ಬಹು ಸಂಸ್ಕೃತಿಯ ದೇಶದಲ್ಲಿ ಏಕ ಸಂಸ್ಕೃತಿ ತರಲು ಹೊರಟವರಿಗೆ ಮತದಾರರಿಂದ ಉತ್ತರ:ವೈಎಸ್ವಿ ದತ್ತ
Team Udayavani, May 3, 2021, 11:11 PM IST
ಕಡೂರು: ರಾಜಕೀಯ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಪಂಚರಾಜ್ಯ ಚುನಾವಣೆ ಫಲಿತಾಂಶದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಅವರು, ಆಡಳಿತ ವಿರೋಧಿ ಅಲೆ ಮತ್ತು ಪ್ರಾದೇಶಿಕತೆಯ ಒಲವು ಇಲ್ಲಿನ ಪ್ರಮುಖ ಸಂಗತಿಯಾಗಿದೆ ಎಂದರು. ಬಹುಸಂಸ್ಕೃತಿಯ ದೇಶದಲ್ಲಿ ಏಕಸಂಸ್ಕೃತಿಯನ್ನು ತರಲು ಹೊರಟ ಪಕ್ಷಕ್ಕೆ ಜನತೆ ಉತ್ತರ ನೀಡಿದ್ದಾರೆ.
ಮಮತಾ ಬ್ಯಾನರ್ಜಿಯವರಂತೂ ಬಂಗಾಳಿ ಸಂಸ್ಕೃತಿಯನ್ನೇ ಚುನಾವಣಾ ಪ್ರಣಾಳಿಕೆಯನ್ನಾಗಿಸಿದ್ದರು. ಜನತೆ ತಮ್ಮ ಸಂಸ್ಕೃತಿಯನ್ನುಳಿಸಿಕೊಳ್ಳುವ ಛಲ ತೋರಿದ್ದಾರೆ ಎಂದರು.
ಏಕವ್ಯಕ್ತಿ ನಾಯಕತ್ವ ಕೇಂದ್ರೀಕೃತ ಪಕ್ಷವು ಆ ವ್ಯಕ್ತಿಯ ಭಾರಕ್ಕೆ ತಾನೇ ಬಿದ್ದುಹೋಗುತ್ತದೆ ಎಂಬುದು ಇತಿಹಾಸ. ನೆಹರೂ, ಇಂದಿರಾ ಗಾಂಧಿ ಸರ್ಕಾರಗಳ ಪರಿಸ್ಥಿತಿ ಹೀಗೆಯೇ ಇತ್ತೆಂಬುದು ಇತಿಹಾಸ. ಮೂರನೇ ಅವಧಿ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಎರಡು ಅವ ಧಿ ಅಧಿ ಕಾರ ನಡೆಸಿದ ಪಕ್ಷದ ಆಡಳಿತ ವೈಖರಿಗೆ ಈ ಚುನಾವಣೆಯ ಫಲಿತಾಂಶ ಸ್ಪಷ್ಟ ಸಂದೇಶ ನೀಡಿದೆ ಎಂದು ನರೇಂದ್ರ ಮೋದಿ ಅವರ ಸರ್ಕಾರದ ವೈಫಲ್ಯ ಸಾಬೀತಾಗಿದೆ ಎಂದರು.
ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಾರ್ಪೋರೆಟ್ ಸಂಸ್ಕೃತಿಯನ್ನು ಬಿಂಬಿಸುವ ಸರ್ಕಾರ ಆಡಳಿತಕ್ಕೆ ಬಂದರೆ ಏನಾಗುತ್ತದೆ ಎಂಬ ಚಿಂತನೆಯೇ ಈ ಫಲಿತಾಂಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಜಯಭೇರಿ ಬಾರಿಸಿದ್ದು. ಅವರು ಸೋತಿದ್ದಾರೆ. ಅಲ್ಲಿನ ಶಾಸಕಾಂಗ ಸಭೆಯಲ್ಲಿ ಮೊತ್ತೂಮ್ಮೆ ಮಮತಾ ಬ್ಯಾನರ್ಜಿ ಅವರನ್ನೇ ಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕಾರಣ ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಿವೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು.
ಆದರೂ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ 6 ತಿಂಗಳೊಳಗೆ ಶಿಗ್ಗಾವಿ ಕ್ಷೇತ್ರದ ಶಾಸಕರ ರಾಜೀನಾಮೆ ಕೊಡಿಸಿ ಅಲ್ಲಿಂದ ಆಯ್ಕೆಯಾಗಿ ಬಂದಿದ್ದರು ಎಂದರು. ಒಟ್ಟಾರೆ ಈ ಚುನಾವಣೆಯ ಫಲಿತಾಂಶ ಪ್ರಾದೇಶಿಕ ಪಕ್ಷಗಳ ಬಗೆಗಿನ ಒಲವನ್ನು ಮತ್ತೆ ಅನಾವರಣಗೊಳಿಸಿದೆ. ರಾಜ್ಯದಲ್ಲಿಯೂ ಆಡಳಿತ ವಿರೋ ಧಿ ಅಲೆ ಸ್ಪಷ್ಟವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಮೇಲಿನಕುರುವಳ್ಳಿ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿ ದರ್ಪ !
Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.