ಜಿಲ್ಲಾಡಳಿತದಿಂದ “ಮರಳು ಪರಿವೀಕ್ಷಕ’ ಇಂಟಿಗ್ರೆಟೇಡ್‌ ಸಾಫ್ಟ್‌ವೇರ್‌


Team Udayavani, Aug 11, 2021, 3:40 AM IST

ಜಿಲ್ಲಾಡಳಿತದಿಂದ “ಮರಳು ಪರಿವೀಕ್ಷಕ’ ಇಂಟಿಗ್ರೆಟೇಡ್‌ ಸಾಫ್ಟ್‌ವೇರ್‌

ಮಹಾನಗರ: ಮರಳುಗಾರಿಕೆ ಮತ್ತು ಸರಬರಾಜಿನಲ್ಲಿ ಹೆಚ್ಚು ಪಾರದರ್ಶಕ ತರುವ ಹಾಗೂ ಕಟ್ಟುನಿಟ್ಟಿನ ನಿಗಾ ಇರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ “ಮರಳು ಪರಿವೀಕ್ಷಕ’ ಎಂಬ ಇಂಟಿಗ್ರೆಟೇಡ್‌ ಸಾಫ್ಟ್‌ ವೇರ್‌ (ಸಮಗ್ರ ಮಾಹಿತಿ ಒಳಗೊಂಡ ತಂತ್ರಾಂಶ) ಸಿದ್ಧಪಡಿಸಿದೆ. ಮರಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ವಿರುವ ಸ್ಯಾಂಡ್‌ ಬಜಾರ್‌ ಸಹಿತ ಎಲ್ಲ ತಂತ್ರಾಂಶಗಳನ್ನು ಒಂದೇ ತಂತ್ರಾಂಶದೊಳಗೆ ತರಲಾಗಿದೆ.

ಮರಳು ಪರಿವೀಕ್ಷಕ ಇಂಟಿಗ್ರೆಟೇಡ್‌ ಸಾಫ್ಟ್‌ವೇರ್‌ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಪರಿಕಲ್ಪನೆಯಾಗಿದ್ದು, ಸರಕಾರಿ ಸ್ವಾಮ್ಯದ ಕಿಯೋನಿಕ್ಸ್‌ ಮೂಲಕ ಇದು ಸಿದ್ಧಗೊಂಡಿದ್ದು ರಾಜ್ಯದಲ್ಲೆ ಈ ಮಾದರಿ ಪ್ರಥಮವಾಗಿದೆ. ಮರಳುಗಾರಿಕೆ ದಿಬ್ಬಗಳಿಂದ ಮರಳು ತೆಗೆದು ಬೇಡಿಕೆ ಸಲ್ಲಿಸಿರುವವರ ತಾಣಕ್ಕೆ ಮರಳು ಸರಬರಾಜು ಆಗುವವರೆಗಿನ ಎಲ್ಲ ಮಾಹಿತಿಗಳು ಒಳ್ಳಗೊಂಡಿವೆ. ಇದಕ್ಕಾಗಿ ನೂತನ ಆ್ಯಪ್‌ವೊಂದನ್ನು ಸಿದ್ಧಪಡಿಸಲಾಗಿದ್ದು ಅಧಿಕಾರಿಗಳು ಪ್ರತಿಯೊಂದು ಹಂತವನ್ನು ಮೊಬೈಲ್‌ನಲ್ಲಿ ಆ್ಯಪ್‌ ಮೂಲಕ ವೀಕ್ಷಿಸಬಹುದಾಗಿದೆ.

ತಂತ್ರಾಂಶದ ವಿನ್ಯಾಸ:

ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಟ ವಾಹನಗಳಿಗೆ ಈಗಾಗಲೇ ಜಿಪಿಎಸ್‌ ಅಳವಡಿಸಲಾಗಿದೆ. ಮರಳು ದಿಬ್ಬ ಕೇಂದ್ರಗಳ ಬಳಿ 360 ಡಿಗ್ರಿ ತಿರುಗುವ ಮತ್ತು ರಾತ್ರಿಯು ನಿಖರ ವಿಷನ್‌ ಹೊಂದಿರುವ ಶಕ್ತಿಶಾಲಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಇದಲ್ಲದೆ ವಿವಿಧ ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕೆಮರಾಗಳಿರುತ್ತವೆ. ಈ ಎಲ್ಲ ವ್ಯವಸ್ಥೆಗಳನ್ನು ಒಂದೇ ತಂತ್ರಾಂಶದೊಳಗೆ ತಂದು ಒಂದು ಆ್ಯಪ್‌ನಲ್ಲಿ ಅಳವಡಿಸಿರುವ ಯೋಜನೆ ಇಂಟಿಗ್ರೆಟೇಡ್‌ ಸಾಫ್ಟ್ವೇರ್‌ ಆಗಿದೆ. ಆ್ಯಪ್‌ ಅನ್ನು ಮೊಬೈಲ್‌ಗೆ ಲಿಂಕ್‌ ಮಾಡಲಾಗಿದೆ.

ಜಿಲ್ಲೆಯಲ್ಲಿರುವ ಮರಳು ದಿಣ್ಣೆಗಳನ್ನು ಜಿಪಿಎಸ್‌ ನಿಗಾಕ್ಕೆ ಒಳಪಡಿಸಲಾಗುತ್ತಿದೆ. ಮರಳು ಸಾಗಾಟ ಲಾರಿಗಳು ಹಾಗೂ ಮರಳುಗಾರಿಕೆ ದೋಣಿಗಳು ಜಿಪಿಎಸ್‌ ವ್ಯವಸ್ಥೆ ಹೊಂದುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಇದನ್ನು ಪ್ರಸ್ತುತ ರೂಪಿಸಿರುವ ಮರಳು ಪರಿವೀಕ್ಷಕ ಆ್ಯಪ್‌ಗೆ

ಜೋಡಿಸಲಾಗುತ್ತದೆ. ಮರಳು ಸಾಗಾಟ ವಾಹನ ಹಾಗೂ ದೋಣಿ ಮಾಲಕರು ಜಿಪಿಎಸ್‌ ಫಿಟ್‌ನೆಸ್‌ ಸರ್ಟಿಫಿಕೆಟ್‌ ಆಧಾರದಲ್ಲಿ ಕ್ಯೂಆರ್‌ ಕೋಡ್‌ ಸೃಷ್ಟಿಸಬಹುದಾಗಿದೆ. ಜಿಪಿಎಸ್‌ ಸಾಧನ ಕಾರ್ಯಾರಂಭ ಮಾಡಿದ ಬಳಿಕ ಇದು ಮರಳು ಪರಿವೀಕ್ಷಕ ವೆಬ್‌ಗ ಜೋಡಣೆಯಾಗುತ್ತದೆ. ಜಿಪಿಎಸ್‌ ಅನ್ನು ಸದಾ ಸಕ್ರಿಯವಾಗಿಡುವುದು ಕಡ್ಡಾಯವಾಗಿರುತ್ತದೆ. ಮರಳು ಸಾಗಾಟ ಲಾರಿಗಳು ದಿನಕ್ಕೆ ಎಷ್ಟು ಬಾರಿ ಮರಳು ದಿಣ್ಣೆಗಳಿಂದ ಮರಳು ಸಾಗಾಟ ಮಾಡಿವೆ ಮತ್ತು ಪರವಾನಿಗೆ ರಹಿತವಾಗಿ ಅಥವಾ ಒಂದೇ ಪರವಾನಿಗೆ ಬಳಸಿ ಹಲವು ಬಾರಿ ಸಾಗಾಟ ಮಾಡಲಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದಲ್ಲದೆ ಆಂತಾರಾಜ್ಯ ಮರಳು ಸಾಗಾಟವೂ ಪತ್ತೆಯಾಗುತ್ತದೆ.

ಮರಳುಗಾರಿಕೆ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ವಿವಿಧ ತಂತ್ರಾಂಶ ಹಾಗೂ ನಿಗಾ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಮರಳು ಪರಿವೀಕ್ಷಕ ಇಂಟಿಗ್ರೆಟೇಡ್‌ ಸಾಫ್ಟ್‌ ವೇರ್‌ ಸಿದ್ಧಪಡಿಸಲಾಗಿದ್ದು, ಕಾರ್ಯಾರಂಭ ಮಾಡಿದೆ. ಇದರ ಆಧಾರದಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. -ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ  

ಟಾಪ್ ನ್ಯೂಸ್

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.