ನೀವು ತಂಬಾಕು ಬಿಟ್ಟ ಕತೆ ಶೇರ್ ಮಾಡಿ
Team Udayavani, May 31, 2021, 4:21 PM IST
ಬೆಂಗಳೂರು: ವಿಶ್ವ ತಂಬಾಕು ಮುಕ್ತ ದಿನ ಅಂಗವಾಗಿರಾಷ್ಟ್ರೀಯ ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್ ) “ಕಮಿಟ್ಟು ಕ್ವಿಟ್’ (ವರ್ಜಿಸಲು ಬದ್ಧರಾಗಿ) ಅಭಿಯಾನವನ್ನುಹಮ್ಮಿಕೊಂಡಿದೆ.ತಂಬಾಕು ಉತ್ಪನ್ನಗಳಾದ ಧೂಮಪಾನ, ಗುಟ್ಕಾಬಳಸುವವರ ಶ್ವಾಸಕೋಶಗಳು ಹೆಚ್ಚು ಹಾನಿಯಾಗಿರುತ್ತವೆ.
ಇದರಿಂದ ಕೊರೊನಾ ಸಂದರ್ಭದಲ್ಲಿ ಅಪಾಯಹೆಚ್ಚಿರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.ಜತೆಗೆ ಧೂಮಪಾನ ಮಾಡುವ ಸ್ಥಳದಲ್ಲಿ ಸೋಂಕುಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈಗಾಗಲೇ ಈಅಂಶಗಳನ್ನು ಅರಿತ ಹಲವರು ಕೊರೊನಾ ಬಂದ ನಂತರಧೂಮಪಾನದಿಂದ ದೂರಾಗಿದ್ದಾರೆ.
ಇನ್ನು ಸಾಕಷ್ಟು ಮಂದಿಧೂಮಪಾನವನ್ನು ಬಿಡಲು ಮುಂದಾಗುತ್ತಿದೆ. ಅವರ ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ಜಾಗೃತಿಅಭಿಯಾನವನ್ನು ಹಮ್ಮಿಕೊಂಡಿದೆ.
ನೀವು ತಂಬಾಕು ಬಿಟ್ಟ ಕತೆ ಶೇರ್ ಮಾಡಿ: ನಿಮ್ಹಾನ್ಸ್ನಮಾನಸಿಕ ಆರೋಗ್ಯ ವಿಭಾಗ, ಮನೋವೈದ್ಯಕೀಯಸಾಮಾಜಿಕ ಕಾರ್ಯ ವಿಭಾಗ ಸಂಯುಕ್ತಾಶ್ರಯಲ್ಲಿ ಮೇ31 ರಿಂದ ಜೂನ್ 1ರವರೆಗೂ ಅಭಿಯಾನ ನಡೆಯುತ್ತಿದೆ.”ಐ ಆ್ಯಮ್ ದಿ ಚಾಂಪಿಯನ್ ಆಫ್ ಮೈ ಸ್ಟೋರಿ’ ಎಂಬಥೀಮ್ ಹೊಂದಿದೆ.
ತಂಬಾಕು ಸೇವನೆ ಬಿಟ್ಟಿರುವವರುಅವರ ಕತೆಯನ್ನು ವಿಡಿಯೋ, ಆಡಿಯೋ ಅಥವಾಬರಹದ ಮೂಲಕ ತಲುಪಿಸಿದರೆ ಅದನ್ನು ನಿಮ್ಹಾನ್ಸ್ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತದೆ. ಈಮೂಲಕ ಜನರಲ್ಲಿ ಜಾಗೃತಿ ಹೆಚ್ಚಾಗಿ, ತಂಬಾಕು ಬಿಡಲುಮುಂದಾಗುವವರಿಗೆ ಪ್ರೇರೇಪಣೆ ಸಿಗಲಿದೆ ಎಂದುಮಾನಸಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಲತಾತಿಳಿಸಿದ್ದಾರೆ.
ನಿಮ್ಮ ಕತೆಯನ್ನು ಕಳುಹಿಸಬೇಕಾದ ವಿಳಾಸ: [email protected]ಸಹಾಯವಾಣಿ: ತಂಬಾಕು ಬಿಡಿಲು ಸಿದ್ಧರಿರುವವರಿಗೆಮಾನಸಿಕ ಸ್ಥೈರ್ಯ ತುಂಬುನ ನಿಟ್ಟಿನಲ್ಲಿ ರಾಷ್ಟ್ರಮಟ್ಟದಆಪ್ತ ಸಮಾಲೋಚನಾ ಸಹಾಯವಾಣಿ ಇದ್ದು, ಕನ್ನಡ,ಇಂಗ್ಲೀಷ್ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.ಸಹಾಯವಾಣಿ ಸಂಖ್ಯೆ: 1800 11 2356.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್ಯಾಪಿಡ್ ರೈಲು: ರೈಲ್ವೆ ಸಚಿವ
Bengaluru: ಅಪಾರ್ಟ್ಮೆಂಟ್ನಿಂದ ಜಾರಿ ಬಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು!
Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ
Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ
Arrested: ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.