![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Aug 14, 2021, 5:51 PM IST
ಕೊಟ್ಟಿಗೆಹಾರ: ಮಾಸ್ತಿಕಟ್ಟೆಯ ಬಿ.ಎಂ. ರಮೇಶ್ ಎಂಬುವವರು ಸಾಕಿದ್ದ ಹಸುವಿನ ಹೊಟ್ಟೆಯಲ್ಲಿ ಕರು ತಿರುಗಿಕೊಂಡಿದ್ದ ಪರಿಣಾಮ
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಹಸುವಿನ ಹೊಟ್ಟೆಯಿಂದ ಕರುವನ್ನು ಹೊರ ತೆಗೆಯುವ ಮೂಲಕ ಜಾನುವಾರು ಅಧಿಕಾರಿ
ಅಜೀಜ್ ಅಹಮ್ಮದ್ ಹಸುವಿನ ಜೀವ ಉಳಿಸಿದ್ದಾರೆ.
ಮಾಸ್ತಿಕಟ್ಟೆಯ ಬಿ.ಎಂ. ರಮೇಶ್ ಅವರ ಹಸುವೊಂದು ಹೊಟ್ಟೆಯಲ್ಲಿ ಕರು ತಿರುಗಿ ಕೊಂಡಿದ್ದ ಪರಿಣಾಮ ಕರು ಹಾಕಲಾರದೇ ಪರದಾಡಿದ್ದು ಕೂಡಲೇ ರಮೇಶ್ ಅವರು ಪಶುವೈದ್ಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಅಜೀಜ್ ಅಹಮ್ಮದ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಜೀಜ್ ಅಹಮದ್ ಅವರು ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಬಸವರಾಜ ಕೋಟಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರ ಸಹಕಾರದಿಂದ ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಹೊರ ತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.
ಇದನ್ನೂ ಓದಿ:ಫಲಿತಾಂಶ ತಿರಸ್ಕರಿಸಿದವರಿಗೆ ಮತ್ತೆ ಪರೀಕ್ಷೆ
ಕರು ಹೊಟ್ಟೆಯ ಒಳಗೆ ಅಸುನೀಗಿದೆ. ಇಂತಹ ಪ್ರಕರಣಗಳಿಗೆ ವೈದ್ಯಕೀಯ ಭಾಷೆಯಲ್ಲಿ ಡಿಸ್ಟೋಕಿಯಾ ಎನ್ನಲಾಗುತ್ತದೆ. ಹೊಟ್ಟೆಯಲ್ಲಿ
ಕರು ತಿರುಗಿ ಕೊಂಡಿರುವುದರಿಂದ ಸ್ವಾಭಾವಿಕವಾಗಿ ಹಸುವಿಗೆ ಕರು ಹಾಕಲು ಸಾಧ್ಯವಾಗಿಲ್ಲ. ಕರುವನ್ನು ಹೊರ ತೆಗೆಯದೇ ಇದ್ದರೆ ಹೊಟ್ಟೆ
ಬಿಗಿಯಾಗಿ ಹಸು ಸಾವನ್ನಪ್ಪುವ ಸಾಧ್ಯತೆ ಇತ್ತು ಎಂದು ಜಾನುವಾರು ಅಧಿಕಾರಿ ಅಜೀಜ್ ಅಹಮ್ಮದ್ ತಿಳಿಸಿದ್ದಾರೆ.
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.