟು ಮಾಡಿಕೊಡಬೇಕಿದೆ. ಅದು ಪಾವತಿ ಪಾರ್ಕಿಂಗ್‌ ಆದರೂ ಸರಿಯೇ ಎಂಬಷ್ಟರ ಮಟ್ಟಿಗೆ ಜನ ಈಗಿನ ಅವ್ಯವಸ್ಥೆಗೆ ರೋಸಿ ಹೋಗಿದ್ದಾರೆ.

ಮಲ್ಟಿ ಸ್ಟೋರೇಜ್‌
ದತ್ತಾತ್ರೇಯ ದೇವಸ್ಥಾನ ಬಳಿ ಇರುವ ಜಾಗದಲ್ಲಿ ಮಲ್ಟಿ ಸ್ಟೋರೇಜ್‌ ಕಟ್ಟಡ ನಿರ್ಮಿಸಿ ಅಲ್ಲಿ ಬಹುಮಹಡಿಗಳಲ್ಲೂ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಿಕೊಡಬೇಕೆಂಬ ಬೇಡಿಕೆಯೂ ಇದೆ. ಇದಕ್ಕೆ ದೊಡ್ಡ ಮೊತ್ತವೂ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹಣ ವಸೂಲಿ ಮಾಡಿ ನಗರಕ್ಕೆ ಬರುವ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಬಹುದು. ಆದರೆ ಇಷ್ಟು ದೊಡ್ಡ ಮೊತ್ತದ ಯೋಜನೆ ಮಂಜೂರಾತಿಗೆ ಆಡಳಿತದ ಇಚ್ಛಾಶಕ್ತಿಯೂ ಮುಖ್ಯವಾಗುತ್ತದೆ. ದ್ವಿಚಕ್ರ ವಾಹನ ನಗರದಲ್ಲಿ ಇಟ್ಟು ಉಡುಪಿ, ಮಂಗಳೂರು ಕಡೆಗೆ ಉದ್ಯೋಗಕ್ಕಾಗಿ ಹೋಗುವ ಅನೇಕರಿಗೆ ಇಂತಹ ಪಾರ್ಕಿಂಗ್‌ ತಾಣಗಳು ಪ್ರಯೋಜನ ತರಬಲ್ಲವು.

ಇಕ್ಕಟ್ಟು
ಶಾಸ್ತ್ರಿ ಸರ್ಕಲ್‌ನಿಂದ ಪಾರಿಜಾತ ವೃತ್ತದವರೆಗೆ ದ್ವಿಪಥ ಇದ್ದು ರಸ್ತೆಯ ಬದಿಯಲ್ಲಿ ಸರಿಯಾದ ಮಾರ್ಕಿಂಗ್‌ ಮಾಡಿದರೆ ಅದರೊಳಗೆ ಗೊಂದಲ ಇಲ್ಲದೆ ವಾಹನ ನಿಲ್ಲಿಸಿದರೆ ತೊಂದರೆಯಾಗದು. ಆದರೆ ಪಾರಿಜಾತ ವೃತ್ತದಿಂದ ಹೊಸ ಬಸ್‌ ನಿಲ್ದಾಣವರೆಗೆ ವೆಂಕಟ್ರಮಣ ದೇವಸ್ಥಾನ ಮೂಲಕ ಹೋಗುವ ರಸ್ತೆ ತೀರಾ ಇಕ್ಕಟ್ಟಾಗಿದೆ. ಇಲ್ಲೇ ಬಸ್‌ಗಳು, ಲಾರಿಗಳು ಕೆಲ ಕಾಲ ನಿಂತರೆ ಇತರ ವಾಹನಗಳ ಓಡಾಟಕ್ಕೆ ಕಷ್ಟ. ಇನ್ನು ಇತರ ವಾಹನಗಳನ್ನೂ ನಿಲ್ಲಿಸಿದರೆ ಹೇಳುವುದೇಬೇಡ.

ಒಳ ರಸ್ತೆಗಳಲ್ಲೂ ಅಡಚಣೆ
ನಗರದ ಮುಖ್ಯ ರಸ್ತೆ ಮಾತ್ರ ಅಲ್ಲ, ಒಳ ರಸ್ತೆಗಳಲ್ಲೂ ಪಾರ್ಕಿಂಗ್‌ ಸಮಸ್ಯೆ ಇದೆ. ಚಿಕ್ಕನ್‌ ಸಾಲ್‌ ರಸ್ತೆ, ಫಿಶ್‌ ಮಾರ್ಕೆಟ್‌ ರಸ್ತೆ, ಫೆರ್ರಿ ರಸ್ತೆ, ಸೂರ್ನಳ್ಳಿ ರಸ್ತೆ, ಗುರು ನಾರಾಯಣ ರಸ್ತೆ, ಚರ್ಚ್‌ ರಸ್ತೆ ಮೊದಲಾದೆಡೆಯೂ ಅಂಗಡಿ ಮತ್ತಿತರ ಕಡೆಗೆ, ಮಾರುಕಟ್ಟೆಗೆ ಬರುವವರಿಗೆ ವಾಹನ ನಿಲ್ಲಿಸುವುದು ಎಲ್ಲ ದಿನ ಸುಲಭದ ಮಾತಲ್ಲ. ಏಕೆಂದರೆ ಇಲ್ಲಿ ಹೆಚ್ಚಿನ ದಿನಗಳಲ್ಲಿ ವಾಹನದಟ್ಟಣೆ ಇದ್ದೇ ಇದೆ.

ಟಾಪ್ ನ್ಯೂಸ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

uppunda

Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್‌ ಭೇಟಿ

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

fraudd

Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ

Kapu

Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.