![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 31, 2021, 7:35 PM IST
ಸಕಲೇಶಪುರ: ಶುದ್ಧ ಕುಡಿಯುವ ನೀರನ್ನು ಕೇಳಿದಕ್ಕೆ ಅಲ್ಪಸಂಖ್ಯಾತ ಜನಾಂಗದಸಮಾಜ ಸೇವಕನೋರ್ವನಿಗೆ ಮಾಜಿ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಗಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರುವರ್ಷಗಳಿಂದ ಪುರಸಭೆಯಲ್ಲಿ ಜೆಡಿಎಸ್ ಪಕ್ಷವೇ ಅಧಿಕಾರ ನಡೆಸುತ್ತಿದ್ದು, ಜೊತೆಗೆಕಳೆದ 13 ವರ್ಷಗಳಿಂದಲೂ ಶಾಸಕರಾಗಿ ಎಚ್.ಕೆ.ಕುಮಾರಸ್ವಾಮಿ ತಾಲೂಕಿನಲ್ಲಿಸೇವೆ ಸಲ್ಲಿಸುತ್ತಿದ್ದರೂ ಸಹ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ನೀಡಲುವಿಫಲರಾಗಿದ್ದಾರೆ.
ಕೊರೊನಾದಂತಹ ಮಾರಕ ರೋಗ ತಾಂಡವಾಡುತ್ತಿರುವಸಮಯದಲ್ಲಿ ಪಟ್ಟಣದ ಜನ ಅಶುದ್ಧ ನೀರು ಕುಡಿಯಬೇಕಾಗಿರುವುದುದುರಂತವಾಗಿದೆ. ಈ ಕುರಿತು ರೇವಣ್ಣ ಅವರಲ್ಲಿ ಇದ್ರೀಸ್ ಎಂಬ ಯುವಕ ಕೇಳಿದಕ್ಕೆದುರ್ವರ್ತನೆ ತೋರಿದ್ದಾರೆಂದು ದೂರಿದರು.
ಸಕಲೇಶಪುರ ಕ್ಷೇತ್ರದ ಬಗ್ಗೆಅವರಿಗೂ ಕಿಂಚತ್ತು ಕಾಳಜಿಯಿಲ್ಲ. ಸುಮ್ಮನೆ ಅದು ಕೊಟ್ಟಿದ್ದೇವೆ, ಇದು ಕೊಟ್ಟಿದ್ದೇವೆಎಂದು ಹೇಳುತ್ತಿದ್ದಾರೆ ಎಂದರು. ತಾ.ಪಂ ಮಾಜಿ ಸದಸ್ಯ ಸಿಮೆಂಟ್ ಮಂಜುನಾಥ್ಮಾತನಾಡಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ನಗರಅಧ್ಯಕ್ಷ ಉಮೇಶ್ ಹಾಜರಿದ್ದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.