ಬಾಬಾ ರಾಮ್ ದೇವ್ ಹೇಳಿಕೆ ಹಿಂಪಡೆದರೆ… ಪೊಲೀಸ್ ದೂರು ವಾಪಸ್ ಪಡೆಯುತ್ತೇವೆ: ಐಎಂಎ
ಪೊಲೀಸ್ ದೂರು ಮತ್ತು ಮಾನನಷ್ಟ ಮೊಕದ್ದಮೆಯ ನೋಟಿಸ್ ವಾಪಸ್ ಪಡೆಯುವುದಾಗಿ ಡಾ.ಜಯಲಾಲ್ ಮಾಹಿತಿ ನೀಡಿದ್ದಾರೆ.
Team Udayavani, May 29, 2021, 12:31 PM IST
ನವದೆಹಲಿ: ಒಂದು ವೇಳೆ ಕೋವಿಡ್ 19 ಮತ್ತು ಅಲೋಪತಿ ವಿರುದ್ಧ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆದರೆ ಯೋಗ ಗುರು ಬಾಬಾರಾಮ್ ದೇವ್ ವಿರುದ್ ಪೊಲೀಸರಿಗೆ ನೀಡಿರುವ ದೂರು ಮತ್ತು ಒಂದು ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯ ನೋಟಿಸ್ ಅನ್ನು ಹಿಂಪಡೆಯುವುದಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತಿಳಿಸಿದೆ.
ಇದನ್ನೂ ಓದಿ:ವಾರಣಾಸಿ: ನವಜಾತ ಶಿಶುವಿಗೆ ಕೋವಿಡ್ 19 ಪಾಸಿಟಿವ್, ತಾಯಿಗೆ ಕೋವಿಡ್ ನೆಗೆಟಿವ್…
ಕೋವಿಡ್ ಸೋಂಕು ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಆಧುನಿಕ ವೈದ್ಯ ಪದ್ಧತಿಯನ್ನು ಗುರಿಯಾಗಿರಿಸಿಕೊಂಡು ಬಾಬಾ ರಾಮ್ ದೇವ್ ವಾಸ್ತವವಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಐಎಂಎ ರಾಷ್ಟ್ರೀಯ ಮುಖ್ಯಸ್ಥ ಡಾ.ಜೆ.ಜಯಲಾಲ್ ತಿಳಿಸಿದ್ದಾರೆ.
ಯೋಗಗುರು ಬಾಬಾರಾಮ್ ದೇವ್ ವಿರುದ್ಧ ಹಠಸಾಧಿಸುತ್ತಿಲ್ಲ. ಆದರೆ ಅವರ ಹೇಳಿಕೆ ಕೋವಿಡ್ 19 ಲಸಿಕೆ ವಿರುದ್ಧವಾಗಿದೆ. ಅವರ ಹೇಳಿಕೆ ಜನರಲ್ಲಿ ಗೊಂದಲ ಮೂಡಿಸಬಹುದು ಎಂದು ಭಾವಿಸುತ್ತೇವೆ. ಅವರು ಅಪಾರ ಅನುಯಾಯಿಗಳನ್ನು ಹೊಂದಿರುವುದರಿಂದ ನಮ್ಮ ಕಳವಳಕ್ಕೆ ಕಾರಣವಾಗಿದೆ ಎಂದು ಡಾ.ಜಯಲಾಲ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಒಂದು ವೇಳೆ ಯೋಗಗುರು ಬಾಬಾ ರಾಮ್ ದೇವ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದರೆ, ಐಎಂಎ ಕೂಡಾ ಅವರ ವಿರುದ್ಧ ದಾಖಲಿಸಿರುವ ಪೊಲೀಸ್ ದೂರು ಮತ್ತು ಮಾನನಷ್ಟ ಮೊಕದ್ದಮೆಯ ನೋಟಿಸ್ ವಾಪಸ್ ಪಡೆಯುವುದಾಗಿ ಡಾ.ಜಯಲಾಲ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ಕೇಜ್ರಿವಾಲ್ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ
Tirupati Laddu ವಿವಾದ: ತಿರುಪತಿ ದೇಗುಲದಲ್ಲಿ ಮಹಾ ಶಾಂತಿ ಹೋಮ, ಶುದ್ದೀಕರಣ…
Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ
Viral Video: ಟಿಕೆಟ್ ಇಲ್ಲದೆ ರೈಲಿನ ಎಸಿ ಕೋಚ್ ನಲ್ಲಿ ಪ್ರಯಾಣಿಸಿದ ಹಾವು…
Pragyan rover; ಚಂದ್ರನ ಮೇಲೆ 160 ಕಿ.ಮೀ. ಕುಳಿ ಪತ್ತೆ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು
Arunagiri ಗ್ರಾಮಸ್ಥರಿಂದ ರಸ್ತೆಯ ಗುಂಡಿ ಮುಚ್ಚುವ ಮಹತ್ಕಾರ್ಯ: ಶಿವನ್ ಗೌಡ ಮೆಚ್ಚುಗೆ
Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?
America: 1951ರಲ್ಲಿ ಕಿಡ್ನಾಪ್ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!
Aditya Shashikumar: ʼರಾಶಿʼ ಪ್ರೀತಿಗೆ ಬಿದ್ದ ಆದಿತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.