ಎಚ್ಚರ..ಕಂಪ್ಯೂಟರ್ ಗಳಿಗೆ ಕನ್ನ ಹಾಕಲು ಎಕ್ಸೆಲ್ ಮ್ಯಾಕ್ರೋ ಬಳಕೆ!
ಎಕ್ಸೆಲ್ ವರ್ಕ್ಬುಕ್ನೊಳಗಿನ ಅಪ್ಲಿಕೇಶನ್ಗಳಿಗಾಗಿ ವಿಷುಯಲ್ ಬೇಸಿಕ್ನೊಂದಿಗೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.
Team Udayavani, Jul 12, 2021, 3:34 PM IST
ಎಷ್ಟೇ ಪ್ರಯತ್ನಪಟ್ಟರು ಕೂಡ ಸೈಬರ್ ದಾಳಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಕಂಫ್ಯೂಟರ್ ಗಳಿಗೆ ಕನ್ನ ಹಾಕಲು ಚೋರರು ನೂತನ ವಿಧಾನವನ್ನು ಕಂಡುಕೊಂಡಿದ್ದು, ಎಕ್ಸೆಲ್ ಮ್ಯಾಕ್ರೋ ಮೂಲಕ ವೈರಸ್ ಹರಿ ಬಿಡುತ್ತಿದ್ದಾರೆ.
ಇತ್ತೀಚಿನ ಸಂಶೋಧನೆಗಳು ನೀಡಿರುವ ವರದಿಯಂತೆ 2021ರ ಅವಧಿಯಲ್ಲಿ ಸೈಬರ್ ಕ್ರಿಮಿನಲ್ ಗಳು ಲೋಡರ್ ಹಾಗೂ ಕ್ವಾಕ್ ಬಾಟ್ ಹೆಸರಿನ ವೈರಸ್ ಹರಿಬಿಡಲು ಎಕ್ಸಲ್ 4.0 ಫೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಈ ದಾಳಿಯಿಂದ ಈಗಾಗಲೇ ಹಲವು ಕಂಪನಿಗಳು ಮತ್ತು ವ್ಯಕ್ತಿಗಳು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಎಚ್ಚರಿಕೆ ಅಗತ್ಯ ಎನ್ನುತ್ತಿವೆ ವರದಿಗಳು.
ಸೈಬರ್ ಖದೀಮರು ಒಂದು ರೀತಿಯ ಮ್ಯಾಕ್ರೊ ಸ್ಪ್ರೆಡ್ಶೀಟ್ ಫೈಲ್ಗಳನ್ನು ತಮ್ಮ ದಾಳಿಗೆ ಬಳಸಿಕೊಳ್ಳುತ್ತಿದ್ದಾರೆ. ಮ್ಯಾಕ್ರೋ ಎನ್ನುವುದು ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು ಬಳಸುವ ಸೂಚನೆಗಳ ಒಂದು ಗುಂಪಾಗಿದೆ. ಮ್ಯಾಕ್ರೋಗಳನ್ನು ಮೈಕ್ರೊಸಾಫ್ಟ್ನ ವಿಬಿಎ – ಎಕ್ಸೆಲ್ ವರ್ಕ್ಬುಕ್ನೊಳಗಿನ ಅಪ್ಲಿಕೇಶನ್ಗಳಿಗಾಗಿ ವಿಷುಯಲ್ ಬೇಸಿಕ್ನೊಂದಿಗೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.
ಈ ರೀತಿಯ ದಾಳಿಗಳನ್ನು ಮಟ್ಟಹಾಕಲು ಮೈಕ್ರೊ ಸಾಪ್ಟ್ ಕೂಡ ಕಾರ್ಯೋನ್ಮುಖವಾಗಿದ್ದು, ಸ್ವಯಂಚಾಲಿತವಾಗಿ ಮ್ಯಾಕ್ರೋಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಆದರೆ ಆಕ್ರಮಣಕಾರರು ಇ-ಮೇಲ್ ಸ್ವೀಕರಿಸುವವರನ್ನು ವರ್ಡ್ ಡಾಕ್ಯುಮೆಂಟ್ ಒಳಗೆ ಗೋಚರಿಸುವ ಸಂದೇಶದೊಂದಿಗೆ ಸಕ್ರಿಯಗೊಳಿಸಲು ಪ್ರಯತ್ನಿಸುತ್ತಾದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್ ರೊಕ್ಸ್ ಬುಕ್ಕಿಂಗ್!
Airport:ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ-26 iPhone 16 Pro Max ವಶಕ್ಕೆ!
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
MG Motor: ನೂತನ ಇವಿ ಕಾರು ಸಿಯುವಿ ಝಿಎಸ್ ವಿಂಡ್ಸರ್ ಮಾರುಕಟ್ಟೆಗೆ
Ranveer Allahbadia: ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬ್ ಖಾತೆ ಹ್ಯಾಕ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.