ಕೈಮಗ್ಗ ಘಟಕ ಸ್ಥಾಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಹಿಳೆಯರು


Team Udayavani, Apr 21, 2021, 2:07 PM IST

Women who set up a handloom unit and build self-reliance

ಚಾಮರಾಜನಗರ: ಜಿಲ್ಲಾಡಳಿತದ ಕಾರ್ಯಯೋಜನೆ ಹಾಗೂ ಲೀಡ್‌ಬ್ಯಾಂಕ್‌ ಆಸಕ್ತಿಯ ಪರಿಶ್ರಮದ ಫ‌ಲವಾಗಿ ಚಾಮರಾಜನಗರ ತಾಲೂಕಿನ ಪುಣಜನೂರು ಭಾಗದ ವಿವಿಧ ಗ್ರಾಮಗಳ 110 ಕುಟುಂಬಗಳು ಕೈಮಗ್ಗ ನೇಕಾರಿಕೆ ವೃತ್ತಿ ಬದುಕು ಕಟ್ಟಿಕೊಳ್ಳಲು ಸಫ‌ಲವಾಗಿವೆ.

ಜಿಲ್ಲಾಧಿಕಾರಿ ಡಾ. ಎಂ.ಆರ್‌ ರವಿ ನೀಡಿದ ಉತ್ತೇಜನದಿಂದಾಗಿ ಲೀಡ್‌ಬ್ಯಾಂಕ್‌ ಪುಣಜನೂರು ಭಾಗದ ಕಾಡಂಚಿನ ಗ್ರಾಮಗಳಾದ ದೊಡ್ಡಮೂಡಹಳ್ಳಿ, ಕೋಳಿಪಾಳ್ಯ, ಮೂಕನಪಾಳ್ಯ, ಬೆಜ್ಜಲಪಾಳ್ಯ, ವೀರಯ್ಯನಪುರ, ರಂಗಸಂದ್ರ (ಬೂದಿಪಡಗ)ದ 110 ಕುಟುಂಬಗಳಿಗೆ ನೇಕಾರ ವೃತ್ತಿ ಉದ್ದಿಮೆ ಕೈಗೊಳ್ಳಲು ಬ್ಯಾಂಕ್‌ ಆಫ್ ಬರೋಡದ ಮೂಲಕ ಸಾಲಸೌಲಭ್ಯ ಒದಗಿಸಿದೆ.

ಸಾಲ ಸೌಲಭ್ಯ ಪಡೆದ ಕುಟುಂಬಗಳು ಜೀವನೋಪಾಯಕ್ಕಾಗಿ ವ್ಯವಸಾಯ ಇತರೆ ಕೂಲಿಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಬದುಕಿನಲ್ಲಿ ಆದಾಯ ಹೆಚ್ಚಳ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂಬ ಆಕಾಂಕ್ಷೆ ಹೊಂದಿದ್ದ ಎಲ್ಲ ಕುಟುಂಬಗಳು ನೇಕಾರ ವೃತ್ತಿ ಉದ್ದಿಮೆಗೆ ಆಸಕ್ತಿತೋರಿಸಿದ್ದರು.

ಆಗ ನೆರವಿಗೆ ಬಂದಿದ್ದುಜಿಲ್ಲಾಡಳಿತ ಹಾಗೂ ಲೀಡ್‌ಬ್ಯಾಂಕ್‌. ವಿಶೇಷವೆಂದರೆ ನೇಕಾರ ಉದ್ದಿಮೆಗೆ ಮುಂದಾದ 110 ಕುಟುಂಬಗಳ ಪೈಕಿ 102ಮಹಿಳೆಯರೇ ಆಗಿದ್ದಾರೆ. 8 ಜನರು ಮಾತ್ರ ಪುರುಷರಾಗಿದ್ದಾರೆ. ಸೌಲಭ್ಯ ಪಡೆದವರಲ್ಲಿ 105ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ನಾಲ್ವರು ಒಬಿಸಿ, ಓರ್ವ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಪ್ರತಿ ಉದ್ದಿಮೆ ಘಟಕ ವೆಚ್ಚಕ್ಕೆ 30,000 ರೂ. ಸಾಲ ನೀಡಲಾಗಿದೆ. ಮಗ್ಗಹಾಗೂ ಪರಿಕರಗಳ ಖರೀದಿಗಾಗಿ ಆರ್ಥಿಕನೆರವನ್ನು ಬಳಸಿಕೊಳ್ಳುತ್ತಿದ್ದಾರೆ.

