ಪ್ರಧಾನಿ ಮುನ್ನೆಚ್ಚರಿಕೆ ವಹಿಸಬೇಕಿತ್ತು


Team Udayavani, May 6, 2021, 5:48 PM IST

The Prime Minister had to take precautions

ಮಂಡ್ಯ: “ಪ್ರಧಾನಿ ಮೋದಿ ಅವರು ವಿಶ್ವ ಗುರುವಾಗಲುನಮ್ಮ ಲ್ಲಿದ್ದ ಲಸಿಕೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಂಗ್ರಹಿಸಿಡದೆ ಅನ್ಯ ದೇಶಗಳಿಗೆ ಕೊಟ್ಟರು. ಈಗ ನಾವೇ ಲಸಿಕೆಗೆ ಪರ ದಾಡುವ ಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದೇವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಕೊರೊನಾಸೋಂಕನ್ನು ನಿಯಂತ್ರಿಸಲು ನೀಡಲಾಗುತ್ತಿರುವ ಲಸಿಕೆಬಗ್ಗೆಯೂ ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಈಗಾಗಲೇ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಒಂದು ಡೋಸ್‌ಪಡೆದವರು ಎರಡನೇ ಡೋಸ್‌ ಪಡೆಯುವ ವೇಳೆಗೆ ಲಸಿಕೆ ಖಾಲಿಯಾಗಿದೆ.

ಕೋವಿಶೀಲ್ಡ್‌ ಲಸಿಕೆ ಉತ್ಪಾದನೆಯೂ ಕ್ಷೀಣಿಸಿದ್ದು, ಮುಂದಿನ ಜೂನ್‌-ಜುಲೈವರೆಗೆ ಲಸಿಕೆ ಸಿಗುವುದಿಲ್ಲವೆಂದು ಕಂಪನಿ ಹೇಳುತ್ತಿದೆ. ಯಾವ ಲಸಿಕೆಯನ್ನು ಪಡೆದವರುಎರಡನೇ ಡೋಸ್‌ ಆಗಿ ಅದೇ ಲಸಿಕೆಯನ್ನು ಪಡೆಯಬೇಕೇ,ಇಲ್ಲವೇ ಬೇರೆ ಲಸಿಕೆಯನ್ನೂ ಪಡೆದರೆ ಯಾವ ತೊಂದರೆಇಲ್ಲವೇ ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸದೆ ಜನರನ್ನು ಗೊಂದಲ ದಲ್ಲಿರಿಸಿದೆ. ನಮಗೆ ಈಗ 50 ಕೋಟಿ ವ್ಯಾಕ್ಸಿನ್‌ ತುರ್ತುಅವಶ್ಯಕತೆ ಇದೆ. ಅದು ಉತ್ಪಾದನೆಯಾಗಲು 5 ರಿಂದ 6ತಿಂಗಳು ಬೇಕಿದೆ. ಕೂಡಲೇ ವ್ಯಾಕ್ಸಿನ್‌ ಖರೀದಿಸಿ ಜನರ ಜೀವಉಳಿಸಬೇಕು ಎಂದು ಹೇಳಿದರು.

ತೇಜಸ್ವಿ ಸೂರ್ಯ ಹೇಳಿಕೆಗೆ ಕಿಡಿ: ಬೆಡ್‌ ಬ್ಲಾಕಿಂಗ್‌ಗೆ ಸಂಬಂಧಿಸಿ ದಂತೆ ಕೋವಿಡ್‌ ವಾರ್‌ ರೂಂನ ಮದರಸವಾಗಿಸಲುಹೊರಟಿದ್ದೀರಾ ಎಂಬ ಸಂಸದ ತೇಜಸ್ವಿಸೂರ್ಯ ಹೇಳಿಕೆವಿರುದ್ಧ ಕಿಡಿಕಾರಿದ ಅವರು, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಮಂದಿ ಸಾವನ್ನಪ್ಪಿದ ಅನಾಹುತವನ್ನು ಜನರಿಂದ ಮರೆಮಾಚಲು ಬಿಜೆಪಿ ನಾಯಕರು ಬೆಡ್‌ಬ್ಲಾಕಿಂಗ್‌ ವಿಷಯಕ್ಕೆ ಪುಷ್ಟಿ ನೀಡುತ್ತಿದ್ದಾರೆ ಎಂದುಆರೋಪಿಸಿದರು.

ಜಾತಿ ರಾಜಕಾರಣ: ಬೊಮ್ಮನಹಳ್ಳಿ ಕ್ಷೇತ್ರದ ಸೋಂಕಿತ ವ್ಯಕ್ತಿಗೆಆಕ್ಸಿಜನ್‌ ಕೊಡಿಸಲಾಗದ ಶಾಸಕ ಸತೀಶ್‌ರೆಡ್ಡಿ ಬೆಡ್‌ ಬ್ಲಾಕಿಂಗ್‌ದಂಧೆಯನ್ನು ಎಕ್ಸ್‌ಪೋಸ್‌ ಮಾಡಿದರೆಂದು ಬಿಂಬಿಸಿಕೊಳ್ಳಲುಹೊರಟಿರುವುದು ಅಸಹ್ಯಕರ ಬೆಳವಣಿಗೆ. ಜನರಲ್ಲಿ ವಿಶ್ವಾಸಮೂಡಿ ಸುವ ಕೆಲಸ ಮಾಡಿ. ಸುಮ್ಮನೆ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಸರ್ಕಾರ ಎಡವಿದೆ: ಕೊರೊನಾ ಸೋಂಕು ನಿಯಂತ್ರಣಮಾಡು ವಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಆಕ್ಸಿಜನ್‌ಕೊರತೆ ಯನ್ನೇ ಮುಂದಿಟ್ಟುಕೊಂಡು ರಾಜಕೀಯಮಾಡುವುದು ಸರಿಯಲ್ಲ ಎಂದು ಹೇಳಿದರು.ಸರ್ಕಾರಕ್ಕೆ ಸಲಹೆ ನೀಡಿದ್ದೆ: ಮಾ.15ರಂದೇ ಸರ್ಕಾರಕ್ಕೆಲಾಕ್‌ ಡೌನ್‌ ಮಾಡುವಂತೆ ಎಚ್ಚರಿಕೆ ನೀಡಿದ್ದೆ.

