ಕೋವಿಡ್ ಲಸಿಕೆ ಕೊರತೆ ಇದೆ,ಕೇಂದ್ರಕ್ಕೆ ಟ್ವೀಟರ್ ಬ್ಲೂಟಿಕ್ ಚರ್ಚೆಯೇ ಹೆಚ್ಚು: ಗಾಂಧಿ ಕಿಡಿ


Team Udayavani, Jun 6, 2021, 5:15 PM IST

congress-leader-rahul-gandhi-over-twitter-blue-tick-while-nation-facing-shortage-of-vaccines

ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವುದರ ಬಗ್ಗೆ ಚರ್ಚೆ ಮಾಡಬೇಕಾದ ಕೇಂದ್ರ ಸರ್ಕಾರ ಟ್ವೀಟರ್ ನಲ್ಲಿ ಬ್ಲೂ ಟಿಕ್ ಕುರಿತಾಗಿ ಚರ್ಚೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ವಿರುದ್ಧ ಮತ್ತೆ ವಾಗ್ಬಾಣ ಬಿಟ್ಟಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ  ಕೋವಿಡ್ ಹಾಗೂ ಟ್ವೀಟರ್  ಬ್ಲೂ ಟಿಕ್ ಬಗ್ಗೆ ಟೀಕೆ ಮಾಡಿದ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ ​ನಲ್ಲಿ ಬ್ಲೂ ಟಿಕ್​ಗಾಗಿ ಜಗಳಾಡುವುದರಲ್ಲಿ ನಿರತವಾಗಿದೆ. ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು ಅಷ್ಟೇ ಎಂದಿ ಕೇಂದ್ರದ ವಿರುದ್ಧ ತೀವ್ರವಾಗಿ ಟೀಕೆ ಮಾಡಿದ್ದಾರೆ.


 ಇದನ್ನೂ ಓದಿ : ಗುಳೇದಗುಡ್ಡ: ರಜೆಯ ಮಜಾದಲ್ಲಿ ಕೋವಿಡ್ ಮರೆತ ಜನ, ಅಂತರವೂ ಇಲ್ಲ, ಕಾಳಜಿಯೂ ಇಲ್ಲ

ಟ್ವಿಟರ್ ನಲ್ಲಿ ಬ್ಲೂ ಟಿಕ್ ಆ ಖಾತೆಗಳು ಅಧಿಕೃತವೆಂದುಸೂಚಿಸುವ ಮಾನದಂಡವಾಗಿದೆ. ಕಳೆದೊಂದೆರಡು ದಿನಗಳಿಂಚೆಗೆ  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ​ಎಸ್ ​ಎಸ್) ಮುಖ್ಯಸ್ಥ ಮೋಹನ್ ಭಾಗವತ್  ಹಾಗೂ ಇನ್ನಿತರ ಕೆಲ ನಾಯಕರ ಟ್ವಿಟರ್ ಖಾತೆಯ ಬ್ಲೂ ಟಿಕ್ ನ​ನ್ನು ಟ್ವಿಟರ್ ಸಂಸ್ಥೆ ತೆಗೆದಿತ್ತು.

ಕೇಂದ್ರ ಸರ್ಕಾರ, ಹೊಸ ನಿಯಮಾವಳಿಗಳನ್ನು ಅನುಮೋದಿಸುವಂತೆ ಟ್ವಿಟರ್ ​ಗೆ ಅಂತಿಮ ಸೂಚನೆ ಕೊಟ್ಟಿತ್ತು. ಆ ಬಳಿಕ ಈ ಘಟನೆಗಳು ನಡೆದಿದ್ದವು.

ಇನ್ನು,  ಈ ಕುರಿತಾಗಿ ಟ್ವಿಟರ್​ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜೀವ್​ ತುಳಿ ಎಂಬುವರು ಟ್ವೀಟ್ ಮಾಡಿದ್ದರು.

ಟ್ವಿಟರ್​​ ನಲ್ಲಿ ​ ಯಾವುದೇ ಗಣ್ಯರು ಈ ಬ್ಲೂಟಿಕ್​ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು. ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್​ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ತುಂಬದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂತಹ ಟ್ವಿಟರ್ ಖಾತೆಗಳ ದೃಢೀಕರಣ ಅಥವಾ ಅಧಿಕೃತ ಮಾನದಂಡವಾದ ಬ್ಲೂ ಟಿಕ್ ನನ್ನು​  ತೆಗೆದುಹಾಕಿದೆ.

