ಹೆಚ್ಚು ಜಲಮರುಹೂರಣ ನಿರ್ಮಿಸಿದರೆ ಬಹುಮಾನ
Team Udayavani, Jun 16, 2021, 6:35 PM IST
ಹುಣಸೂರು: ತಾಲೂಕಿನಲ್ಲಿ ಜಲಮರುಹೂರಣ (ಇಂಜಕ್ಷನ್ವೆಲ್)ಕ್ಕೆ ಹೆಚ್ಚುಆದ್ಯತೆ ನೀಡಿ 2 ಸಾವಿರ ವೆಲ್ಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸಬೇಕು.2022ರ ಮಾರ್ಚ್ನೊಳಗೆ ಹೆಚ್ಚು ಇಂಜಕ್ಷನ್ವೆಲ್ ನಿರ್ಮಿಸುವ ಗ್ರಾಪಂಗೆ ಬಹುಮಾನನೀಡುವುದಾಗಿ ಶಾಸಕ ಎಚ್.ಪಿ.ಮಂಜುನಾಥ್ಪ್ರಕಟಿಸಿದರು.
ತಾಪಂ ಸಭಾಂಗಣದಲ್ಲಿ ಶಾಲೆ,ಅಂಗನವಾಡಿ ಹಾಗೂ ಜಲಶಕ್ತಿ ಅಭಿಯಾನಯೋಜನೆಯ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದ ಶಾಸಕರು, ಮುಂದಿನಮಾರ್ಚ್ನೊಳಗೆ ಹೆಚ್ಚು ಇಂಜಕ್ಷನ್ ವೆಲ್ನಿರ್ಮಿಸುವ ಗ್ರಾಪಂಗೆ ಶಾಸಕರ ನಿಧಿಯಿಂದ20 ಲಕ್ಷ (ಪ್ರಥಮ), 15 ಲಕ್ಷ (ದ್ವಿತೀಯ), 10ಲಕ್ಷ ರೂ. (ತƒತೀಯ) ಬಹುಮಾನ ನೀಡಲಾಗುವುದೆಂದರು.
ಜಲ ಮರುಹೂರಣಯೋಜನೆಯಡಿತಾಲೂಕಿನಾದ್ಯಂತ 2ಸಾವಿರ ವೆಲ್ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸಬೇಕು.ಜಲಶಕ್ತಿ ಯೋಜನೆಯಡಿ ಸಕಾಲದಲ್ಲಿ ನೀರುಪೂರೈಸುವ ಸಂಬಂಧ ಮೊದಲ ಹಂತದ 28ಗ್ರಾಮಗಳಲ್ಲಿ ಕಾಮಗಾರಿ ಮುಗಿಸಬೇಕೆಂದುಎಂಜಿನಿಯರ್ಗೆ ಸೂಚಿಸಿದರು.
ನರೇಗಾದಲ್ಲಿ ಜಿಲ್ಲೆಯಲ್ಲೇ ಹೆಚ್ಚುಕಾಮಗಾರಿ ನಡೆಸಿ ಕಳೆದ ವರ್ಷ 29.25ಕೋಟಿ ರೂ. ಬಳಕೆ ಮಾಡಿ ಶೇ.180ರಷ್ಟುಸಾಧನೆ ಮಾಡಲಾಗಿದೆ ಎಂಬ ಇಒ ಗಿರೀಶ್ರಮಾಹಿತಿಗೆ ಅಭಿನಂದಿಸಿದ ಶಾಸಕರು, ಮುಂದೆಜಲ ಮರು ಹೂರಣಕ್ಕೆ ನರೇಗಾ ಯೋಜನೆಬಳಸಿಕೊಂಡು ಹೆಚ್ಚು ಕಾಮಗಾರಿ ನಡೆಸಿ,ನರೇಗಾ ಇಂಜಿನಿಯರ್ಗಳು ದೂರು ಬಾರದಂತೆ ಕಾರ್ಯ ನಿರ್ವಹಿಸಿರೆಂದು ಎಚ್ಚರಿಸಿದರು.
ತಹಶೀಲ್ದಾರ್ ಬಸವರಾಜು, ಮಳೆಹಾನಿಯ ಅನುದಾನವನ್ನು ಬಳಕೆ ಮಾಡದಿರುವುದು ಸರಿಯಲ್ಲ, ಹೀಗೆ ಆದಲ್ಲಿ ಈಬಾರಿಯಮಳೆಯಲ್ಲಿ ಮತ್ತೆ ಹಾನಿಗೊಂಡಲ್ಲಿ ಅನುದಾನಸಿಗುವುದಿಲ್ಲವೆಂದು ಎಚ್ಚರಿಸಿದರು. ಸಭೆಯಲ್ಲಿಡಾ.ಕೀರ್ತಿಕುಮಾರ್, ಸಿಡಿಪಿಒ ರಶ್ಮಿ,ಸಹಾಯಕ ನಿರ್ದೇಶಕ ಲೋಕೇಶ್, ಬಿಇಒನಾಗರಾಜ್, ಎಇಇ.ಮಹೇಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.