ನೇಕಾರ ಉದ್ದಿಮೆಗೆ ಸ್ವಯಂ ಪ್ರೇರಿತರಾಗಿಉತ್ಸಾಹ ತೋರಿದ ಪುಣಜನೂರು ಗ್ರಾಮದವ್ಯಾಪ್ತಿಯ ಕಾಡಂಚಿನ ಕುಟುಂಬಗಳಿಗೆವೆಂಕಟಯ್ಯನ ಛತ್ರದ ಬ್ಯಾಂಕ್‌ ಆಫ್ ಬರೋಡಒಟ್ಟು 33,00,000 ರೂ.ಗಳ ಆರ್ಥಿಕಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯಒದಗಿಸುವಲ್ಲಿ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕರಾದ ವಿಜಯ್‌ಕುಮಾರ್‌ ಚೌರಾಸಿರವರ ವಿಶೇಷ ಕಾಳಜಿಯು ಇದೆ. ಚೌರಾಸಿಯ ಅವರು ಖುದ್ದುಗ್ರಾಮಗಳಿಗೆ ಭೇಟಿ ನೀಡಿ ಜನರ ಆಸಕ್ತಿ, ಉತ್ಸಾಹ ಮನಗಂಡು ಹೊಸ ನೇಕಾರ ಉದ್ಯಮ ಬದುಕಿಗೆ ಬೆಂಬಲವಾಗಿದ್ದಾರೆ.ಜಿಲ್ಲಾಡಳಿತ ಹಾಗೂ ಬ್ಯಾಂಕಿನ ನೆರವಿನಿಂದ ನಮ್ಮ ಬದುಕು ಹಸನಾಗುತ್ತಿದೆ.

ಈಗ ಇರುವಕೆಲಸದ ಜೊತೆ ಜೊತೆಯಲ್ಲಿಯೇ ನೇಕಾರ ಉದ್ಯಮವನ್ನು ಕೈಗೊಂಡಿದ್ದೇವೆ. ಪೂಜಾ,ಯೋಗಮ್ಯಾಟ್‌, ಮನೆಗಳಿಗೆ ಬಳಸುವ ಮ್ಯಾಟ್‌ಗಳನ್ನು ತಯಾರು ಮಾಡಿ ಮಾರಾಟಮಾಡುತ್ತಿದ್ದೇವೆ. 2000 ರೂ. ಬಂಡವಾಳ ಹೂಡಿ8000 ರೂ. ಆದಾಯ ಪಡೆಯುತ್ತಿದ್ದೇವೆ ಎಂದುಸೌಲಭ್ಯ ಪಡೆದ ಮಹಿಳೆಯರು ತಿಳಿಸಿದರು.

ಟಾಪ್ ನ್ಯೂಸ್

Desi Swara: ಸಾಧನೆಗೆ ಆತ್ಮಸಂತೃಪ್ತಿಯೇ ಅಳತೆಗೋಲು : ಸಾಮಾಜಿಕ ಸಾಧನೆ ಸ್ವಾರ್ಥವಾಗದಿರಲಿ

Desi Swara: ಸಾಧನೆಗೆ ಆತ್ಮಸಂತೃಪ್ತಿಯೇ ಅಳತೆಗೋಲು : ಸಾಮಾಜಿಕ ಸಾಧನೆ ಸ್ವಾರ್ಥವಾಗದಿರಲಿ

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Kundapura: ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು

Kundapura: ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು…

Yala Kunni Movie Review

Yala Kunni Review: ಜಾಲಿ ಜಾಲಿ… ಎಲ್ಲಾ ಜಾಲಿ!

United States: ಜಗತ್ತಿನ ಅಣ್ಣ ಗೊರೂರು: ನಮ್ಮೂರೇ ನಮಗೇ ಶಾಶ್ವತ

United States: ಜಗತ್ತಿನ ಅಣ್ಣ ಗೊರೂರು: ನಮ್ಮೂರೇ ನಮಗೇ ಶಾಶ್ವತ

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

Lady don: ದೆಹಲಿಯ ಬರ್ಗರ್ ಕಿಂಗ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಲೇಡಿ ಡಾನ್ ಅರೆಸ್ಟ್

Lady don: ದೆಹಲಿಯ ಬರ್ಗರ್ ಕಿಂಗ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಲೇಡಿ ಡಾನ್ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

5

Gundlupete: ಎರಡು ಬೈಕ್ ಗಳ ನಡುವೆ ಅಪಘಾತ; ಇಬ್ಬರು ಸಾವು

10-gundlupete

Gundlupete: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕಾಡಾನೆ

14(1)

Gundlupete: 3 ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ

Thief

Chamarajnagar: ಪೊಲೀಸ್ ಪೇದೆಯ ಮನೆಯಲ್ಲೇ ಕೈ ಚಳಕ ತೋರಿದ ಚಾಲಾಕಿ ಕಳ್ಳರು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

jagadish shettar

Loksabha: ವಾಣಿಜ್ಯ ಹಾಗೂ ಕೈಗಾರಿಕೆ ಸಂಸದೀಯ ಸಲಹಾ ಸಮಿತಿಯ ಸದಸ್ಯರಾಗಿ ಶೆಟ್ಟರ್ ನೇಮಕ

Desi Swara: ಸಾಧನೆಗೆ ಆತ್ಮಸಂತೃಪ್ತಿಯೇ ಅಳತೆಗೋಲು : ಸಾಮಾಜಿಕ ಸಾಧನೆ ಸ್ವಾರ್ಥವಾಗದಿರಲಿ

Desi Swara: ಸಾಧನೆಗೆ ಆತ್ಮಸಂತೃಪ್ತಿಯೇ ಅಳತೆಗೋಲು : ಸಾಮಾಜಿಕ ಸಾಧನೆ ಸ್ವಾರ್ಥವಾಗದಿರಲಿ

8-bng

Bengaluru: 1.5 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Kundapura: ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು

Kundapura: ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.