ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ


Team Udayavani, Apr 19, 2021, 7:15 AM IST

ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ

ಕಾರ್ಕಳ : “ಮನೆಯಲ್ಲಿ ನಮ್ಮನ್ನೇ ನಂಬಿ ಸಂಸಾರವಿದೆ. ನಾವು ಹಗಲು -ರಾತ್ರಿ ಕಾಡಿನಲ್ಲಿರುತ್ತೇವೆ. ನಮಗೂ  ಮನೆಯಲ್ಲಿರುವರಿಗೂ ರಕ್ಷಣೆಯಿಲ್ಲ…’

ಹೀಗೆ ಅಳಲು ತೋಡಿಕೊಂಡವರು ರಾಜ್ಯ ವನ್ಯಜೀವಿ ವಿಭಾಗದ ಹೊರಗುತ್ತಿಗೆ ನೌಕರರು. ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಇವರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಬಂಡೀಪುರ, ಚಾಮರಾಜನಗರ, ನಾಗರಹೊಳೆ, ಭದ್ರಾ, ದಾಂಡೇಲಿ, ಬನ್ನೇರುಘಟ್ಟ, ಕೊಡಗು, ಕುದುರೆಮುಖ ವನ್ಯಧಾಮಗಳಲ್ಲಿ 1,500ಕ್ಕೂ ಅಧಿಕ ಹೊರ ಗುತ್ತಿಗೆ ನೌಕರರಿದ್ದಾರೆ. ಕಳ್ಳಬೇಟೆ, ಮರ ಕಳವು, ಕಾಳ್ಗಿಚ್ಚು ತಡೆ, ಒತ್ತುವರಿ ತಡೆ, ಶಿಬಿರ ಕೇಂದ್ರ ಉಸ್ತುವಾರಿ, ಗಸ್ತು ಇತ್ಯಾದಿ ನಿರ್ವಹಿಸುವ ಇವರ ಶ್ರಮಕ್ಕೆ ತಕ್ಕ ಫ‌ಲ ಸಿಗುತ್ತಿಲ್ಲ.

ಅಲ್ಪ ವೇತನ
ನಿಯಮಾನುಸಾರ ದಿನಕ್ಕೆ 8 ತಾಸುಗಳ ದುಡಿಮೆಯ ಅವಧಿ ಇವರದು. ಆದರೆ ದಿನದ 24 ತಾಸು ದುಡಿಸಿಕೊಳ್ಳಲಾಗುತ್ತಿದೆ. 14,885 ರೂ. ವೇತನ ಕೈಸೇರಬೇಕಿದ್ದರೂ ಗುತ್ತಿಗೆದಾರರು 11,200 ರೂ. ಮಾತ್ರ ನೀಡು ತ್ತಿದ್ದಾರೆ. ಹೆಚ್ಚುವರಿ ದುಡಿಮೆಗೆ ಚಿಕ್ಕಾಸಿಲ್ಲ. ಪಿಎಫ್, ಇಎಸ್‌ಐ ಇದ್ದರೂ ಖಾತೆಗೆ ಹಣ ಜಮೆ ಆಗುವ ಖಾತರಿಯಿಲ್ಲ.

ಅರಣ್ಯ ಗಸ್ತು ಸಂದರ್ಭ ಭದ್ರತೆಯಿಲ್ಲ. ಪೆಟ್ರೋಲ್‌ ವೆಚ್ಚ ಕೈಯಿಂದಲೇ ಭರಿಸಬೇಕು. ದಿನವಿಡೀ ದುಡಿದರೂ 8 ತಾಸುಗಳ ದುಡಿಮೆಗೆ ಮಾತ್ರ ಸಂಬಳ ನೀಡುತ್ತಾರೆ ಎಂದು ನೌಕರರು ಬೇಸರ ವ್ಯಕ್ತಪಡಿಸುತ್ತಾರೆ.

ರಕ್ಷಣೆಯಿಲ್ಲದ ಬದುಕು
ಒಂದೊಂದು ವಲಯಗಳಲ್ಲಿ ಒಟ್ಟು 4 ಕಳ್ಳಬೇಟೆ ತಡೆ ಶಿಬಿರಗಳಿವೆ. ಒಟ್ಟು 4 ದಿನಗೂಲಿ ನೌಕರರು ಹಗಲು-ರಾತ್ರಿ ಅಲ್ಲೇ ಇರಬೇಕು. ಕುದುರೆಮುಖ ವನ್ಯಜೀವಿ ವಿಭಾಗದ ಬೆಳ್ತಂಗಡಿ, ಕೆರೆಕಟ್ಟೆ, ಕುದುರೆಮುಖ, ಕಾರ್ಕಳ, ಹೆಬ್ರಿ, ಸಿದ್ದಾಪುರ, ಕೊಲ್ಲೂರು, ಅಮಾಸೆಬೈಲು ಈ ಎಂಟು ವಲಯಗಳಲ್ಲಿ 120ಕ್ಕೂ ಹೆಚ್ಚು ದಿನಗೂಲಿ ನೌಕರರಿದ್ದಾರೆ.

ಬದಲಾಯಿತು ಚಿತ್ರಣ
2017ಕ್ಕೂ ಪೂರ್ವದಲ್ಲಿ ಇವರು ಅರಣ್ಯ ಇಲಾಖೆಯ ದಿನಗೂಲಿ ನೌಕರರೇ ಆಗಿದ್ದರು. ಖಾಯಂ ಆಗ ಬಹುದೆಂಬ ಆಶಾಭಾವನೆಯಿಂದ 20ರಿಂದ 25 ವರ್ಷಗಳಿಂದ ಕೆಲಸ ನಿರ್ವಹಿಸುತ್ತ ಬಂದಿದ್ದರು. 2017ರಲ್ಲಿ ಏಕಾಏಕಿ ಇಲಾಖೆಯು ಇವರನ್ನು ಹೊರಗುತ್ತಿಗೆ ನಿಯಮದಡಿ ತಂದಿತು.

ಆಗಸ್ಟ್‌ನಲ್ಲಿ ಪ್ರತಿಭಟನೆ
ಅನ್ಯಾಯ, ತಾರತಮ್ಯ ವಿರೋಧಿಸಿ ಮುಂದಿನ ಆಗಸ್ಟ್‌ ನಲ್ಲಿ ವನ್ಯಜೀವಿ ವಿಭಾಗಗಳ ರಕ್ಷಣ ಶಿಬಿರಗಳನ್ನು ಬಂದ್‌ ಮಾಡಿ ಪ್ರತಿಭಟಿಸಲು ವಾಚರ್‌ಗಳ ಸಂಘಟನೆ ನಿರ್ಧರಿಸಿದೆ.

ಗುತ್ತಿಗೆ ನೌಕರರಿಗೆ ಅನ್ಯಾಯ ಕುರಿತು ದೂರು ಬಂದಿಲ್ಲ. ವಂಚನೆಯಾಗುತ್ತಿದ್ದಲ್ಲಿ ಆಯಾ ಡಿಎಫ್ಒಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.
- ಪ್ರಕಾಶ್‌ ನಾಟಲ್ಕರ್‌, ಸಿಸಿಎಫ್, ಮಂಗಳೂರು ವೃತ್ತ ವನ್ಯಜೀವಿ ವಿಭಾಗ

ಸಂಬಳ, ಸವಲತ್ತು, ಪರಿಹಾರ ಎಲ್ಲದರಲ್ಲೂ ತಾರತಮ್ಯವಿದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ.
– ನಾಗರಾಜ್‌, ಅರಣ್ಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.