ರೈತರಿಗೆ ವರದಾನವಾದ ಮಳೆ
Team Udayavani, May 3, 2021, 10:56 PM IST
ಶೃಂಗೇರಿ: ಕಳೆದ ಒಂದು ವಾರದಿಂದ ಬೇಸಿಗೆ ಮಳೆ ಆಗುತ್ತಿದ್ದು, ರೈತರಿಗೆ ವರದಾನವಾಗಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಜನವರಿಯಿಂದ ಮಳೆಯಾಗಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ಅಕಾಲಿಕ ಮಳೆ ಸುರಿದಿತ್ತು. ರೈತರು ತೋಟಗಾರಿಕೆ ಬೆಳೆಗಳಿಗೆ ವಿವಿಧ ಜಲಮೂಲದಿಂದ ತೋಟಗಳಿಗೆ ನೀರು ಹಾಯಿಸುತ್ತಿದ್ದರು.
ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ತಾಲೂಕಿನ ಬಹುತೇಕ ಭಾಗದಲ್ಲಿ ಸುರಿದ ಮಳೆಯಿಂದ ತೋಟಗಳಿಗೆ ನೀರಿನ ಪೂರೈಕೆ ಮಾಡುವುದು ತಪ್ಪಿದ್ದು, ರೈತರಿಗೆ ಆರ್ಥಿಕ ಹೊರೆಯೂ ಕಡಿಮೆ ಆಗಿದೆ. ಕೆಲಸವೂ ಕಡಿಮೆಯಾಗು ವಂತಾಗಿದೆ. ಸಕಾಲಕ್ಕೆ ಮಳೆ ಬಂದಲ್ಲಿ ಮಾತ್ರ ಕಾಫಿ, ಅಡಕೆ, ಕಾಳುಮೆಣಸಿಗೆ ಅನುಕೂಲವಾಗಲಿದೆ. ಈ ವರ್ಷ ಉತ್ತಮ ಮಳೆಯಿಂದ ಮೆಸ್ಕಾಂಗೆ ವಿದ್ಯುತ್ ಉಳಿತಾಯವಾಗಿದೆ. ಇನ್ನು ಕೆಲ ರೈತರು ಡೀಸೆಲ್ ಮೋಟಾರ್ ಮೂಲಕ ನೀರೆತ್ತುತ್ತಿದ್ದರು.ದಿನ ಬಿಟ್ಟು ದಿನ ಮಳೆ ಬರುತ್ತಿರುವುದನ್ನು ಗಮನಿಸಿ, ಕೆಲವು ರೈತರು ಕಾಫಿತೋಟಕ್ಕೆ ಮುಂಗಾರು ಆರಂಭದ ರಸಗೊಬ್ಬರವನ್ನು ನೀಡಲಾರಂಭಿಸಿದ್ದಾರೆ.
ಭತ್ತದ ಗದ್ದೆ ಉಳುಮೆ: ಬೇಸಿಗೆಯ ಉತ್ತಮ ಮಳೆಯಿಂದ ಭತ್ತದ ಗದ್ದೆ ಹದವಾಗಿದ್ದು, ಗದ್ದೆಯ ಉಳುಮೆ ಆರಂಭಗೊಂಡಿದೆ. ಬೇಸಿಗೆಯಲ್ಲಿ ಉಳುಮೆ ಮಾಡಿ ಹಸಿರೆಲೆ ಗೊಬ್ಬರದ ಬೀಜ ಅಥವಾ ಹುರುಳಿ ಬೀಜ ಬಿತ್ತನೆ ಮಾಡುವುದರಿಂದ ಮುಂಬರುವ ಭತ್ತದ ಫಸಲಿಗೆ ಗೊಬ್ಬರದ ರೂಪದಲ್ಲಿ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್ ನಲ್ಲಿ ಲೈಂಗಿಕ ಕಿರುಕುಳ ಆರೋಪ
Mudigere: 30 ಅಡಿ ಎತ್ತರದಿಂದ ಪಂಚಾಯತ್ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ
CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ
Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!
Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.