ಕಾವೇರಿ ಮೇಲಿನ ಮೋಹ ಹೆಚ್ಚಿಸಿಕೊಳ್ಳುತ್ತಿರುವ ತಮಿಳುನಾಡು


Team Udayavani, Jul 6, 2021, 6:20 AM IST

ಕಾವೇರಿ ಮೇಲಿನ ಮೋಹ ಹೆಚ್ಚಿಸಿಕೊಳ್ಳುತ್ತಿರುವ ತಮಿಳುನಾಡು

ಕಾವೇರಿ ನದಿ ನೀರು ವಿಚಾರದಲ್ಲಿ ಸದಾ ಕರ್ನಾಟಕವೂ ಸೇರಿದಂತೆ ನೆರೆ ರಾಜ್ಯಗಳ ಜತೆ ಜಗಳವಾಡಿಕೊಂಡು ಬಂದಿರುವ ತಮಿಳುನಾಡು ಸರಕಾರಕ್ಕೆ ಮಾತುಕತೆ ಎಂಬುದು ರುಚಿಸಲ್ಲ. ಇದು ಈಗಲ್ಲ, ಮೊದಲಿನಿಂದಲೂ ಆ ರಾಜ್ಯದ ವಿಚಾರದಲ್ಲಿ ಹೇಳಬಹುದಾದ ಅತ್ಯಂತ ನಿಖರವಾದ ಮಾತು. ತೀರಾ ಉತ್ಪ್ರೇಕ್ಷೆಯಾಗಿ ಹೇಳುವುದಾದರೆ, ಜಗತ್ತಿನ ಯಾವುದೇ ಜಲವಿವಾದಗಳನ್ನು ಬೇಕಾದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ ತಮಿಳುನಾಡು ಮಾತ್ರ, ಕಾವೇರಿ ಎಂದ ಕೂಡಲೇ ಮೋಹಕ್ಕೆ ಬಿದ್ದವರಂತೆ ವರ್ತಿಸುತ್ತದೆ. ಹೀಗಾಗಿಯೇ ಈ ರಾಜ್ಯಕ್ಕೆ ಮಾತುಕತೆ ಎಂದಿಗೂ ಅಪ್ಯಾಯಮಾನವಾಗದು.

ಅಲ್ಲಿ ಸರಕಾರಗಳು ಬದಲಾದರೂ ಕಾವೇರಿ ವಿಚಾರದಲ್ಲಿನ ಧೋರಣೆ ಮಾತ್ರ ಬದಲಾಗಲ್ಲ. ಅಲ್ಲಿನ ರಾಜಕೀಯ ಪಕ್ಷಗಳ ರೆ ಎಲ್ಲ ವಿಷಯಗಳ ಸಂಬಂಧ ವೈರುಧ್ಯಗಳಿದ್ದರೂ ಕಾವೇರಿ ನದಿ ವಿಚಾರದಲ್ಲಿ ಮಾತ್ರ ಒಂದೇ ಧೋರಣೆ ಇರಿಸಿಕೊಂಡಿರುತ್ತವೆ. ಅಷ್ಟೇ ಅಲ್ಲ, ಕೆಲವೊಮ್ಮೆ ಕಾವೇರಿ ಜಲ ವಿವಾದವನ್ನೇ ಮುಂದಿಟ್ಟುಕೊಂಡು ಅಲ್ಲಿನ ಪಕ್ಷಗಳು ಚುನಾವಣೆಯಲ್ಲಿ ಗೆದ್ದು ಬಂದ ಉದಾಹರಣೆಗಳೂ ಇವೆ.