ಆರ್​​ಎಸ್​​ಎಸ್ ​ನ ನಾಯಕ ಮೋಹನ್​ ಭಾಗವತ್,​​ ಸುರೇಶ್​ ಜೋಶಿ, ಅರುಣ್​ ಕುಮಾರ್​, ಕೃಷ್ಣನ್​ ಗೋಪಾಲ್​ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲೂಟಿಕ್​​​ ಗಳು ನಿನ್ನೆ (ಜೂನ್ 5) ಬೆಳಗ್ಗೆ ಇಲ್ಲವಾಗಿತ್ತು.

ಇನ್ನು,  ಟ್ವಿಟರ್ ಸಂಸ್ಥೆ ಯಾವುದೇ ಖಾತೆಗೆ ಬ್ಲೂಟಿಕ್​ ದೃಢಿಕರಣವನ್ನು ನೀಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಲೂ ಟಕ್ ನ​​ನ್ನು ಹಿಂಪಡೆಯಲಾಗುತ್ತದೆ ಎಂದು ಟ್ವಿಟರ್​ ತನ್ನ ವೆರಿಫಿಕೇಶನ್​ ನಿಯಮದಲ್ಲಿ ಉಲ್ಲೇಖಿಸಿದೆ.

ಉಪ ರಾಷ್ಟ್ರಪತಿ  ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂಟಿಕ್​ ತೆಗೆದುಹಾಕಿದ್ದ ಟ್ವಿಟರ್​, ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಮತ್ತೆ ನೀಡಿತ್ತು.

ಇದನ್ನೂ ಓದಿ : ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಪೋಟೆರಿಸಿನ್ ಬಿ ಪೂರೈಸಲು ಈಶ್ವರ ಖಂಡ್ರೆ ಆಗ್ರಹ

ಟಾಪ್ ನ್ಯೂಸ್

Karachi Airport: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Mudigere: ಚಲಿಸುತ್ತಿರುವ ಕಾರಿನ ಬಾಗಿಲಲ್ಲಿ ಕುಳಿತು ಮಹಿಳೆ ಹುಚ್ಚಾಟ…

Mudigere: ಚಲಿಸುತ್ತಿರುವ ಕಾರಿನ ಬಾಗಿಲಲ್ಲಿ ಕುಳಿತು ಮಹಿಳೆ ಹುಚ್ಚಾಟ…

HUDUKAATA

Mumtaz Ali Missing: ಮೊದಿನ್‌ ಬಾವಾ ಸೋದರ ಮಮ್ತಾಜ್‌ ಆಲಿ ಆತ್ಮಹ*ತ್ಯೆ?

HEBRI-CAR2

Hebri: ವರುಣನ ರುದ್ರ ನರ್ತನ: ಮುದ್ರಾಡಿ ಬಲ್ಲಾಡಿ ಪರಿಸರ ತತ್ತರ

Kota–Railway

Railway Connectivity: ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಿ

1-redd

Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-redd

Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ

Shabarimale

Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್‌ಲೈನ್‌ ನೋಂದಣಿ ಕಡ್ಡಾಯ

Maldives Muizzu

Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ

police crime

Bhopal;1,800 ಕೋ.ರೂ. ಡ್ರಗ್ಸ್‌ ವಶ!; ದಿಲ್ಲಿಯಲ್ಲಿ ಕೊಕೇನ್‌ ಪತ್ತೆ ಬೆನ್ನಲ್ಲೇ ಘಟನೆ

1-reee

Chennai Airshow; ಸುಡು ಬಿಸಿಲಿಗೆ 4 ಸಾ*ವು:200 ಮಂದಿ ಆಸ್ಪತ್ರೆಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Karachi Airport: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Mudigere: ಚಲಿಸುತ್ತಿರುವ ಕಾರಿನ ಬಾಗಿಲಲ್ಲಿ ಕುಳಿತು ಮಹಿಳೆ ಹುಚ್ಚಾಟ…

Mudigere: ಚಲಿಸುತ್ತಿರುವ ಕಾರಿನ ಬಾಗಿಲಲ್ಲಿ ಕುಳಿತು ಮಹಿಳೆ ಹುಚ್ಚಾಟ…

HUDUKAATA

Mumtaz Ali Missing: ಮೊದಿನ್‌ ಬಾವಾ ಸೋದರ ಮಮ್ತಾಜ್‌ ಆಲಿ ಆತ್ಮಹ*ತ್ಯೆ?

HEBRI-CAR2

Hebri: ವರುಣನ ರುದ್ರ ನರ್ತನ: ಮುದ್ರಾಡಿ ಬಲ್ಲಾಡಿ ಪರಿಸರ ತತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.