ದ.ಕ, ಉಡುಪಿಯ 13 ಆಸ್ಪತ್ರೆ ರಾಷ್ಟ್ರ ಮಟ್ಟಕ್ಕೆ ನಾಮ ನಿರ್ದೇಶನ

ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ "ಎನ್‌ಕ್ಯುಎಎಸ್‌' ಪ್ರೇರಣೆ

Team Udayavani, May 23, 2021, 7:10 AM IST

ದ.ಕ, ಉಡುಪಿಯ 13 ಆಸ್ಪತ್ರೆ ರಾಷ್ಟ್ರ ಮಟ್ಟಕ್ಕೆ ನಾಮ ನಿರ್ದೇಶನ

ಮಂಗಳೂರು: ಗುಣಮಟ್ಟದ ಸೇವೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ಒಟ್ಟು 13 ಸರಕಾರಿ ಆಸ್ಪತ್ರೆಗಳು ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ನೀಡುವ “ಎನ್‌ಕ್ಯುಎಎಸ್‌’ ಪ್ರಮಾಣಪತ್ರಕ್ಕೆ ನಾಮನಿರ್ದೇಶನಗೊಂಡಿವೆ.

ಕೊರೊನಾ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳ ಅವಲಂಬನೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ “ರಾಷ್ಟ್ರೀಯ ಗುಣಮಟ್ಟ ಖಾತರಿ ಪ್ರಮಾಣಪತ್ರ’ (ಎನ್‌ಕ್ಯುಎಎಸ್‌-ನ್ಯಾಷನಲ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸ್ಟಾಂಡರ್ಡ್ಸ್‌) ಸರಕಾರಿ ಆಸ್ಪತ್ರೆಗಳ ಮೇಲಿನ ವಿಶ್ವಾಸ ಹೆಚ್ಚಲು ಸಹಕಾರಿಯಾಗಲಿದೆ. ಗುಣಮಟ್ಟ ಸುಧಾರಣೆಗೂ ಪೂರಕವಾಗಲಿದೆ.

ಗುಣಮಟ್ಟದ ಸೇವೆ, ನೈರ್ಮಲ್ಯ, ದಾಖಲಾತಿಗಳ ನಿರ್ವಹಣೆ ಮೊದಲಾದ ರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ಮೊದಲು ರಾಜ್ಯ ಮಟ್ಟದಲ್ಲಿ ಆಯ್ಕೆ ನಡೆಯುತ್ತದೆ. ಅನಂತರ ರಾಷ್ಟ್ರಮಟ್ಟಕ್ಕೆ ನಾಮನಿರ್ದೇಶನಗೊಂಡು ಆಯ್ಕೆಯಾಗುತ್ತವೆ.

ಏನಿದು ಎನ್‌ಕ್ಯುಎಎಸ್‌?
ಎನ್‌ಕ್ಯುಎಎಸ್‌ ಎಂಬುದು ಗುಣಮಟ್ಟ ಪ್ರಮಾಣೀಕರಣ ಮಾನದಂಡ. ಆರೋಗ್ಯ ಸೇವಾ ಸಂಸ್ಥಾಪನೆಗಳ ಗುಣಮಟ್ಟಕ್ಕಾಗಿ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. “ಎನ್‌ಕ್ಯುಎಎಸ್‌’ಗೆ ನಾಮ ನಿರ್ದೇಶನ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿ ಒಟ್ಟು ಆರೋಗ್ಯ ಸೇವಾ ಕೇಂದ್ರಗಳ ಶೇ. 10ನ್ನು ನಾಮನಿರ್ದೇಶನ ಮಾಡಲಾಗುತ್ತದೆ. ನಾಮನಿರ್ದೇಶನಗೊಂಡ ಆಸ್ಪತ್ರೆ/ ಕೇಂದ್ರ ಗಳು ಒಮ್ಮೆ ಈ ಪ್ರಮಾಣೀಕರಣ ಪಡೆಯಲು ವಿಫ‌ಲವಾದರೆ ಗುಣಮಟ್ಟ ವೃದ್ಧಿಸಿಕೊಳ್ಳಲು ಸಮಯ ನೀಡಲಾಗುತ್ತದೆ. ಪ್ರಮಾಣೀಕರಣ ಪಡೆದಾಗ ಪ್ರಶಸ್ತಿನಿಧಿ ದೊರಕುತ್ತದೆ.

ಯಾವೆಲ್ಲ ಕೇಂದ್ರಗಳು?
ದಕ್ಷಿಣ ಕನ್ನಡ ಜಿಲ್ಲೆ
- ವೆನ್ಲಾಕ್ ಜಿಲ್ಲಾಸ್ಪತ್ರೆಯ 10 ವಿಭಾಗಗಳು
- ಲೇಡಿಗೋಶನ್‌ ಆಸ್ಪತ್ರೆಯ 6 ವಿಭಾಗಗಳು
- ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)
- ಮೂಡುಬಿದಿರೆ ಸಿಎಚ್‌ಸಿ
- ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)
- ಜೆಪ್ಪು ನಗರ ಪ್ರಾ.ಆ. ಕೇಂದ್ರ (ಯುಪಿಎಚ್‌ಸಿ)
- ನಾರಾವಿ ಪಿಎಚ್‌ಸಿ

