![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 8, 2021, 7:15 AM IST
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವತ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ನಾಡಿನಾದ್ಯಂತ ಘನ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳು ಹಂತಹಂತವಾಗಿ ನಡೆಯುತ್ತಿವೆ. ಇದರ ಜತೆ ಜತೆಗೆ ಕೈಗೊಳ್ಳಲಾದ ಕಾರ್ಯಕ್ರಮವೆಂದರೆ ದ್ರವ ತ್ಯಾಜ್ಯ ನಿರ್ವಹಣೆ.
ಮಾನವನ ಬಳಕೆಯಿಂದ ಕಲುಷಿತವಾದ ಮತ್ತು ಕುಡಿಯಲು, ಬಳಕೆಗೆ ಯೋಗ್ಯವಲ್ಲದ ಯಾವುದೇ ನೀರನ್ನು ದ್ರವ ತ್ಯಾಜ್ಯವೆಂದು ಕರೆಯುತ್ತೇವೆ. ಜಿಡ್ಡು, ತೈಲಗಳು, ಸೂಕ್ಷ್ಮಾಣು ಜೀವಿಗಳು, ಲೋಹಗಳು, ಜೈವಿಕ ವಸ್ತುಗಳು, ರಾಸಾಯನಿಕಗಳಾದ ರಂಜಕ, ಸಾರಜನಕ, ಹೈಡ್ರೋಕಾರ್ಬನ್ ಮುಂತಾದ ಹತ್ತು ಹಲವಾರು ವಸ್ತುಗಳು ದ್ರವತ್ಯಾಜ್ಯದಲ್ಲಿರುವ ಮಾಲಿನ್ಯಕಾರಕಗಳಾಗಿದ್ದು, ಇವುಗಳು ನೀರನ್ನು ಕಲುಷಿತಗೊಳಿಸುತ್ತದೆ.
ಇದರಲ್ಲಿ ಮನೆ ಹಂತದಲ್ಲಿ ದ್ರವ ತ್ಯಾಜ್ಯವನ್ನು ಎರಡು ವಿಧಗಳಾಗಿ ವಿಂಗಡಿಸಬಹುದಾಗಿದೆ. :
ಕಪ್ಪು ನೀರು:
ಶೌಚಾಲಯದ ಮೂಲಕ ಹೊರಬರುವ ನೀರನ್ನು ಕಪ್ಪು ನೀರು ಎಂದು ಕರೆಯುತ್ತಾರೆ. ಮನೆಯಲ್ಲಿ ಉತ್ಪಾದನೆಯಾಗುವ ದ್ರವ ತ್ಯಾಜ್ಯವು ಸುಮಾರು ಶೇ. 15 ಕಪ್ಪು ನೀರನ್ನು ಹೊಂದಿರುತ್ತದೆ.
ಬೂದು ನೀರು:
ಮನೆಯ ದಿನ ನಿತ್ಯದ ಕೆಲಸಗಳಿಗೆ ಬಳಕೆಯಾದ, ಕುಡಿಯಲು ಬಳಕೆಯಾಗದ, ಶೌಚಾಲಯದ ಸಂಪರ್ಕಕ್ಕೆ ಬಾರದ ನೀರು ಬೂದು ನೀರು ಅಥವಾ ಗ್ರೇ ವಾಟರ್ ಎಂದು ಕರೆಯಲಾಗುತ್ತದೆ. ನಾವು ಮನೆಯಲ್ಲಿ ಕೈತೊಳೆಯಲು, ಸ್ನಾನಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಅಡುಗೆಗೆ, ತರಕಾರಿಗಳ ಸ್ವತ್ಛತೆಗೆ ಬಳಸಿದ ನೀರನ್ನು ಬೂದು ನೀರು ಎಂದು ಕರೆಯಲಾಗುತ್ತದೆ.
ಒಬ್ಬ ವ್ಯಕ್ತಿಗೆ ಪ್ರತೀ ದಿನ ಬಳಕೆಗಾಗಿ ಸುಮಾರು 60 ಲೀಟರ್ ನೀರು ಆವಶ್ಯಕ. 4 ಜನ ಸದಸ್ಯರಿರುವ ಕುಟುಂಬಕ್ಕೆ ದಿನ ನಿತ್ಯದ ಬಳಕೆಗಾಗಿ ಸರಿ ಸುಮಾರು 250-300 ಲೀಟರ್ ನೀರು ಆವಶ್ಯಕತೆ ಇದೆ. ಮನೆಯಲ್ಲಿ ಪ್ರತೀ ನಿತ್ಯ ಗೃಹಬಳಕೆಯ ನೀರಿನಲ್ಲಿ ಅಂದಾಜು ಶೇ. 65-70 ಬೂದು ನೀರು ಉತ್ಪಾದನೆಯಾಗುತ್ತದೆ.
