ವ್ಯಾಕ್ಸಿನ್‌ ಚಾಲೆಂಜ್‌: ಜಿ.ಪಂ.ನಿಂದ 50 ಲಕ್ಷ ರೂ. ದೇಣಿಗೆ


Team Udayavani, Apr 30, 2021, 3:40 AM IST

ವ್ಯಾಕ್ಸಿನ್‌ ಚಾಲೆಂಜ್‌: ಜಿ.ಪಂ.ನಿಂದ  50 ಲಕ್ಷ ರೂ. ದೇಣಿಗೆ

ಕಾಸರಗೋಡು: ವ್ಯಾಕ್ಸಿನ್‌ ಚಾಲೆಂಜ್‌ ಅಂಗವಾಗಿ ಕಾಸರಗೋಡು ಜಿಲ್ಲಾ ಪಂಚಾಯತ್‌ನಿಂದ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಲು ಜಿಲ್ಲಾ ಪಂಚಾಯತ್‌ ಸಭೆ ತೀರ್ಮಾನಿಸಿದೆ.

ಬುಧವಾರ ನಡೆದ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌ ಅವರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಈ ನಿಟ್ಟಿನಲ್ಲಿ ವ್ಯಾಕ್ಸಿನ್‌ ಚಾಲೆಂಜ್‌ಗೆ ನೀಡಲಿದ್ದಾರೆ.

ಚಟ್ಟಂಚಾಲಿನ ಉದ್ದಿಮೆ ಉದ್ಯಾನದಲ್ಲಿ ತ್ರಿಸ್ತರ ಪಂಚಾಯತ್‌ಗಳು ಮತ್ತು ನಗರ ಸಭೆಗಳು ಜಂಟಿ ವತಿಯಿಂದ ಆಕ್ಸಿಜನ್‌ ಪ್ಲಾಂಟ್‌ ಸ್ಥಾಪಿಸಲಿವೆ. ಈ ನಿಟ್ಟಿನಲ್ಲಿ ಅಗತ್ಯ ವಿರುವ ಜಾಗ ಮತ್ತು 50 ಲಕ್ಷ ರೂ.ವನ್ನು ಜಿಲ್ಲಾ ಪಂಚಾಯತ್‌ ಮಂಜೂರು ಮಾಡಲಿದೆ ಎಂದು ಸಭೆ ತಿಳಿಸಿದೆ. ಗ್ರಾಮ ಪಂಚಾಯತ್‌ಗಳು ತಲಾ 3 ಲಕ್ಷ ರೂ., ಬ್ಲಾಕ್‌ ಪಂಚಾಯತ್‌ಗಳು ಮತ್ತು ನಗರಸಭೆಗಳು ತಲಾ 5 ಲಕ್ಷ ರೂ. ಈ ನಿಟ್ಟಿನಲ್ಲಿ ಮೀಸಲಿರಿಸಲಿವೆ. ಇದರಲ್ಲಿ ಜಿಲ್ಲಾ ಯೋಜನೆ ಸಮಿತಿಯ ತೀರ್ಮಾನ ಅಂತಿಮವಾಗಿರುವುದು.

ಮೇ 1ರಿಂದ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಮನೆಗಳಿಗೆ ತೆರಳಿ ಕೋವಿಡ್‌ ವ್ಯಾಕ್ಸಿನ್‌ ನೀಡುವ ಯೋಜನೆಯನ್ನು ಜಿಲ್ಲಾ ಆರೋಗ್ಯ ವಿಭಾಗ, ರಾಷ್ಟ್ರೀಯ ಆರೋಗ್ಯ ದೌತ್ಯಗಳೊಂದಿಗೆ ಸೇರಿ ಜಿಲ್ಲಾ ಪಂಚಾಯತ್‌ ಜಾರಿಗೊಳಿಸಲಿದೆ. ತದನಂತರ ಅಂಗವಿಕಲರಿಗೆ ವ್ಯಾಕ್ಸಿನ್‌ ಸೌಲಭ್ಯ ಒದಗಿಸಲಾಗುವುದು ಎಂದು ಸಭೆ ತಿಳಿಸಿದೆ.

ಶುಕ್ರವಾರ ಪಾರೆಂಟಿಂಗ್‌ ಕ್ಲಿನಿಕ್‌ಗಳ ಸೇವೆ :

ವಾರಾಂತ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ 6 ಬ್ಲಾಕ್‌ಗಳ ಐ.ಸಿ.ಡಿ.ಎಸ್‌. ಕಚೇರಿ ಗಳಲ್ಲಿ ಪ್ರತಿ ಶನಿವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ವರೆಗೆ ನಡೆಸಲಾಗುತ್ತಿದ್ದ ಪಾರೆಂಟಿಂಗ್‌ ಕ್ಲಿನಿಕ್‌ಗಳ ಸೇವೆ ಈ ಬಾರಿ ಶುಕ್ರವಾರ ನಡೆಸಲಾಗುವುದು.

