ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌


Team Udayavani, Jul 30, 2021, 6:25 AM IST

ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌

ಮಂಗಳೂರು: ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯ ಡಿಯಲ್ಲಿ ದಿನದ 24 ಗಂಟೆಗಳ ಮಕ್ಕಳಿಗೆ ತುರ್ತು ಸೇವೆಯನ್ನು ನೀಡುತ್ತಿರುವ  ಚೈಲ್ಡ್‌ ಲೈನ್‌-1098 ದ.ಕ.ಜಿಲ್ಲಾ ಕಚೇರಿಗೆ 80ರಷ್ಟು ಬರುತ್ತಿದ್ದ ಪ್ರಕರಣ ಗಳು ಜುಲೈ ತಿಂಗಳಲ್ಲಿ  ಈ ತನಕ 113ಕ್ಕೆ  ಏರಿವೆ. ಜು. 31 ರ ವೇಳೆಗೆ ಈ ಸಂಖ್ಯೆ ಇನ್ನೂ ಏರಿಕೆ ಆಗಲಿದೆ.

ಈ ಹಿಂದೆ 2019ರಲ್ಲಿ ಅತ್ಯಧಿಕ ಎಂದರೆ 102 ಕರೆಗಳು ಬಂದಿದ್ದು, ಇದೀಗ 2 ವರ್ಷಗಳ ಅಂತರದ ಬಳಿಕ ಇದೇ ಜುಲೈಯಲ್ಲಿ ಅತ್ಯಧಿಕ ಕರೆಗಳು (113) ಬಂದಿವೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕು ಗಳಲ್ಲಿನ ಮಕ್ಕಳಿಂದ ಅನೇಕ ರೀತಿಯ ಕರೆಗಳು ಬರುತ್ತಿದ್ದು ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದಿರುವ ದೌರ್ಜನ್ಯಗಳು ಹಾಗೂ ಇತರ  ಪ್ರಕರಣಗಳು ಅನ್‌ಲಾಕ್‌ ಆಗಿರುವ ಸಂದರ್ಭದಲ್ಲಿ ಹೊರಬರುತ್ತಿವೆ.

ಮಕ್ಕಳ ತುರ್ತು ರಕ್ಷಣೆ ಹಾಗೂ ಪೋಷಣೆ  ಮಾತ್ರವಲ್ಲದೆ ಮಕ್ಕಳ ಎಲ್ಲ ಸಮಸ್ಯೆಗಳಿಗೆ ತುರ್ತು ಪ್ರತಿಸ್ಪಂದನೆ ಯನ್ನು ಚೈಲ್ಡ್‌ಲೈನ್‌ ನೀಡುತ್ತಿದ್ದು ಗ್ರಾಮಾಂತರ ಹಾಗೂ ಒಳನಾಡಿನ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ರೀತಿಯ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಚೈಲ್ಡ್‌ಲೈನ್‌ ಪ್ರಕಟನೆ ತಿಳಿಸಿದೆ.

ಆಹಾರಕ್ಕಾಗಿ ಹೆಚ್ಚು ಕರೆ:

ರೇಶನ್‌ ಕಿಟ್‌ ಅಪೇಕ್ಷಿಸಿ 43 ಕರೆಗಳು ಬಂದಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಬಹುತೇಕ ಎಲ್ಲರಿಗೂ ಕಿಟ್‌ ಪೂರೈಕೆಗೆ ವ್ಯವಸ್ಥೆ  ಮಾಡಲಾಗಿದೆ. ಮಕ್ಕಳ ಭಿಕ್ಷಾಟನೆ ಕುರಿತಂತೆ 15 ಪ್ರಕರಣಗಳು ವರದಿಯಾಗಿವೆ. ವಸತಿ ವ್ಯವಸ್ಥೆ  ಕೋರಿ 9 ಕರೆ, ಮಾನಸಿಕ ಕಿರುಕುಳದ 6 ಕರೆಗಳು ಸ್ವೀಕೃತವಾಗಿವೆ. ಆನಲೈನ್‌ ತರಗತಿಗಳು ನಡೆಯುತ್ತಿರುವ ಕಾರಣ ಮೊಬೈಲ್‌ ಫೋನ್‌ ಸಂಬಂಧಿತ ದೂರು ಮತ್ತು ನೆಟ್‌ವರ್ಕ್‌ ಸಮಸ್ಯೆಯ ಕರೆಗಳೂ ಬಂದಿವೆ.

ಮನವಿ: ಗ್ರಾಮಾಂತರ ಪ್ರದೇಶಗ ಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ನೆಟ್‌ ವರ್ಕ್‌ ಸಮಸ್ಯೆಯಿದ್ದು ಕೆಲವೊಂದು ಬಾರಿ 1098ಕ್ಕೆ ಕರೆಗಳು ಹೋಗದೆ ಇದ್ದಲ್ಲಿ ಸಾರ್ವಜನಿಕರು ಸ್ಥಳೀಯ ಅಂಗನವಾಡಿ/ ಆಶಾ ಕಾರ್ಯಕರ್ತೆ ಯರ ಗಮನಕ್ಕೆ ತರುವಂತೆ ಚೈಲ್ಡ್‌ ಲೈನ್‌ ವಕ್ತಾರರು ತಿಳಿಸಿದ್ದಾರೆ.

ಕರೆಗಳ ವಿವರ:

ವೈದ್ಯಕೀಯ ನೆರವು 1

ವಸತಿ ವ್ಯವಸ್ಥೆ  9

ಪ್ರಾಯೋಜಕತ್ವ 4

ಸರಕಾರಿ ಯೋಜನೆಗಳ ಕುರಿತು  1

ಸಿಕ್ಕಿರುವ ಮಗು 2

ಕಾಣೆಯಾಗಿರುವ ಮಗು 2

ರೇಶ‌ನ್‌ ಕಿಟ್‌     43

ದೈಹಿಕ ಹಿಂಸೆ   6

ಲೈಂಗಿಕ ದೌರ್ಜನ್ಯ       1

ಮಾನಸಿಕ ಹಿಂಸೆ          6

ಭಿಕ್ಷಾಟನೆ 15

ಆಪ್ತ ಸಮಾಲೋಚನೆ  2

ಕುಟುಂಬ ಕಲಹ          4

ಮಾಹಿತಿಗಾಗಿ ಕರೆ         1

ಇತರ   4

ಸಾಗಾಟಕ್ಕೆ ಪ್ರಯತ್ನ     2

ಬಾಲ್ಯವಿವಾಹ 1

ಇತರ (ಸಂಬಂಧಿಸದೇ ಇರುವ)  1

ಬಾಲಕಾರ್ಮಿಕ 2

ಶಿಕ್ಷಣಕ್ಕೆ ಸಂಬಂಧಿಸಿದಂತೆ        5

ಕಾನೂನಿನ ಸಂಘರ್ಷಕ್ಕೆ ಒಳಗಾದ ಮಗು          1

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.