ಉಡುಪಿ ಜಿಲ್ಲೆ
- ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ
- ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವಿಭಾಗಗಳು
- ಶಂಕರನಾರಾಯಣ ಪ್ರಾ.ಆ. ಕೇಂದ್ರ
- ಬ್ರಹ್ಮಾವರ ಸಿಎಚ್‌ಸಿ
- ಕೋಟ ಸಿಎಚ್‌ಸಿ

ಗುಣಮಟ್ಟ ಕಾಯ್ದುಕೊಳ್ಳಲು ನಿಗಾ
2018-19ರಲ್ಲಿ ವೆನ್ಲಾಕ್ ನ ಬ್ಲಿಡ್‌ಬ್ಯಾಂಕ್‌, ಐಸಿಯು ಸಹಿತ 5 ವಿಭಾಗಗಳು ರಾಷ್ಟ್ರ ಮಟ್ಟದ ಈ ಪ್ರಮಾಣಪತ್ರ ಪಡೆದಿದ್ದವು. ಪಿಎಚ್‌ಸಿಗಳ ಸಹಿತ ಇತರ 44 ಸರಕಾರಿ ಆರೋಗ್ಯ ಸಂಸ್ಥೆಗಳು ರಾಜ್ಯ ಮಟ್ಟದ ಪ್ರಮಾಣಪತ್ರ ಪಡೆದಿದ್ದವು. ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ 11 ಸರಕಾರಿ ಆಸ್ಪತ್ರೆಗಳು ರಾಜ್ಯ ಪ್ರಮಾಣೀಕರಣಕ್ಕೆ ಆಯ್ಕೆಯಾಗಿದ್ದವು. ಒಮ್ಮೆ ಪ್ರಮಾಣಪತ್ರ ನೀಡಿದರೆ 3 ವರ್ಷಗಳ ಮಾನ್ಯತೆ ಇದೆ. ಅದನ್ನು ಕಾಯ್ದುಕೊಳ್ಳಲು ನಿಗಾ ವಹಿಸಲಾಗುತ್ತದೆ.

24ಗಿ7 ಸೇವೆಯ 3 ಪ್ರಾ.ಆ. ಕೇಂದ್ರಗಳು
ನಾಮನಿರ್ದೇಶಿತ ವಿಭಾಗಗಳು ಮತ್ತು ಆರೋಗ್ಯ ಕೇಂದ್ರಗಳು 2019-20ನೇ ಸಾಲಿನಲ್ಲಿ ಎನ್‌ಕ್ಯುಎಎಸ್‌ ರಾಜ್ಯಮಟ್ಟದ ಪರಿಶೀಲನೆಯಲ್ಲಿ ತೇರ್ಗಡೆಯಾಗಿ ರಾಷ್ಟ್ರ ಮಟ್ಟಕ್ಕೆ ನಾಮನಿರ್ದೇಶನಗೊಂಡಿವೆ. ಇದರಲ್ಲಿ 24ಗಿ7 ಸೇವೆ ಸಲ್ಲಿಸುವ ದ.ಕ. ಜಿಲ್ಲೆಯ 2, ಉಡುಪಿ ಜಿಲ್ಲೆಯ 1 ಪಿಎಚ್‌ಸಿ ಸೇರಿವೆ. ಪ್ರಸ್ತುತ ರಾಷ್ಟ್ರೀಯ ಮಟ್ಟದ ಗುಣಮಟ್ಟ ಖಾತರಿಯ ಪ್ರಮಾಣೀಕರಣಕ್ಕೆ ಅಂತಿಮ ಪರಿಶೀಲನೆ ನಡೆಯುತ್ತಿದೆ. ಎನ್‌ಎಚ್‌ಆರ್‌ಸಿ (ನ್ಯಾಷನಲ್‌ ಹೆಲ್ತ್‌ ಸಿಸ್ಟಂ ಆ್ಯಂಡ್‌ ರಿಸೋರ್ಸ್‌ ಸೆಂಟರ್‌) ಇದನ್ನು ನಡೆಸುತ್ತದೆ.

ಎನ್‌ಕ್ಯುಎಎಸ್‌ ಪ್ರಮಾಣೀಕರಣ ಸರಕಾರಿ ಆಸ್ಪತ್ರೆಗಳ ಸೇವೆ ಮತ್ತಷ್ಟು ಉತ್ತಮಗೊಳ್ಳಲು ಪ್ರೇರಣೆ ನೀಡುತ್ತಿದೆ. ಸುಧಾರಣೆಗಳಿಗೂ ಕಾರಣವಾಗಿದೆೆ.
-ಡಾ| ರಾಜೇಶ್ವರಿ, ಎನ್‌ಕ್ಯುಎಎಸ್‌ ಜಿಲ್ಲಾ ಸಲಹೆಗಾರರು, ದ.ಕ ಜಿಲ್ಲೆ
-ಗುರುರಾಜ್‌, ಎನ್‌ಕ್ಯುಎಎಸ್‌ ಜಿಲ್ಲಾ ಸಂಯೋಜಕರು, ಉಡುಪಿ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.