ಆಕ್ಸಿಜನ್‌ ವಿಷಯದಲ್ಲಿ ಗೊಂದಲ ಬೇಡ

ಯಾರಿಗೆ ಎಷ್ಟು ಸಮಯ, ಎಷ್ಟು ಕಿಲೋ ಆಕ್ಸಿಜನ್‌ ಕೊಡಬೇಕು: ವೈದ್ಯರಿಂದ ಮಾಹಿತಿ

Team Udayavani, May 8, 2021, 6:55 PM IST

jgjttytryt

ಹೊನ್ನಾವರ: ಆಕ್ಸಿಜನ್‌ ಕೊರತೆಯಿಂದ ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸೋಂಕಿತರು ಈಗ ಆಕ್ಸಿಜನ್‌ ಫೋಬಿಯಾದಿಂದ ಗಾಬರಿಯಾದಂತೆ ಕಾಣುತ್ತಿದ್ದು, ಅವರಿಗಾಗಿ, ಅವರ ಕುಟುಂಬಕ್ಕಾಗಿ ತಾಲೂಕಾಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಆಕ್ಸಿಜನ್‌ ಕೊರತೆಯಿಂದ ಹಲವರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರು ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್‌ ಬಳಸಲು ಬಯಸುತ್ತಾರೆ. ಅಭದ್ರತೆ ಮತ್ತು ಭೀತಿ ಅವರನ್ನು ಕಾಡುತ್ತಿದೆ. ಯಾರಿಗೆ ಎಷ್ಟು ಸಮಯ, ಎಷ್ಟು ಕಿಲೋ ಆಕ್ಸಿಜನ್‌ ಕೊಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ರೋಗಿಯ ಪುಪ್ಪುಸದ ಮೇಲೆ ಕೋವಿಡ್‌ ವೈರಾಣುವಿನ ಪರಿಣಾಮ ಎಷ್ಟಾಗಿದೆ, ಎಷ್ಟು ಘಂಟೆ ಇವರಿಗೆ ಆಕ್ಸಿಜನ್‌ ಕೊಡಬೇಕು, ಆಕ್ಸಿಜನ್‌ ಅಗತ್ಯವಿದೆಯೋ, ಇಲ್ಲವೋ ಎಂಬುದನ್ನು ವೈದ್ಯರು ತೀರ್ಮಾನಿಸುತ್ತಾರೆಯೇ ವಿನಃ ಸುಮ್ಮನೆ ಆಕ್ಸಿಜನ್‌ ಸೇವಿಸುವುದರಿಂದ ಊಟ, ತಿಂಡಿ, ಬಾತ್‌ರೂಮಿಗೆ ಹೋಗುವಾಗಲೂ ಆಕ್ಸಿಜನ್‌ ಮುಖಕವಚ ಬಿಡದೇ ಇರುವುದು ಸರಿಯಲ್ಲ. ಮತ್ತೆ ಇರುವ ಆಕ್ಸಿಜನ್‌ ಆದ್ಯತೆಯ ಮೇಲೆ ತುರ್ತು ಅಗತ್ಯವಿದ್ದವರಿಗೆ ಕೊಟ್ಟು ಪ್ರಾಣ ಉಳಿಸಲು ಪ್ರಯತ್ನಿಸುವುದು ವೈದ್ಯರ ಕರ್ತವ್ಯ.

ಈಗ ಸೋಂಕು ತಗುಲಿದ ಕೂಡಲೇ ನಿಮ್ಮಲ್ಲಿ ಆಕ್ಸಿಜನ್‌ ಇದೆಯಾ, ವೆಂಟಿಲೇಟರ್‌ ಇದೆಯಾ ಎಂದು ಗಾಬರಿಯಿಂದ ಕೇಳುತ್ತಲೇ ಸೋಂಕಿತರು ಬರುತ್ತಾರೆ. ಎಲ್ಲವೂ ಇದೆ, ನಿಮ್ಮನ್ನು ಪರೀಕ್ಷಿಸಿ, ಎಕ್ಸ್‌ರೇ ಅಥವಾ ಎಂಆರ್‌ಐ ರಿಪೋರ್ಟ್‌ ನೋಡಿ ನಿಮಗೆ ಆಕ್ಸಿಜನ್‌ ಕೊಡಬೇಕು, ರೆಮ್‌ಡಿಸಿವಿಯರ್‌ ಅಥವಾ ಇನ್ನಾವ ಇಂಜಕ್ಷನ್‌ ಕೊಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ. ಕೈಮೀರುವ ಪರಿಸ್ಥಿತಿಯಲ್ಲಿ ವೆಂಟಿಲೇಟರ್‌ ಕೊಡಬೇಕಾಗುತ್ತದೆ. ಆ ಪರಿಸ್ಥಿತಿ ಬರುವವರೆಗೆ ಯಾವುದೋ ಗುಳಿಗೆ ನುಂಗುತ್ತ ಮನೆಯಲ್ಲಿ ಇರಬೇಡಿ. ಆಸ್ಪತ್ರೆಗೆ ಬರುವ ಮುಂಚೆ ಆಕ್ಸಿಜನ್‌ ಕೊಡಿಸಲು ಅವರಿವರ ಪ್ರಭಾವ ಬೀರಬೇಡಿ. ಅಗತ್ಯವಿದ್ದವರಿಗೆ ಖಂಡಿತ ಕೊಡುತ್ತೇವೆ. ಕೋವಿಡ್‌ ಲಕ್ಷಣ ಕಂಡಕೂಡಲೇ ಬಂದರೆ ಔಷಧ ಪಡೆದು ಮನೆಯಲ್ಲಿಯೇ ಗುಣಮುಖರಾಗಬಹುದು, ಹೆಚ್ಚಿನ ಚಿಕಿತ್ಸೆ ಅಗತ್ಯವುಳ್ಳವರಿಗೆ ಕೋವಿಡ್‌ ಸೆಂಟರ್‌ ಅಥವಾ ಆಸ್ಪತ್ರೆಯಲ್ಲಿ ಅಥವಾ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುತ್ತೇವೆ. ಎಲ್ಲರೂ ಆಸ್ಪತ್ರೆಗೆ ಬಂದು ಆಕ್ಸಿಜನ್‌ ಕೇಳಿದರೆ, ಕೊಟ್ಟರೂ ಪ್ರಯೋಜನವಿಲ್ಲ ಎಂದು ಡಾ| ಪ್ರಕಾಶ ನಾಯ್ಕ ಮತ್ತು ಡಾ| ರಾಜೇಶ ಕಿಣಿ ಹೇಳಿದ್ದಾರೆ.

ಪದೇಪದೇ ಎಚ್ಚರಿಕೆ ನೀಡಿದರೂ ಜನ ಆಕ್ಸಿಜನ್‌ ಫೋಬಿಯಾದಿಂದ ಬಳಲತೊಡಗಿದ್ದು ಅವರಿಗಾಗಿ, ಅವರ ಕುಟುಂಬದವರಿಗಾಗಿ ಈ ತಿಳಿವಳಿಕೆ ಮಾತುಗಳನ್ನು ಹೇಳಿದ್ದು, ಓದಿ ಇತರರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.