ಕೇರಳದಲ್ಲಿ  ಹೆಚ್ಚುತ್ತಿರುವ ಆಮ್ಲಜನಕ ಬೇಡಿಕೆ :

ಕೋವಿಡ್‌ ಹರಡುವಿಕೆ ತೀವ್ರಗೊಂಡಿರುವಾಗಲೇ ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಿದೆ. ದಿನಂಪ್ರತಿ 2 ಟನ್‌ಗಳಷ್ಟು ಆಮ್ಲಜನಕವು ಹೆಚ್ಚುವರಿಯಾಗಿ ಬೇಕಾಗುತ್ತಿದೆ. ಒಂದು ವಾರದ ಹಿಂದಿನವರೆಗೆ ದಿನಂಪ್ರತಿ 76ರಿಂದ 86 ಟನ್‌ ಆಮ್ಲಜನಕ ಸಾಕಾಗುತ್ತಿತ್ತು. ಆದರೆ ಇದೀಗ ಅದರ ಬೇಡಿಕೆ 96 ಟನ್‌ಗೆàರಿದೆ. ಎಪ್ರಿಲ್‌ ತಿಂಗಳ ಕೊನೆಯ ವೇಳೆಗೆ 100 ಟನ್‌ಗಿಂತ ಹೆಚ್ಚು ಆಮ್ಲಜನಕ ಬೇಕಾಗಿ ಬರಬಹುದೆಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಕೋವಿಡ್‌ ಸೋಂಕಿತರಿಗಾಗಿ ಪ್ರತೀ ದಿನ 30ರಿಂದ 35ಟನ್‌ ಆಮ್ಲಜನಕ ಬೇಕಾಗುತ್ತಿತ್ತು. ಕೋವಿಡೇತರ ಅಗತ್ಯಗಳಿಗೆ ದಿನಂಪ್ರತಿ 45 ಟನ್‌ ಆಮ್ಲಜನಕ ಬೇಕಾಗುತ್ತದೆ. ಎ. 24ರಿಂದ ಪ್ರತೀ ದಿನ 95 ಟನ್‌ ಆಮ್ಲಜನಕ ಬೇಕಾಗಿ ಬರುತ್ತಿದೆ. ಇದೇ ವೇಳೆ ದಿನಂಪ್ರತಿ 200 ಟನ್‌ಗಳಷ್ಟು ಆಮ್ಲಜನಕ ಉತ್ಪಾದಿಸುವ ಶಕ್ತಿ ಕೇರಳಕ್ಕಿದೆ.

ಶೀಘ್ರದಲ್ಲಿ  ಆಕ್ಸಿಜನ್‌ ಪ್ಲಾಂಟ್‌ ಸ್ಥಾಪನೆ  :

ಕಾಸರಗೋಡು ಜಿಲ್ಲೆಯಲ್ಲಿ ಶೀಘ್ರದಲ್ಲಿ ಆಕ್ಸಿಜನ್‌ ಪ್ಲಾಂಟ್‌ ಸ್ಥಾಪನೆಗೊಳ್ಳಲಿದೆ. ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಚಟ್ಟಂಚಾಲ್‌ ಉದ್ದಿಮೆ ಉದ್ಯಾನದಲ್ಲಿ ಈ ಪ್ಲಾಂಟ್‌ ಸ್ಥಾಪನೆ ಗೊಳ್ಳಲಿದೆ. ಇದರ ಅಂಗವಾಗಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌, ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ವಿಶೇಷ ಅಧಿಕಾರಿ ಇ.ಪಿ. ರಾಜ್‌ ಮೋಹನ್‌, ಹಣಕಾಸು ಅಧಿಕಾರಿ ಸತೀಶನ್‌, ಉದ್ದಿಮೆ ಕೇಂದ್ರ ಪ್ರಬಂಧಕ ಸಜಿತ್‌ ಅವರ ನೇತೃತ್ವದ ತಂಡ ಸದ್ರಿ ಜಾಗವನ್ನು ಪರಿಶೀಲಿಸಿತು.

ಟಾಪ್ ನ್ಯೂಸ್

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

siddaramaiah

Siddaramaiah ಬೆಂಬಲಿಸಿ ಅಹಿಂದದಿಂದ ಹುಬ್ಬಳ್ಳಿ-ಬೆಂಗಳೂರು ಜಾಗೃತಿ ಜಾಥಾ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಅಮೀಬಿಕ್‌ ಎನ್ಸೆಫಾಲಿಟಿಸ್‌ ಬಗ್ಗೆ ಎಚ್ಚರದಿಂದಿರಿ’

Kasaragod: “ಅಮೀಬಿಕ್‌ ಎನ್ಸೆಫಾಲಿಟಿಸ್‌ ಬಗ್ಗೆ ಎಚ್ಚರದಿಂದಿರಿ’

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

Kasaragod ಇಲಿ ಜ್ವರ: ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

8

Virajpete: ಮನೆಯಂಗಳದಲ್ಲಿ ಕಾಡಾನೆ; ಗ್ರಾಮಸ್ಥರಲ್ಲಿ ಆತಂಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

12-thirthahalli

ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ; ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು!

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

5(1)

Surathkal: ಹೊಸ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ ಬೀಚುಗಳು!

eshwarappa

Siddaramaiah ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು; ಅನ್ಯಾಯವಾಗಬಾರದು: ಈಶ್ವರಪ್ಪ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.