ಜಮಖಂಡಿಯಲ್ಲಿ 100 ಹಾಸಿಗೆಗಳ ಕೋವಿಡ್ ಸೆಂಟರ್
Team Udayavani, May 2, 2021, 7:04 PM IST
ಜಮಖಂಡಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜಿಲ್ಲೆಗೊಂದು ಕೊರೊನಾ ಸೆಂಟರ್ ನಿರ್ಮಿಸಿದೆ. ಆದರೆ, ತಾಲೂಕಿನಲ್ಲಿ ಸಹಕಾರಿ ತತ್ವದಡಿಯಲ್ಲಿ ಕೊರೊನಾ ಸೆಂಟರ್ ಆರಂಭಿಸುವ ಚಿಂತನೆಗಳು ನಡೆದಿವೆ.
ತಾಲೂಕಿನಲ್ಲಿ ಸರಕಾರಿ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 100 ಹಾಸಿಗೆಗಳ ಕೊರೊನಾ ಸೆಂಟರ್ ಆರಂಭಿಸುವ ಚಿಂತನೆ ನಡೆದಿದ್ದು, ಎರಡು ದಿನಗಳಲ್ಲಿ ರೂಪರೇಷೆ ಪೂರ್ಣಗೊಳ್ಳಲಿವೆ. ಕೊರೊನಾ ಸೋಂಕಿತರಿಗೆ ದಿನದ 24 ಗಂಟೆ ಸೇವೆ ಲಭಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಸರಕಾರಿ ಯಂತ್ರ ಮತ್ತು ಖಾಸಗಿ ಸಂಸ್ಥೆಗಳು ಅಂದಾಜು 70:30 ಅನುಪಾತದಲ್ಲಿ ಕೆಲಸ ನಡೆಯಲಿದೆ.
ಶೇ.70ರ ಅನುಪಾತದಲ್ಲಿ:
100 ಹಾಸಿಗೆ ಕೊರೊನಾ ಸೆಂಟರ್ ಆರಂಭಕ್ಕೆ ಚಿಂತನೆಗಳು ನಡೆಯುತ್ತಿದ್ದು, ಆರೋಗ್ಯ, ಕಂದಾಯ ಇಲಾಖೆ, ನಗರಸಭೆ ಮತ್ತು ಪೊಲೀಸ್ ಇಲಾಖೆ ಆರಕ್ಷಕರು ಶೇ. 70ರ ಅನುಪಾತದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಆರೋಗ್ಯ ಇಲಾಖೆ ವಿವಿಧ ವಿಭಾಗಗಳ ವೈದ್ಯರು, ನಸ್ ìಗಳು, ಆರೋಗ್ಯ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಸೇವೆ ಮಾಡಲಿದ್ದಾರೆ. ಕಂದಾಯ ಇಲಾಖೆ 100 ಹಾಸಿಗೆ ಕೊರೊನಾ ಸೆಂಟರಕ್ಕೆ ಅಗತ್ಯ ಸುಸಜ್ಜಿತ ಕಟ್ಟಡ ನೀಡಲಿದೆ. ಪೊಲೀಸ್ ಇಲಾಖೆ ಕೊರೊನಾ ಸೆಂಟರ್ ಒಳ-ಹೊರಾಂಗಣ ಭದ್ರತೆ ವಹಿಸಿಕೊಳ್ಳಲಿದೆ. ನಗರಸಭೆ ಕೊರೊನಾ ಸೆಂಟರ್ ಒಳಗೆ- ಹೊರಗಡೆ ಸ್ವತ್ಛತೆ ಕಾಪಾಡಲಿದೆ. ಆಶಾ ಕಾರ್ಯಕರ್ತೆಯರು ರೋಗಿಗಳ ಚಲನವಲನ-ಆರೋಗ್ಯ ವಿಚಾರಣೆ ನಡೆಸಲಿದ್ದಾರೆ.
ಶೇ.30ರ ಅನುಪಾತ:
ಸಹಕಾರ ತತ್ವದಡಿಯಲ್ಲಿ ನಿರ್ಮಾಣವಾಗಲಿರುವ ಕೊರೊನಾ ಸೆಂಟರ್ದಲ್ಲಿ ಖಾಸಗಿ ವೈದ್ಯರ ಪಾತ್ರ ಬಹುಮುಖ್ಯ. ದಿನದ 24 ಗಂಟೆ ಸೇವೆ ನಿರ್ವಹಿಸುವ ಕೊರೊನಾ ಸೆಂಟರ್ ದಲ್ಲಿ 8 ಗಂಟೆ ನಿಗದಿಪಡಿಸಿದ ಅವಧಿ ಯಲ್ಲಿ ಮೂರು ವಿಭಾಗದಲ್ಲಿ ವೈದ್ಯರು, ನರ್ಸ್ಗಳ ತಂಡ ಕೆಲಸ ನಿರ್ವಹಿಸುವ ಯೋಜನೆ ಇದಾಗಿದೆ. 24 ಗಂಟೆ ಸೇವೆ ಸಲ್ಲಿಸುವ ಕೊರೊನಾ ಸೆಂಟರ್ನಲ್ಲಿ ರೋಗಿಗಳಿಗೆ ನೀರು, ವಿದ್ಯುತ್, ಶೌಚಾಲಯ, ಸ್ವತ್ಛತೆ, ಭದ್ರತೆ, ಉಪಹಾರ, ಊಟದ ವ್ಯವಸ್ಥೆ ನಡೆಯಲಿದೆ. ಈಗಾಗಲೇ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಂದಾಯ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಯ ಖಾಸಗಿ ಆಸ್ಪತ್ರೆಗಳ ವೈದ್ಯರ ಜಂಟಿ ಸಭೆ ನಡೆದಿದ್ದು, ಬಹುತೇಕ ಯಶಸ್ವಿಯಾಗಿದೆ. ತಾಲೂಕಿನ ಕೊರೊನಾ ಸೋಂಕಿತರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.
ಕಂದಾಯ ಇಲಾಖೆ 100 ಹಾಸಿಗೆಯ ಸುಸಜ್ಜಿತ ಕಟ್ಟಡ ನೀಡಲಿದೆ. ಆರೋಗ್ಯ ಇಲಾಖೆ ಆಕ್ಸಿಜನ್, ರೋಗಿಗಳಿಗೆ ಪಿಪಿ ಕಿಟ್, ಔಷಧಿ ಸಹಿತ ಇತರೇ ಪರಿಕರ ನೀಡಲಿದೆ. ಪೊಲೀಸ್ ಇಲಾಖೆ ಸುರಕ್ಷತೆ, ಭದ್ರತೆ ವ್ಯವಸ್ಥೆ ಮಾಡಲಿದೆ. ನಗರಸಭೆ ಕಾರ್ಮಿಕರು ಸ್ವತ್ಛತೆ ಕಾಪಾಡಲಿದೆ. ಖಾಸಗಿ ವೈದ್ಯರ ತಂಡ ದಿನದ 24 ಗಂಟೆ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
Bagalkote: ಆನ್ಲೈನ್ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ
ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ
ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.