ಕೊರೊನಾಜನಕ ಕಥೆಗಳು: ಸೋಂಕಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ನಡೆದಿದ್ದು ಹೀಗೆ.. :

ಮುಸ್ಲಿಂ ಯುವಕರಿಂದ ಮಹಿಳೆ, ವೃದ್ಧನ ಅಂತ್ಯಕ್ರಿಯೆ , ಕಳೆದ ವಾರ ಪತಿ ಕಳೆದುಕೊಂಡಿದ್ದ ಪತ್ನಿಯನ್ನೂ ಬಲಿ ಪಡೆ¨ ‌ಕೋವಿಡ್

Team Udayavani, Apr 27, 2021, 12:16 PM IST

ಕೊರೊನಾಜನಕ ಕಥೆಗಳು: ಸೋಂಕಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ನಡೆದಿದ್ದು ಹೀಗೆ.. :

ಹುಣಸೂರು: ಕೋವಿಡ್ ಕಾಲದ ದಾರುಣಕಥೆಗಳು ಇವು. ಕೋವಿಡ್‌ ಸೋಂಕಿತರಾಗಿಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟ ಇಬ್ಬರ ಶವಗಳು ಅನಾಥವಾಗಿದ್ದವು. ಅವರ ಸಂಬಂಧಿಕರ್ಯಾರೂ ಬಾರದ ಕಾರಣ ಮುಸ್ಲಿಂ ಯುವಕರು ಮುಂದಾಳತ್ವ ವಹಿಸಿ ಅಂತ್ಯಸಂಸ್ಕಾರ ನೆರವೇರಿಸಿ, ಮಾನವೀಯತೆ ಮೆರೆದರು.

ನಗರದ ಗೋಕುಲ ಬಡಾವಣೆ ನಿವಾಸಿ ವತ್ಸಲಾ (53) ಹಾಗೂ ತಾಲೂಕಿನ ಹಬ್ಬನಕುಪ್ಪೆಯ ವೃದ್ಧ ಸಣ್ಣತಿಮ್ಮೇಗೌಡ (80) ಮೃತ ದುರ್ದೈವಿಗಳು.

ವಿಧಿಯಾಟ: ವಿಧಿಯಾಟ ಹೇಗಿತ್ತು ಎಂದರೆ ವತ್ಸಲ ಅವರ ಪತಿ ಗೋವಿಂದರಾಜು (65)ಇತ್ತೀಚೆಗಷ್ಟೇ ಕೋವಿಡ್ ದಿಂದ ಮೃತಪಟ್ಟಿದ್ದರು. ಇದೀಗ ಪತ್ನಿ ಕೂಡ ಪತಿಯನ್ನು ಸೇರಿಕೊಂಡಿದ್ದಾರೆ. ಈ ದಂಪತಿಗೆ 21 ವರ್ಷ ಓರ್ವ ಪುತ್ರಿಯಿದ್ದು, ತಾಯಿಯ ಶವದಮುಂದೆ ಈಕೆ ರೋದಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಿನಲ್ಲಿ ನೀರು ಬರಿಸಿತು. ಮತ್ತೂಂದು ಪ್ರಕರಣದಲ್ಲಿ ವೃದ್ಧ ಸಣ್ಣತಿಮ್ಮೇಗೌಡಅವರ ಸಂಬಂಧಿಕರು ಯಾರೂ ಬಾರದ ಕಾರಣ ಅನಾಥವಾಗಿದ್ದರಿಂದ ಮುಸ್ಲಿಂ ಯುವಕರೇ ಅಂತ್ಯಕ್ರಿಯೆ ನಡೆಸಿದರು.

ಸಾರ್ವಜನಿಕ ಆಸ್ಪತ್ರೆಯಕೋವಿಡ್‌ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವತ್ಸಲಾ (53) ಹಾಗೂ ಹಬ್ಬನಕುಪ್ಪೆಯ ವೃದ್ಧ ಸಣ್ಣತಿಮ್ಮೇಗೌಡ(80) ಭಾನುವಾರ ರಾತ್ರಿ ಸಾವನ್ನಪ್ಪಿದ್ದರು. ವಾರದ ಹಿಂದೆ ಪತಿ ಸಾವು: ವತ್ಸಲಾ ಅವರ ಪತಿ ಗೋವಿಂದರಾಜು (65) ಸಹ ವಾರದಿಂದಷ್ಟೆ ಕೋವಿಡ್ ಸೋಂಕಿನಿಂದ ಮೈಸೂರಿನಲ್ಲಿ ಮೃತಪಟ್ಟಿದ್ದರು. ಅಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇವರೊಂದಿಗಿದ್ದ ವತ್ಸಲಾ ಅವರಿಗೂ ಸೋಂಕು ತಗುಲಿತ್ತು. ಇದೀಗ ತಾಯಿಯೊಂದಿಗಿದ್ದ ಪುತ್ರಿಯಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ.