ಒಂದೊಂದುವಿಷಯಗಳಿಗೆ ಸಂಬಂಧಿ ಸಿದಂತೆ ಒಬ್ಬೊಬ್ಬ ಸಚಿವರನ್ನುನೇಮಿಸಿ ಕೆಲಸ ಮಾಡುವಂತೆ ಸಲಹೆ ನೀಡಿದ್ದೆ. 2ನೇ ಅಲೆಎದು ರಿಸುವುದಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆಯೂ ಹೇಳಿದ್ದೆ. ಆಗ ನಮ್ಮ ಮಾತನ್ನು ಯಾರೂ ಕೇಳಲಿಲ್ಲ. ಈಗ ಸಿಎಂ ಯಡಿಯೂರಪ್ಪನವರು ಐವರು ಸಚಿವರಿಗೆಜವಾ ಬ್ದಾರಿ ವಹಿಸಿದ್ದಾರೆ. ಅವರೇನು ಮಾಡುತ್ತಾರೋನೋಡೋಣ. ಕಾಲಹರಣ ಮಾಡದೇ ಅಧಿಕಾರಿಗಳಿಗೆ ನಿಖರಜವಾಬ್ದಾರಿ ವಹಿಸಿ ಕೆಲಸ ಮಾಡುವುದಕ್ಕೆ ಅವಕಾಶ ಕೊಡಿಎಂದು ಹೇಳಿದರು.

1500 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅವಶ್ಯಕತೆ: ಮುಂಬರುವದಿನಗಳಲ್ಲಿ ರಾಜ್ಯಕ್ಕೆ 1500 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅವಶ್ಯಕತೆಇದೆ. 70 ಸಾವಿರ ಆಕ್ಸಿಜನ್‌ ಬೆಡ್‌ ಅಗತ್ಯವಿರುವುದಾಗಿ ಕೇಂದ್ರಹೇಳುತ್ತಿದೆ. ಇದಕ್ಕೆ ಸರ್ಕಾರ ಏನು ಏರ್ಪಾಟು ಮಾಡಿಕೊಂಡಿದೆ ಎನ್ನುವುದನ್ನು ಹೇಳಬೇಕು. ಜನರ ಜೀವದ ಜೊತೆಹುಡುಗಾಟವಾಡಬೇಡಿ ಎಂದರು.

ಚಿನ್ನದ ಗಣಿ ಉಪಯೋಗಿಸಿಕೊಳ್ಳಿ: ಕರ್ನಾಟಕದ ಕೆಜಿಎಫ್‌ನಲ್ಲಿ ಬ್ರಿಟಿಷರ ಕಾಲದ ಮೂರು ಆಕ್ಸಿಜನ್‌ ಉತ್ಪಾದನಾ ಘಟಕ ತುಕ್ಕು ಹಿಡಿದಿದೆ. ಅವುಗಳನ್ನು ದುರಸ್ತಿಗೊಳಿಸಿದ್ದಲ್ಲಿ ದೇಶಕ್ಕೆಆಮ್ಲಜನಕ ಪೂರೈಸಬಹುದು. ಅದೇ ರೀತಿ ರಾಯಚೂರಿನಹಟ್ಟಿ ಚಿನ್ನದ ಗಣಿಯಲ್ಲೂ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿಆಮ್ಲಜನಕ ಉತ್ಪಾದನೆಗೆ ಪ್ರಾಮುಖ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಸ್ಟೀಲ್‌ ರೀ-ಪ್ರೊಡಕ್ಷನ್‌ ಘಟಕಗಳು ನಷ್ಟದಿಂದ ಮುಚ್ಚಿಹೋಗಿವೆ. ಅವುಗಳಿಗೆ ಸರ್ಕಾರ ಉಚಿತವಾಗಿ ವಿದ್ಯುತ್‌ ಒದಗಿಸಿ ಮತ್ತೆ ತೆರೆದು ಆಮ್ಲಜನಕ ಉತ್ಪಾದನೆಗೆ ಪ್ರೋತ್ಸಾಹ ನೀಡಿದರೆ ಆಕ್ಸಿಜನ್‌ ಕೊರತೆ ನಿವಾರಿಸಬಹುದೆಂದರು.ಗೋಷ್ಠಿಯಲ್ಲಿ ಶಾಸಕರಾದ ಕೆ.ಸುರೇಶ್‌ಗೌಡ, ರವೀಂದ್ರಶ್ರೀಕಂಠಯ್ಯ, ಕೆ.ಅನ್ನದಾನಿ, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್‌ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತಿತರರಿದ್ದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Mur

Mandya: ತಮ್ಮನ ಕೊಲೆಗೆ ಸುಪಾರಿ ನೀಡಿ, ಕುಂಭಮೇಳಕ್ಕೆ ಹೋದ ಅಣ್ಣ!

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

1-dess

Mandya: ಬೆಳ್ಳಂಬೆಳಗ್ಗೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹ*ತ್ಯೆ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.