96ರ ಇಳಿವಯಸ್ಸಿನಲ್ಲೂ ನೇಕಾರಿಕೆ ಹಣಗಿ ಕಟ್ಟುವ ಅಜ್ಜಿ

­ಎಂಟು ದಶಕಗಳ ದುಡಿಮೆಯ ನಂಟು , ­ಸರ್ಕಾರದ ಸೌಲಭ್ಯಗಳ ನಿರೀಕ್ಷೆಯಲ್ಲಿ ಕುಟುಂಬಗಳು

Team Udayavani, Jun 11, 2021, 8:01 PM IST

10kmg1

‌ಪ್ರಕಾಶ ಆರ್‌. ಗುಳೇದಗುಡ್ಡ

ಕಮತಗಿ: ಈ ಅಜ್ಜಿಯ ವಯಸ್ಸು ಬರೋಬ್ಬರಿ 96. ಯುವಕರೂ ನಾಚುವಂತೆ ನೇಕಾರಿಕೆಯ ಹಣಗಿ ಕಟ್ಟುವ ಕಾರ್ಯ ಮಾಡುತ್ತಾಳೆ. ಎಡ ಕಣ್ಣು ಸರಿಯಾಗಿ ಕಾಣದಿದ್ದರೂ ಬಲ ಕಣ್ಣೊಂದರ ಸಹಾಯದಿಂದಲೇ ಹಣಗಿ ಕಟ್ಟುವ ಕಾಯಕ ಸಲೀಸಾಗಿ ಮಾಡಿ ಮುಗಿಸುತ್ತಾಳೆ.

ನೇಕಾರರು ನೇಯ್ಗೆಗೂ ಮೊದಲು ಹಣಗಿ ಕಟ್ಟುವ ಕಾರ್ಯ ಮಾಡಿಸಿಕೊಳ್ಳುತ್ತಾರೆ. ನಂತರ ನೂಲಿನಿಂದ ನೇಕಾರಿಕೆಯ ಮೂಲಕ ವಿವಿಧ ಬಗೆಯ ಸೀರೆಗಳನ್ನು ನೇಯುತ್ತಾರೆ. ಈ ರೀತಿಯ ಹಣಗಿ ಕಟ್ಟುವ ಕಾರ್ಯ ಮಾಡುವ ಕುಟುಂಬಗಳು ಪಟ್ಟಣದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದು, ಇಂತಹ ವಿಶೇಷ ಕಾರ್ಯ ಮಾಡುವ 96ರ ಅಜ್ಜಿ ರೇಣುಕಮ್ಮ ಹಣಗಿ(ಶಿವಯೋಗಿ) ಅವರು ಹಣಗಿ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರಿಂದಲೇ ಅವರಿಗೆ ಹಣಗಿ ಮನೆತನದವರು ಎಂದು ಕಮತಗಿಯಲ್ಲಿ ಕರೆಯುತ್ತಾರೆ.

3ನೇ ತರಗತಿ ವರೆಗೆ ಓದಿರುವ ರೇಣುಕಮ್ಮ ವಂಶಪರಂಪರೆಯ ಉದ್ಯೋಗ ಹಣಗಿ ಕಟ್ಟುವ ಕಾಯಕವನ್ನು 12ನೇ ವಯಸ್ಸಿನಲ್ಲಿ ತಮ್ಮ ಅತ್ತೆ-ಮಾವರಿಂದ ಬಳುವಳಿಯಾಗಿ ಪಡೆದುಕೊಂಡು ನಿರಂತರವಾಗಿ 8 ದಶಕಗಳ ವರೆಗೆ ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ಹಣಗಿ ಕಟ್ಟುವ ಕಾರ್ಯ ಶ್ರಮದಾಯಕ ಕಾಯಕವಾಗಿದೆ. ವ್ಯವಧಾನ, ಸಮಾಧಾನದಿಂದ ಮಾಡಬೇಕು. ಬೇಕಾಬಿಟ್ಟಿಯಾಗಿ ಮಾಡಿದರೆ ಕಟ್ಟುವ ದಾರದ ಎಳೆಗಳು ಕೈಕೊಡುತ್ತವೆ.

ನಮಗೂ ಸೌಲಭ್ಯ ನೀಡಿ: ಹಣಗಿ ಕಟ್ಟುವ ಕಾಯಕದಿಂದ ಸಿಗುವ ಆದಾಯ ತೀರಾ ಕಡಿಮೆ. ಎರಡು ದಿನಕ್ಕೆ ಒಂದು ಹಣಗಿ ಕಟ್ಟಿಕೊಟ್ಟರೆ 800 ರೂ. ತೆಗೆದುಕೊಳ್ಳುತ್ತೇವೆ. 500ರಿಂದ 600 ರೂ. ಕಚ್ಚಾವಸ್ತುಗಳ ಖರೀದಿಗೇ ಖರ್ಚಾಗುತ್ತದೆ. ಇನ್ನುಳಿದ 200 ರೂ. ಗಳಲ್ಲೇ ಜೀವನ ಸಾಗಿಸಬೇಕಾಗಿದೆ. ನೇಕಾರರಿಗೆ ನೀಡುವ ಸೌಲಭ್ಯಗಳನ್ನು ಹಣಗಿ ಕಟ್ಟುವವರಿಗೂ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.