ಇಂಥ ಹೊತ್ತಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಮೇಕೆದಾಟು ಜಲಾಶಯದ ವಿಚಾರದಲ್ಲಿ ದ್ವಿಪಕ್ಷೀಯ ಮಾತುಕತೆ ಮೂಲಕವೇ ವಿವಾದ ಬಗೆಹರಿಸಿಕೊಳ್ಳೋಣ. ನೀವು ಈ ಯೋಜನೆಗೆ ವಿರೋಧ ಮಾಡಬೇಡಿ. ಇದರಿಂದ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಉಪಯೋಗವಾಗುತ್ತದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಿದಂತೆಯೂ ಆಗುತ್ತದೆ. ಒಪ್ಪಿಗೆ ನೀಡಿ ಎಂದು ಪತ್ರ ಮುಖೇನ ಮನವಿ ಮಾಡಿದ್ದರು. ಆದರೆ ಪತ್ರ ತಲುಪಿದ ಮಾರನೇ ದಿನವೇ ಉತ್ತರ ಕೊಟ್ಟಿರುವ, ಇತ್ತೀಚೆಗಷ್ಟೇ ಸಿಎಂ ಆಗಿರುವ ಎಂ.ಕೆ. ಸ್ಟಾಲಿನ್‌ ಅವರು, ತಮಿಳುನಾಡಿನ ಎಂದಿನ ರಾಜಕಾರಣಿಗಳಂತೆ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಲು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಬದಲಾವಣೆ ಮಾಡಿಕೊಳ್ಳಲ್ಲ ಎಂದು ಬಿಟ್ಟರು.

ವಿಚಿತ್ರವೆಂದರೆ, ಸಿಎಂ ಯಡಿಯೂರಪ್ಪ ಅವರು ನೀಡಿದ ಮಾತುಕತೆ ಆಹ್ವಾನದ ಬಗ್ಗೆ ಮಾತನ್ನೇ ಆಡದ ಸ್ಟಾಲಿನ್‌, ಕೇವಲ ಮೇಕೆ ದಾಟು ಬಗ್ಗೆ ಪ್ರಸ್ತಾವಿಸಿ, ಯೋಜನೆಯಿಂದ ತಮಿಳುನಾಡಿಗೆ ಅಪಾಯಗಳಿವೆ. ಹೀಗಾಗಿ ನಾವು ಯೋಜನೆಗೆ ಆಸ್ಪದ ಕೊಡುವುದಿಲ್ಲ ಎಂದರು. ಆದರೆ ಕರ್ನಾಟಕದ ಸಿಎಂ ಜತೆ ಒಂದು ಬಾರಿ ಕುಳಿತು ಮಾತನಾಡಿದ್ದರೆ, ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಬಹುದಿತ್ತು ಎಂಬ ಕನಿಷ್ಠ ಪ್ರಜ್ಞೆಯನ್ನೂ ತೋರಗೊಡಲಿಲ್ಲ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ, ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಕಾವೇರಿ ಕುರಿತ ರಾಜಕೀಯ ಬೇಕೇಬೇಕು. ಹೀಗಾಗಿಯೇ ಸಣ್ಣ ಪುಟ್ಟ ಸಂಗತಿಗಳನ್ನೂ ಹೊಸ ಸರಕಾರ ದೊಡ್ಡದು ಮಾಡುತ್ತಿದೆ. ನಾವಂತೂ ಕಾನೂನು ಸಮರ ಮುಂದುವರಿಸುತ್ತೇವೆ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಅಂತೆಯೇ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರೂ, ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಸಮ್ಮತಿ ಕೇಳಬೇಕಾಗಿರಲಿಲ್ಲ. ಅದು ನಮ್ಮ ಯೋಜನೆ, ಮುಂದುವರಿಸಿಕೊಂಡು ಹೋದರೆ ಸಾಕು ಎಂದಿದ್ದಾರೆ. ಅದೇನೇ ಇರಲಿ, ವಿವಾದವೇ ಅಲ್ಲದ ಮೇಕೆದಾಟು ವಿಚಾರವನ್ನು ವಿವಾದವನ್ನಾಗಿ ಮಾಡಲು ಹೊರಟಿರುವುದರ ಹಿಂದೆ ತಮಿಳುನಾಡು ಸರಕಾರದ ರಾಜಕೀಯ ದುರುದ್ದೇಶವೇ ಇದೆ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.