ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್‌. ಪಿ. ಶೆಣೈ


Team Udayavani, Apr 16, 2021, 1:48 PM IST

The contribution of the faculty in the bright future of the students is immense

ಮುಂಬಯಿ: ವಿದ್ಯಾರ್ಥಿ ಗಳ ಅಧ್ಯಯನ ಸಂದರ್ಭ ವಾರ್ಷಿ ಕೋತ್ಸವವು ಮಹತ್ತರ ಸ್ಥಾನ ಪಡೆದು ಕೊಂಡಿದ್ದು, ಶೈಕ್ಷಣಿಕ ವರ್ಷದ ಸಮಗ್ರ ಚಿತ್ರಣವನ್ನು ಪ್ರದರ್ಶಿಸುತ್ತದೆ. ವಿದ್ಯಾರ್ಥಿಗಳ ಸಮಗ್ರ ಪ್ರಗತಿಯ ಅನಾವರಣ ಒಂದೆಡೆಯಾದರೆ, ಮತ್ತೂಂ ದೆಡೆ ಜ್ಞಾನಾಭಿವೃದ್ಧಿಗಾಗಿ, ವ್ಯಕ್ತಿತ್ವ ವಿಕಾಸಕ್ಕಾಗಿ ಶಾಲಾ – ಕಾಲೇಜುಗಳು ಮಾಡಿಕೊಂಡು ಬಂದಂತಹ ಯೋಜನೆಗಳ ಪ್ರಾಮುಖ್ಯತೆ ಒಳಗೊಂಡಿರುತ್ತದೆ. ಎನ್‌.ಬಿ. ಎಚ್‌. ಕುಲಕರ್ಣಿಯವರ ಮನೆಯಿಂದ ಪ್ರಾರಂಭವಾದ ವಿದ್ಯಾ ಪ್ರಸಾರಕ ಮಂಡಳವು ಕಳೆದ 60 ವರ್ಷಗಳಿಂದ ನಿರಂತರ ಸೇವೆ ನೀಡುತ್ತಿದೆ.

ಇಂದು ಉತ್ತುಂಗ ಕ್ಷೇತ್ರದಲ್ಲಿ ಮಂಡಳವು ಗುರುತಿಸಿಕೊಳ್ಳುವಲ್ಲಿ ಪ್ರಯತ್ನ, ಪ್ರಾಮಾಣಿಕತೆ, ಶಿಸ್ತು, ಅವಿಶ್ರಾಂತ ನಾಯಕತ್ವ, ಅಹರ್ನಿಶಿ ಕಾರ್ಯ, ನಿಸ್ವಾರ್ಥ ಮನೋಭಾವನೆ, ದಾನಿಗಳ ಉದಾರ ಗುಣ, ಶಿಕ್ಷಕರ ಶ್ರಮ ಶ್ಲಾಘನೀಯ. ನಿರಂತರವಾದ ಚಿಂತನ – ಮಂಥನದಿಂದ ಶ್ರೇಷ್ಠ ಮಟ್ಟದ ಶಿಕ್ಷಣವನ್ನು ಒದಗಿಸಲು ಮತ್ತು ಬದಲಾವಣೆ ತರಲು ಶ್ರಮಿಸುತ್ತಿರುವ ಕಾರ್ಯಕಾರಿ ಮಂಡಳಿ ಹಾಗೂ ತಮ್ಮ ಜ್ಞಾನವೆಂಬ ಪ್ರಕಾಶದಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ನಕ್ಷತ್ರದಂತೆ ಹೊಳೆಯಲು ಸದಾ ಕಾರ್ಯೋನ್ಮುಖರಾದ ಅಧ್ಯಾಪಕರ ಸೇವೆ ಅವಿಸ್ಮರಣೀಯ ಎಂದು ಎಸ್‌. ಪಿ. ಶೆಣೈ ತಿಳಿಸಿದರು.

ವಿದ್ಯಾ ಪ್ರಸಾರಕ ಮಂಡಳದ ಜೂನಿಯರ್‌ ಕಾಲೇಜಿನ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ದೀಪ ಪ್ರಜ್ವಲಿಸಿ, ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಡಾ| ಪಿ.ಎಂ. ಕಾಮತ್‌ ಅವರು ಅತಿಥಿ ಗಳಿಗೆ ಪುಷ್ಪಗುತ್ಛ ನೀಡಿ ಗೌರವಿಸಿ ದರು.

