![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 19, 2021, 8:06 AM IST
19-04-2021
ಮೇಷ: ವ್ಯವಹಾರದಲ್ಲಿ ಧಾರಾಳ ಸಂಪಾದನೆ ಕಂಡು ಬಂದರೂ ಖರ್ಚು ಅಷ್ಟೇ ಇದ್ದೀತು. ನೆರೆಹೊರೆಯ ವರ ಬಗ್ಗೆ ಜಾಗ್ರತೆ ಮಾಡಿರಿ. ಸಾಂಸಾರಿಕವಾಗಿ ಕೂಡ ಅಸಮಾಧಾನದ ವಾತಾವರಣವು ಕಿರಿಕಿರಿಯೆನಿಸಲಿದೆ. ಮುನ್ನಡೆಯಿರಿ.
ವೃಷಭ: ಶಾಂತ ಚಿತ್ತರು ಹಾಗೂ ಸಮಾಧಾನ ಪ್ರಿಯರಾದ ನಿಮಗೆ ಯಾರು ಏನೆಂದರೂ ಬೇಸರವಾದರೂ ತೋರ್ಪಡಿಸುವುದಿಲ್ಲ. ನಿಮ್ಮ ಸ್ವಭಾವವು ಅತೀ ಮೃದು ನಿಮಗೆ ಕಷ್ಟಕ್ಕೆ ಗುರಿಮಾಡಲಿದೆ. ಜಾಗ್ರತೆಯಿಂದ ಮುನ್ನಡೆಯಿರಿ.
ಮಿಥುನ: ಸಾಂಸಾರಿಕವಾಗಿ ಕೂಡ ಅಸಮಾಧಾನದ ವಾತಾವರಣ ಕಂಡು ಬರಲಿದೆ. ಸ್ಥಳ ಯಾ ನಿವೇಶನ ಸಂಬಂಧಿತ ವಿಷಯದಲ್ಲಿ ಮುನ್ನಡೆ ಕಂಡು ಬಂದೀತು. ಆರ್ಥಿಕವಾಗಿ ಋಣಭಾರವಿದ್ದರೂ ಬೇರೆಲ್ಲಾ ರೀತಿಯಲ್ಲಿ ಯಶಸ್ಸು ಇದೆ.
ಕರ್ಕ:ಉದ್ಯೋಗ ಸ್ಥಿತಿಯಲ್ಲಿ ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾನಾ ರೀತಿಯಲ್ಲಿ ಅಡಚಣೆ ಯನ್ನು ಅನುಭವಿಸುವಂತಾದೀತು. ಬಂಡವಾಳ ವ್ಯವಹಾರದಲ್ಲಿ ಕಷ್ಟನಷ್ಟಗಳ ಸಂಭವವಿದೆ. ಮಹತ್ಕಾರ್ಯದಲ್ಲಿ ಸಾಧನೆಯಾಗಲಿದೆ.
ಸಿಂಹ: ಶೇರು ಮಾರ್ಕೆಟ್, ಕಮಿಶನ್ ವ್ಯವಹಾರದಲ್ಲಿ, ಬಂಡವಾಳದಲ್ಲಿ ಲಾಭ ಕಡಿಮೆಯಾದೀತು. ಅಲ್ಲದೆ ಭಡ್ತಿಯಲ್ಲೂ ಹಿನ್ನಡೆ ಕಂಡು ಬಂದೀತು. ಹೊಸ ಚಿಂತನೆಗೆ ಇದು ಸಕಾಲವಲ್ಲ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ.
ಕನ್ಯಾ: ತಾಳ್ಮೆ, ಸಮಾಧಾನ ಚಿತ್ತರಾಗಿ ಮುಂದುವರಿದಲ್ಲಿ ನಿರೀಕ್ಷಿಸದ ಅಚ್ಚರಿಯು ನಿಮಗೆ ಕಾದಿರುತ್ತದೆ. ಸಂತೋಷ ದಿಂದ ಅನುಭವಿಸಿರಿ. ಕಠಿಣ ಪರಿಶ್ರಮವು ನಿಮ್ಮ ಮುನ್ನಡೆಗೆ ಕಾರಣವಾಗಲಿದೆ . ಹಿರಿಯರಿಂದ ಸೂಕ್ತ ಸಲಹೆಗಳು ಬಂದಾವು.
ತುಲಾ: ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬಂದಾವು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ಸ್ವಲ್ಪ ಹೆಚ್ಚು ಕಂಡು ಬರುವುದು. ಉದ್ಯೋಗಿಗಳಿಗೆ ಕೈತುಂಬಾ ಕೆಲಸಗಳಿದ್ದು ವಿಶ್ರಾಂತಿಯೇ ಇಲ್ಲವಾಗಲಿದೆ.
ವೃಶ್ಚಿಕ: ಈ ಸಮಯದಲ್ಲಿ ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಎಲ್ಲಾ ರೀತಿಯ ಸೌಭಾಗ್ಯವು ಕಂಡು ಬರುವುದು. ದಾಯಾದಿಗಳ ಕಿರಿಕಿರಿಯು ಹೆಚ್ಚಾಗಿ ಮನಸ್ಸಿನ ನೆಮ್ಮದಿ ಕೆಡಿಸಲಿದೆ. ಖರ್ಚುಗಳ ಮೇಲೆ ನಿಗಾ ಇಡಿರಿ.
ಧನು: ಮನೆಯಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ಒದಗಿ ಬರಲಿದೆ. ಎಲ್ಲಾ ವಿಚಾರದಲ್ಲಿ ಚಿಂತಿಸಿ, ಮುನ್ನಡೆಯುವ ಅಗತ್ಯವಿದೆ. ಶನಿಯ ಪ್ರತಿಕೂಲತೆಯೂ ಸೇರಿರುವುದರಿಂದ ಜಾಗ್ರತೆಯಿಂದ ಮುನ್ನಡೆಯುವುದು.
ಮಕರ: ಆಕರ್ಷಕವಾದ ದುಡಿಮೆಗೆ ನಿಮ್ಮ ಪ್ರಯತ್ನಬಲ ಕ್ರಿಯಾಶೀಲತೆ ಕೂಡ ಪೂರಕವಾಗಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆಯು ಕಂಡು ಬರುವುದು. ಸಂಸಾರದ ಖರ್ಚಿನ ನಿಭಾವಣೆಗಾಗಿ ಹೆಣಗಾಡಬೇಕಾದೀತು.
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣ ತೋರಿಬರುವುದು. ಅಜೀರ್ಣ ಉಪದ್ರವ, ಬೆನ್ನು ನೋವಿನ ಉಪದ್ರವವು ಕಂಡು ಬಂದೀತು. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಆತಂಕಕ್ಕೆ ಕಾರಣವಾದೀತು.
ಮೀನ: ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು. ಪ್ರೀತಿಯ ಮಡದಿಯ ಸೂಕ್ತ ಸಲಹೆಗಳಿಗೆ ಸ್ಪಂದಿ ಸಿದಲ್ಲಿ ಮುನ್ನಡೆ ತೋರಿ ಬರುವುದು. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರಕಲಿದೆ. ಜವಾಬ್ದಾರಿ ಹೆಚ್ಚಲಿದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.