ಬೆಳ್ಳಂಬೆಳಗ್ಗೆ ಗಲಿಬಿಲಿ ಸೃಷ್ಟಿಸಿದ ಗಜರಾಜ
Team Udayavani, Jul 13, 2021, 10:30 PM IST
ಚಿಕ್ಕಮಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆಯೇ ಗಜರಾಜ ಪ್ರತ್ಯಕ್ಷವಾಗಿದ್ದು ನಗರದ ಜನತೆಯಲ್ಲಿ ಆಶ್ಚರ್ಯ ಮತ್ತು ಕೆಲ ಸಮಯ ಆತಂಕ ಸೃಷ್ಟಿಸಿತು. ಇಷ್ಟು ದಿನ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ನಗರದಲ್ಲಿ ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿವೆ.
ಸೋಮವಾರ ಬೆಳಗ್ಗೆ ಚಿಕ್ಕಮಗಳೂರು ನಗರ ಸಮೀಪದ ನಲ್ಲೂರು ಗುಡ್ಡದ ಅರಣ್ಯ ಪ್ರದೇಶದಿಂದ ಬಂದ ಒಂಟಿ ಸಲಗ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿದ್ದು ಇದು ಕಾಡಾನೆಯೋ, ಸಾಕಾನೆಯೋ ಎಂಬ ಗೊಂದಲಕ್ಕೆ ಬಿದ್ದ ಸಾರ್ವಜನಿಕರು ಆತಂಕಕ್ಕೆ ಒಳಗಾದರು. ನಲ್ಲೂರು ಅರಣ್ಯ ಪ್ರದೇಶದಿಂದ ಭಾನುವಾರ ರಾತ್ರಿ ಬಂದ ಒಂಟಿ ಸಲಗ ರಾತ್ರಿ ಇಡೀ ನಗರ ಸಮೀಪದ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ಸಂಚರಿಸಿದೆ.
ಸೋಮವಾರ ಮುಂಜಾನೆ ನಗರ ಪ್ರದೇಶಕ್ಕೆ ಆಗಮಿಸಿದೆ. ಮುಂಜಾನೆ 4 ರಿಂದ 5ಗಂಟೆ ವೇಳೆ ನಗರದ ಜಯನಗರ ಬಡಾವಣೆ ಮುಖ್ಯರಸ್ತೆಯಲ್ಲಿ ಕಾಡಾನೆ ಸಂಚರಿಸಿದ್ದು, ಬೀದಿನಾಯಿಗಳು ಒಂದೇ ಸಮನೆ ಬೊಗಳಲಾರಂಭಿಸಿವೆ. ಇದರಿಂದ ಬೆದರಿದ ಕಾಡಾನೆ ಎಲ್ಲೆಂದರಲ್ಲಿ ಸಂಚರಿಸಿದೆ. 6ಗಂಟೆ ವೇಳೆಗೆ ಜಯನಗರ ಬಡಾವಣೆಯಿಂದ ಕೆ.ಎಂ. ರಸ್ತೆಗೆ ಆಗಮಿಸಿದೆ. ರಸ್ತೆ ಮಧ್ಯೆ ಸಂಚರಿಸುತ್ತಿದ್ದ ಆನೆಯನ್ನು ಕಂಡ ಕೆಲ ಸಾರ್ವಜನಿಕರು ಇದು ಸಾಕಿದ ಆನೆ ಎಂದು ಭಾವಿಸಿದ್ದಾರೆ. ಆನೆ ಗಲಿಬಿಲಿಗೊಂಡಿದ್ದನ್ನು ಕಂಡ ಕೆಲವರು ಕಾಡಾನೆ ಎಂದು ಖಾತ್ರಿಪಡಿಸಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರದ ನಡುವೆಯೇ ಕೆ.ಎಂ. ರಸ್ತೆಯಿಂದ ಕಾಫಿ ಉದ್ಯಮಿ ದಿ| ಸಿದ್ದಾರ್ಥ ಹೆಗ್ಡೆ ಮಾಲೀಕತ್ವದ ಎಸಿಬಿ ಕಂಪನಿಯ ಗೇಟ್ ಮೂಲಕ ಕಂಪನಿ ಆವರಣವನ್ನು ಪ್ರವೇಶಿಸಿದೆ. ಕೆಲ ಸಮಯ ಅಲ್ಲೆ ಇದ್ದ ಕಾಡಾನೆ ಎಬಿಸಿ ಕಂಪೆನಿ ಹಿಂಬದಿಯಿಂದ ಮತ್ತೆ ನಲ್ಲೂರು ಕಡೆಗೆ ಸಂಚರಿಸಿದೆ. ಕಾಡಾನೆ ನಗರ ಪ್ರದೇಶಿಸಿದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಓಡಿಸಿದ್ದಾರೆ.
ಮತ್ತೆ ಗದ್ದೆಗಳಲ್ಲಿ ಸಂಚರಿಸಿದ ಕಾಡಾನೆ ನಲ್ಲೂರು ಗುಡ್ಡದತ್ತ ಸಾಗಿದೆ. ಅಲ್ಲಿಂದ ಉಂಡೇದಾಸರಹಳ್ಳಿ, ಕಲ್ಲದೇವರಹಳ್ಳಿ ಗ್ರಾಮಗಳತ್ತ ತೆರಳಿದ ಆನೆ ಯರೇಹಳ್ಳಿ ಗ್ರಾಮದ ಕಾಡಿನಲ್ಲಿ ಕಣ್ಮರೆಯಾಗಿದೆ. ರಾತ್ರಿ ವೇಳೆ ಮತ್ತೆ ಕಾಡಾನೆ ನಗರದತ್ತ ಮರಳುವ ಸಾಧ್ಯತೆ ಇದ್ದು ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಲೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆನೆ ಕೆ.ಎಂ. ರಸ್ತೆಯನ್ನು ದಾಟಿ ಎಬಿಸಿ ಕಂಪನಿಯ ಆವರಣಕ್ಕೆ ತೆರಳಿದೆ.
ಒಂದು ವೇಳೆ ಎಬಿಸಿ ಆವರಣದೊಳಕ್ಕೆ ಹೋಗದೆ ಸೀದಾ ರಸ್ತೆಯಲ್ಲೆ ಬಂದಿದ್ದರೇ ಜನನಿಬಿಡ ಪ್ರದೇಶಕ್ಕೆ ಬರುತ್ತಿತ್ತು. ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: 30 ಅಡಿ ಎತ್ತರದಿಂದ ಪಂಚಾಯತ್ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ
CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ
Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!
Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ
Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ
ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ
Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.