ಜೂನಿಯರ್‌ ಕಾಲೇಜಿನ ಆರಂಭದ ದಿನಗಳನ್ನು, ಶಿಕ್ಷಣ ವಿಭಾಗದ ಅಧಿಕಾರಿಗಳ ಸ್ನೇಹ ಸಂಬಂಧ ಮತ್ತು ಸಹಕಾರವನ್ನು ಸ್ಮರಿಸಿದ ಅವರು ಅನುದಾನರಹಿತ ಕಾಲೇಜ್‌ ಅನ್ನು ಅನುದಾನಕ್ಕೆ ಮಾನ್ಯತೆ ಪಡೆಯಲು ಪಟ್ಟ ಶ್ರಮದ ಕುರಿತು ಹಂಚಿಕೊಂಡರು. ಏಂಟು ವರ್ಗ ವಿಭಾಗಗಳನ್ನು ಒಳಗೊಂಡ ಜೂನಿಯರ್‌ ಕಾಲೇಜ್‌ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಒಳಗೊಂಡಿದ್ದು, ಕಲಾ ವಿಭಾಗವನ್ನು ಸೇರ್ಪಡೆಗೊಳಿಸಲು ಪ್ರಯತ್ನ ಮಾ ಡುತ್ತಿದ್ದು, ಶೀಘ್ರದಲ್ಲಿ ನೆರವೇರಲಿದೆ ಎಂದು ತಿಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಕೋರಿದರು.

ಪ್ರಾಂಶುಪಾಲೆ ಅರ್ಚನಾ ಬಿರಾಜದಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಸಮಗ್ರ ವರದಿ ತಿಳಿಸಿದರು, ಅತಿಥಿ -ಅಧ್ಯಕ್ಷರ ಪರಿಚಯವನ್ನು ಮತ್ತು ಸ್ವಾಗತವನ್ನು ರಾಖೀ ಖೇಣಿ ಮತ್ತು ವಂದನಾ ರಾಹುತ್‌ ಮಾಡಿದರೆ, ಶಾಮಾದೇವಿ ಯಾದವ್‌ ಅವರ ಸಾಧನೆಯನ್ನು ಕವಿತೆ ಮೂಲಕ ಪ್ರಶಂಸಿಸಿದರು.

ವಿN°àಶ್ವರನ ಶ್ಲೋಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ ಮುಳಗುಂದ, ಕಾರ್ಯದ ರ್ಶಿಗಳಾದ ಬಿ. ಎಚ್‌. ಕಟ್ಟಿ, ನ್ಯಾಯ ವಾದಿ ವಿಜಯ ಕುಲಕರ್ಣಿ, ಎನ್‌. ಎಂ. ಗುಡಿ, ಪ್ರಸನ್ನ ಪಂಡಿತ ಮತ್ತಿತರ ಪದಾಧಿಕಾರಿಗಳು, ನಿವೃತ್ತ ಪ್ರಾಂಶುಪಾಲೆ ನಿರುಪಾ ಜೊರಾಪುರ, ಉಪ ಪ್ರಾಂಶುಪಾಲರಾದ ಎ. ಕೆ.
ಜಾಧವ್‌, ಶಿಕ್ಷಕರು, ಶಿಕ್ಷಕೇತರ ಸಿಬಂ ದಿ, ಪಾಲಕರು ಉಪಸ್ಥಿತರಿದ್ದರು.

ಶೈಕ್ಷಣಿಕ ವರ್ಷದ ಹಾಗೂ ದತ್ತಿ ಬಹುಮಾನ ವಿಜೇತರ ಯಾದಿ ಯನ್ನು ಅಪರ್ಣಾ ಲೋನಕಡೆ ಮತ್ತು ಮನೋಜ್‌ ಪಾಟಕ್‌ ಓದಿದರು. ಸಚಿನ್‌ ಕೋಟ್ಯಾನ್‌, ಶೇರಿಗಾರ ಸುಪ್ರೀತಾ ಆದರ್ಶ ವಿದ್ಯಾರ್ಥಿ
ಗಳ ಕೀರ್ತಿಗೆ ಪಾತ್ರರಾದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚೇತನಾ ಬೋಸ್ಲೆ ನಡೆಸಿಕೊಟ್ಟರು. ತಾಂತ್ರಿಕ ಸಲಹೆಗಾರರಾಗಿ ರಜನಿ ಕಾರ್ಯನಿರ್ವಹಿಸಿದರು. ರಾಷ್ಟ್ರಗೀತೆ ಯೊಂದಿಗೆ ಸಮಾರಂಭವು ಸಂಪನ್ನಗೊಂಡಿತು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.