ಅನಾಥವಾಗಿದ್ದ ಶವಗಳು: ಮುಂಜಾನೆಯೇ ಸೋಂಕಿತರ ಶವಗಳನ್ನು ಶವಾಗಾರದಲ್ಲಿರಿಸಿಲಾಗಿತ್ತು. ವತ್ಸಲಾ ಅವರ ಪುತ್ರಿ ಶವಾಗಾರದ ಬಳಿ ಒಬ್ಬೊಂಟಿಯಾಗಿ ರೋದಿಸುತ್ತಿದ್ದರೆ, ಸಣ್ಣತಮ್ಮೇಗೌಡರ ಕುಟುಂಬದವರು ಸಹ ಬೆಳಗ್ಗೆ 11ರವರೆಗೂ ಶವ ಕೊಂಡೊಯ್ಯಲು ಬಾರದೆ ಶವಗಳು ಅನಾಥವಾಗಿದ್ದವು.

ಶಾಸಕರ ತರಾಟೆ: ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಎಚ್‌.ಪಿ.ಮಂಜುನಾಥ್‌, ಮುಂಜಾನೆಯೇ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಶವವನ್ನು ವಿಲೇವಾರಿ ಮಾಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಗರಸಭೆ ಪೌರಾಯುಕ್ತ ರಮೇಶ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, “ಶವಅಂತ್ಯಸಂಸ್ಕಾರ ಮಾಡಲು ಕೊಂಡೊಯ್ಯಲುಸಿಬ್ಬಂದಿಯನ್ನೇಕೆ ಕಳುಹಿಸಿಲ್ಲ. ಸಾವನ್ನಪ್ಪಿರುವ ಬಗ್ಗೆ ನಗರಸಭೆ ಅಧಿಕಾರಿಗಳು ದೃಢೀರಿಸಬೇಕಲ್ಲವೇ, ಇನ್ನೂ ನಿಮ್ಮ ಅಧಿಕಾರಿಗಳನ್ನು ಏಕೆ ಕಳುಹಿಸಿಲ್ಲ’ ತರಾಟೆ ತೆಗೆದುಕೊಂಡರು. ಈ ವೇಳೆ ಸಮಾಜಾಯಿಸಿ ನೀಡಿದ ಪೌರಾಯುಕ್ತರು, ನಂತರ ಸಿಬ್ಬಂದಿಗಳೊಂದಿಗೆ ಆಗಮಿಸಿ ಸೋಂಕಿತ ಮಹಿಳೆಶವವನ್ನು ಚಿರಶಾಂತಿಧಾಮಕ್ಕೆ ಕೊಂಡೊಯ್ಯಲು ಸೂಚಿಸಿದರು

ಶವ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು :

ಕೋವಿಡ್ ದಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ಶವಸಂಸ್ಕಾರ ನಡೆಸಲು ಇಬ್ಬರ ಕಡೆಯವರು ಬಂದಿರಲಿಲ್ಲ, ವಿಷಯ ತಿಳಿದ ಶಾಸಕ ಎಚ್‌.ಪಿ.ಮಂಜುನಾಥ್‌ ಆಸ್ಪತ್ರೆ ಬಳಿಗೆ ಧಾವಿಸಿ, ತಾವೇ ಕೋವಿಡ್ ರೋಗಿಗಳಿಗೆ ಅನುಕೂಲಕ್ಕಾಗಿ ನಿಯೋಜಿಸಿರುವ ಸ್ನೇಹಜೀವಿ ಬಳಗದ ಉಚಿತ ಆ್ಯಂಬ್ಯುಲೆನ್ಸ್‌ ಮೂಲಕ ಚಾಲಕ ಖಾಸಿಫ್‌ಖಾನ್‌, ಅಬ್ರಾರ್‌ ಹಾಗೂ ಇಫ್ತಾರ್‌ನನ್ನು ಕಳುಹಿಸಿಕೊಟ್ಟರು. ಇವರು ಪಿಪಿಟಿ ಕಿಟ್‌ ಧರಿಸಿ ಸಣ್ಣತಿಮ್ಮೇಗೌಡರ ಶವವನ್ನು ತಾಲೂಕಿನ ಹನಗೋಡು ಹೋಬಳಿಯ ಹಬ್ಬನಕುಪ್ಪೆಗೆ ಕೊಂಡೊಯ್ದು, ಅವರ ಕುಟುಂಬದವರ ಸಮ್ಮುಖದಲ್ಲಿ ತಾವೇ ಶವ ಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದರು.

ಇವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದರು. ಶಾಸಕರು ಸಹ ಸ್ನೇಹಜೀವಿ ಬಳಗದ ಕಾರ್ಯವನ್ನು ಪ್ರಶಂಸಿಸಿದರು. ಹುಣಸೂರಿನ ವತ್ಸಲ ಅವರ ಶವವನ್ನು ನಗರಸಭೆಯ ಸಿಬ್ಬಂದಿ ಶವ ಸಾಗಿಸುವ ವಾಹನದ ಮೂಲಕ ಬೈಪಾಸ್‌ ರಸ್ತೆಯ ಸ್ಮಶಾನಕ್ಕೆ ಕೊಂಡೊಯ್ದು ಕುಟುಂಬದವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಿದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.