ಮನೆ ಹಾಗೂ ಸಮುದಾಯ ಮಟ್ಟದಲ್ಲಿ ದ್ರವ ತ್ಯಾಜ್ಯದ ಸಮರ್ಪಕ ವಿಲೇವಾರಿ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಮನೆಯ ಪರಿಸರ ಕಲುಷಿತವಾಗಿದ್ದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚು. ದ್ರವ ತ್ಯಾಜ್ಯದ ಅಸಮರ್ಪಕ ವಿಲೇವಾರಿ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಬಲ್ಲದು. ಅದರಲ್ಲೂ ಬೂದು ನೀರಿನ ಸಮರ್ಪಕ ನಿರ್ವಹಣೆ ಬಹು ದೊಡ್ಡ ಸಮಸ್ಯೆಯಾಗಿದೆ. ಬೂದು ನೀರು ಚರಂಡಿಗಳಲ್ಲಿ ಸಮರ್ಪಕವಾಗಿ ಹರಿಯದೇ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ.
ಬೂದು ನೀರಿನ ಸಮರ್ಪಕ ನಿರ್ವಹಣೆಯ ವಿಧಾನಗಳು :
ಬೂದು ನೀರಿನ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ದುಷ್ಪರಿಣಾಮಗಳು:
ಬೂದು ನೀರು ಮನೆಯ ಸುತ್ತಮುತ್ತ ಸಂಗ್ರಹವಾಗಿ ವಾಸನೆಯೊಂದಿಗೆ ಕೊಳಚೆ ಪ್ರದೇಶವಾಗಿ ಮಾರ್ಪಾಡುಗೊಂಡು ಮನೆಯ, ಗ್ರಾಮದ ನೈರ್ಮಲ್ಯ ಕಡಿಮೆಯಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಹೀಗೆ ಎಲ್ಲೆಂದರಲ್ಲಿ ಸಂಗ್ರಹವಾದ ಬೂದು ನೀರಿನಲ್ಲಿ ಸೊಳ್ಳೆ, ನೊಣ ಮುಂತಾದ ಕ್ರಿಮಿಗಳು ಉತ್ಪತ್ತಿಯಾಗಿ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚು.
ಎಲ್ಲೆಂದರಲ್ಲಿ ಸಂಗ್ರಹವಾದ ಬೂದು ನೀರು ನಮ್ಮ ಕುಡಿಯುವ ನೀರಿನ ಮೂಲದೊಂದಿಗೆ ಸೇರಿ ಶುದ್ಧವಾಗಿರುವ ನೀರು ಕೂಡ ಕಲುಷಿತವಾಗುತ್ತದೆ. ಆ ನೀರನ್ನು ನಾವು ಕುಡಿಯಲು, ಆಹಾರ ತಯಾರಿಸಲು ಬಳಕೆ ಮಾಡುವುದರಿಂದ ಹಾಗೂ ದ್ರವ ತ್ಯಾಜ್ಯಗಳಲ್ಲಿರುವ ಮಾಲಿನ್ಯಕಾರಕಗಳು ನಮ್ಮ ಆಹಾರ ಸರಪಳಿಯೊಳಗೆ ಸೇರಿ ವಾಂತಿ, ಭೇದಿ, ಟೈಫಾಯಿಡ್ ನಂತಹ ಕಾಯಿಲೆಗಳಿಗೆ ತುತ್ತಾಗಲು ಕಾರಣವಾಗುತ್ತದೆ.
ಜಲಮೂಲಗಳಾದ ನದಿ, ಹಳ್ಳ ಕೆರೆ, ಬಾವಿ, ಕೊಳವೆ ಬಾವಿಗಳ ನೀರಿನ ಜೊತೆಗೆ ದ್ರವ ತ್ಯಾಜ್ಯ ಮಿಶ್ರಿತವಾದಾಗ ಜಲಮೂಲಗಳು ಕಲುಷಿತವಾಗುತ್ತವೆ ಮತ್ತು ಅದರಲ್ಲಿ ವಾಸಿಸುತ್ತಿರುವ ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೂದು ನೀರು ಸೇರಿದಂತೆ ದ್ರವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಆ ನೀರಿನಲ್ಲಿರುವ ಮಾಲಿನ್ಯಕಾರಕಗಳು ಮಣ್ಣಿನೊಂದಿಗೆ ಬೆರೆತು ಮಣ್ಣಿನ ಮಾಲಿನ್ಯ ಉಂಟಾಗುತ್ತದೆ.
ಮನೆ ಅಥವಾ ಸಮುದಾಯ ಹಂತದಲ್ಲಿ ಅಸಮರ್ಪಕವಾದ ಬೂದು ನೀರಿನ ನಿರ್ವಹಣೆಯಿಂದ ಆ ನೀರನ್ನು ಸೇವಿಸುವ ಸಾಕುಪ್ರಾಣಿಗಳ ಆರೋಗ್ಯದ ಮೇಲೆ ಅಪಾಯ ಬೀರುತ್ತದೆ.
ರಾಘವೇಂದ್ರ ಭಟ್ ಎಂ.
ಆರೋಗ್ಯ ಸಹಾಯಕರು
ಡಾ| ಚೈತ್ರಾ ಆರ್. ರಾವ್
ಸಹ ಪ್ರಾಧ್ಯಾಪಕರು
ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋ-ಆರ್ಡಿನೇಟರ್,
ಸೆಂಟರ್ ಫಾರ್ ಟ್ರಾವೆಲ್ ಮೆಡಿಸಿನ್, ಕೆ
.ಎಂ.ಸಿ. ಮಣಿಪಾಲ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.