ಮಲೆನಾಡಿನ ಬೆಳವಣಿಗೆ ಪ್ರಕ್ರಿಯೆ ವಿಭಿನ್ನ: ಡಾ| ಮನು


Team Udayavani, Jul 17, 2021, 12:59 PM IST

ಮಲೆನಾಡಿನ ಬೆಳವಣಿಗೆ ಪ್ರಕ್ರಿಯೆ ವಿಭಿನ್ನ: ಡಾ| ಮನು

ಸಾಗರ: ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಉಳಿದ ಕಡೆಗಳಲ್ಲಿ ಕಂಡುಬರುವ ಚಾಲಕ ಶಕ್ತಿಗಳು ಮಲೆನಾಡಿನಲ್ಲಿ ಕಂಡುಬರುವುದಿಲ್ಲ. ಮಲೆನಾಡಿನ ನಿರ್ದಿಷ್ಟ ಭೌಗೋಳಿಕ ಸಂರಚನೆಯಿಂದಾಗಿ ಬೆಳವಣಿಗೆ ಪ್ರಕ್ರಿಯೆಗಳು ವಿಭಿನ್ನವಾಗಿವೆ ಎಂದು ಹಿಮಾಚಲ ಪ್ರದೇಶದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ|ಮನು ವಿ. ದೇವದೇವನ್‌ ಹೇಳಿದರು.

ತಾಲೂಕಿನ ನೀನಾಸಂ ಸಂಸ್ಥೆ ಆಶ್ರಯದಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ ಅಂಗವಾಗಿ ವೆಬಿನಾರ್‌ ಮೂಲಕ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸನ ಕಾರ್ಯಕ್ರಮದಲ್ಲಿ “ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿ, ಪಶ್ಚಿಮ ಘಟ್ಟದ ಭೂವಿನ್ಯಾಸ ವಿಶೇಷವಾಗಿದೆ.

ಶಿಲಾಯುಗದ ಕಾಲದಿಂದ ಮಲೆನಾಡು ಭಾಗದಲ್ಲಿ ಮಾನವ ಚಟುವಟಿಕೆಗಳು ಕಂಡುಬರುತ್ತವೆ. ಪ್ರಕೃತಿ ಅನುವು ಮಾಡಿಕೊಟ್ಟ ಸಂಪರ್ಕ ಸಾಧ್ಯತೆಗಳು ಬೆಳವಣಿಗೆಯ ಚಾಲಕ ಶಕ್ತಿಯಾಗಿ ಕೆಲಸ ಮಾಡಿವೆ ಎಂದರು.

ಶಾತವಾಹನರ ಕಾಲದ ರಾಣಿ ನಾಗನಿಕೆ ಅವಧಿಯಲ್ಲಿ ಕೃಷಿ ಚಟುವಟಿಕೆಯ ಆಕರಗಳು ಲಭ್ಯ. ಆನಂತರದ ಆರ್ಥಿಕ ವ್ಯವಸ್ಥೆಯ ಚಾಲಕ ಶಕ್ತಿ ಅಲ್ಪ ಪ್ರಮಾಣದಲ್ಲಿ ಮಲೆನಾಡು ಭಾಗದ ಕೃಷಿ ವಿಸ್ತರಣೆಗೆ ಕಾರಣವಾಗಿದೆ. ಆದ್ದರಿಂದ ಧಾನ್ಯೋತ್ಪಾದನೆಯ ದೃಷ್ಟಿಯಿಂದ ಕೃಷಿ ವಿಸ್ತರಣೆಯಾದುದನ್ನು ಚಾಲಕ ಶಕ್ತಿಯ 2ನೆಯ ಹಂತ ಎಂದು ಗುರುತಿಸಬಹುದಾಗಿದೆ.

ಆನಂತರದ 11-12ನೆಯ ಶತಮಾನದ ಕಾಲಘಟ್ಟದಲ್ಲಿ ಅರ್ಥವ್ಯವಸ್ಥೆಯಲ್ಲಿ ಹಣದ ಬಳಕೆಯಿಂದಾಗಿ ಭತ್ತ ಬೆಳೆಯುತ್ತಿದ್ದ ಕೃಷಿ ಭೂಮಿಯಲ್ಲಿ ನಾಣ್ಯ ಬೆಳೆಗಳಾದ ತೆಂಗಿನಕಾಯಿ, ಅಡಕೆ ಮುಂತಾದವುಗಳನ್ನು ಬೆಳೆಯುವ ಕಾರ್ಯ ಹೆಚ್ಚಾಗುತ್ತದೆ. 16-17ನೆಯ ಶತಮಾನದ ಸಮಯದಲ್ಲಿ ನಾಣ್ಯ ಬೆಳೆಗಳ ಉತ್ಪಾದನೆ ನಿರ್ಣಾಯಕ ಪಾತ್ರ ವಹಿಸಿ ಆರ್ಥಿಕ ಚಟುವಟಿಕೆಯಾಗಿ ವಿಕಾಸವಾಗಿರುವುದನ್ನು ಗಮನಿಸಬಹುದಾಗಿದೆ. ಹೆಚ್ಚಿನ ಆದಾಯ ಹಾಗೂ

ಕಡಿಮೆ ದುಡಿಮೆಯ ಸಮನ್ವಯದಿಂದ ನಾಣ್ಯ ಬೆಳೆಗಳ ವ್ಯವಸ್ಥೆ ವ್ಯಾಪಕವಾಗಲು ಆರಂಭವಾದುದನ್ನು ಗಮನಿಸಬಹುದು. 18ನೇ ಶತಮಾನದಲ್ಲಿ ಭೂ ಮಾಲೀಕರ ಹಸ್ತಾಂತರದ ದೊಡ್ಡ ಪ್ರಕ್ರಿಯೆ ನಡೆದಿರುವುದನ್ನು ಗಮನಿಸಬಹುದು. ಕೃಷಿ ಕಾರ್ಯ, ಅರಣ್ಯ ಬೆಳೆ, ನಾಣ್ಯ ಬೆಳೆ ಅರ್ಥ ವ್ಯವಸ್ಥೆಯ ಮಹತ್ವದ ನಿರ್ಣಾಯಕ ಹಂತವಾಗಿ ಇತಿಹಾಸ ಕಾಲದಿಂದ ವರ್ತಮಾನದವರೆಗೆ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದಾಗಿದೆ ಎಂದರು.

ಡಾ| ಎಲ್‌.ಸಿ. ಸುಮಿತ್ರ,ಡಾ| ರಾಜಾರಾಮ ಹೆಗಡೆ ಮತ್ತು ಶಿವಾನಂದ ಕಳವೆ ಕಿರು ಪ್ರತಿಸ್ಪಂದನೆ ನೀಡಿ ಮಾತನಾಡಿದರು. ಕೆ.ವಿ. ಅಕ್ಷರ ನಿರ್ವಹಿಸಿದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.