ವಲಸೆ ಹಕ್ಕಿಗಳ ಕಲರವ ಇಳಿಮುಖ


Team Udayavani, May 14, 2021, 9:39 PM IST

14-18

ಚಿಕ್ಕಮಗಳೂರು: ಜಿಲ್ಲಾದ್ಯಂತ ವಲಸೆ ಹಕ್ಕಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ವೈಲ್ಡ್‌ ಕ್ಯಾಟ್‌-ಸಿ ಹಾಗೂ ಭದ್ರಾ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಡಿ.ವಿ. ಗಿರೀಶ್‌ ತಿಳಿಸಿದ್ದಾರೆ.

2020-21ರಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಿಂದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳವರೆಗೆ ಪಕ್ಷಿ ವೀಕ್ಷಕರು ನಡೆಸಿದ ವೀಕ್ಷಣೆ ಹಾಗೂ ದಾಖಲಾತಿಯಿಂದ ಈ ಮಾಹಿತಿ ತಿಳಿದು ಬಂದಿದೆ ಎಂದು ತಿಳಿಸಿರುವ ಅವರು, ಮಧ್ಯ ಏಷ್ಯಾ, ಹಿಮಾಲಯದಿಂದ ಚಿಕ್ಕಮಗಳೂರು ತಾಲೂಕಿನ ಕೋಟೆ, ಬಸವನಹಳ್ಳಿ, ಮಾಗಡಿ, ಅಂಬಳೆ, ಹಿರೇಮಗಳೂರು ಹೆಜ್ಜಿಗೇನಹಳ್ಳಿ ಸೇರಿದಂತೆ ವಿವಿಧ ಕೆರೆಗಳಿಗೆ ಬರುತ್ತಿದ್ದ ಜಾಲಪಾದದ ಹಕ್ಕಿಗಳು ಹಾಗೂ ಕೆರೆಯಂಚಿನಲ್ಲಿ ಓಡಾಡುವ, ಕೆರೆಯ ಸುತ್ತಲ ಮರಗಿಡ, ಪೊದೆಗಳಲ್ಲಿ ಕಾಣ ಸಿಗುತ್ತಿದ್ದ ಹಕ್ಕಿಗಳ ಎಣಿಕೆಯಲ್ಲಿ ವಲಸೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಹೇಳಿದ್ದಾರೆ.

ಹಲವು ಪ್ರಬೇಧದ ಹಕ್ಕಿಗಳು ಚಳಿಗಾಲದಲ್ಲಿ ತಮ್ಮ ಮೂಲ ನೆಲೆಯಿಂದ ಸಾವಿರಾರು ಮೈಲು ದೂರದ ಪ್ರದೇಶಗಳಿಗೆ ವಲಸೆ ಹೋಗಿ, ಸಂತಾನ ಬೆಳೆಸಿಕೊಂಡು ಹಿಂತಿರುಗುತ್ತವೆ. ಇವುಗಳಲ್ಲಿ ನೀರುಹಕ್ಕಿಗಳದೇ ಸಿಂಹಪಾಲು. ಕರೆಯ ಸಮೀಪದ ಮರಗಳಲ್ಲಿ ತಮ್ಮ ಸಂತಾನ ಬೆಳೆಸಲು ಸಿದ್ಧತೆ ನಡೆಸಿ, ಕೆರೆಗಳಲ್ಲಿ ಒಟ್ಟಾಗಿ ಆಹಾರದ ಬೇಟೆ ನಡೆಸುತ್ತಾ 2ರಿಂದ 3 ಅಥವಾ 4 ತಿಂಗಳ ಕಾಲ ವಾಸ ಮಾಡಿ ಹಿಂತಿರುಗುತ್ತವೆ. ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿರುವ ವೈಲ್ಡ್‌ ಕ್ಯಾಟ್‌-ಸಿ ಹಾಗೂ ಭದ್ರಾ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯರು 2020ರ ಸೆಪ್ಪೆಂಬರ್‌ನಿಂದ 2021ರ ಫೆಬ್ರವರಿವರೆಗೆ ಪಕ್ಷಿವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ರಮದಲ್ಲಿ 273 ವಿವಿಧ ಪ್ರಭೇದಗಳ ಹಕ್ಕಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

44 ಮಂದಿ ಆಸಕ್ತ ಪಕ್ಷಿ ವೀಕ್ಷಕರು ಈ ಕಾರ್ಯಕ್ರಮದಲ್ಲಿ ವನ್ಯಜೀವಿ ತಜ್ಞ ಡಿ.ವಿ. ಗಿರೀಶ್‌ ನೇತೃತ್ವದಲ್ಲಿ ಈ ವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ರಮ ಕೈಗೊಂಡಿದ್ದು ಹಿಂದಿನ ವರ್ಷಗಳಲ್ಲಿ ವಲಸೆ ಬಂದ ಹಕ್ಕಿಗಳ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಬಂದು ಕೆರೆಗಿಳಿದ, ಕೆರೆಯ ಸುತ್ತಲಲ್ಲಿ ಓಡಾಡುತ್ತಿದ್ದ ಈ ರೆಕ್ಕೆಯ ದ್ವಿಪಾದಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಹಕ್ಕಿವೀಕ್ಷಣೆ ಹಾಗೂ ಎಣಿಕೆಯಲ್ಲಿ ಡಿ.ವಿ.ಗಿರೀಶ್‌ ನೇತೃತ್ವದಲ್ಲಿ ಶ್ರೀದೇವ್‌ ಹುಲಿಕೆರೆ, ಮನೀಶ್‌, ಗಿರಿಜಾಶಂಕರ್‌, ಚೇತನ್‌, ಸುಸ್ಮಿತಾ, ಸನ್ನಿಧಿ , ಜಿ.ಸಿ. ಘನಶ್ಯಾಮ್‌, ಚಂದನ, ಮನಸ್ವಿ, ಸ್ನೇಹನಾ, ತೇಜಸ್ವಿ, ರಮ್ಯಾ, ಝಬ್ಬಿಉಲ್ಲಾ, ಡಾ| ಸುಹಾಸ್‌, ಡಾ| ಸೂರ್ಯ, ಕೀರ್ತಿಕುಮಾರ್‌ ಸೇರಿದಂತೆ 44 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

13-kudremukh-1

Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ

1-ckm

Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

12

Mudigere: ನೇಣು ಬಿಗಿದುಕೊಂಡು‌ ಆತ್ಮಹ*ತ್ಯೆಗೆ ಶರಣಾದ ಸರ್ವೇ ಅಧಿಕಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.