![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 16, 2021, 9:21 PM IST
ಯಲಬುರ್ಗಾ : ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ತಾಲೂಕಿನ ಬಂಡಿಹಾಳದ ಹಿರೇಹಳ್ಳ ಸಂಪೂರ್ಣ ತುಂಬಿ ಹರಿದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಸಂಜೆ ಆದರೂ ಹಳ್ಳದ ರಭಸ ಕಡಿಮೆಯಾಗದ ಹಿನ್ನಲೆಯಲ್ಲಿ ಜನತೆ ಹಗ್ಗ ಕಟ್ಟಿಕೊಂಡು ಜೀವ ಅಂಗೈಯಲ್ಲಿ ಹಿಡಿದುಕೊಂಡು ದಡ ಸೇರಿದ ಘಟನೆ ನಡೆದಿದೆ.
ತಾಲೂಕಿನ ಬಂಡಿಹಾಳ, ತೊಂಡಿಹಾಳ, ಚಿಕೇನಕೊಪ್ಪ, ಸಂಗನಾಳ ರೈತರ ಜಮೀನುಗಳು ಈ ಹಳ್ಳದ ಹತ್ತಿರ ಬರುತ್ತವೆ. ಮುಂಗಾರು ಹಂಗಾಮಿನ ಹೆಸರು ಕಾಯಿ ಬಿಡಿಸಲು ಹಾಗೂ ಉಳ್ಳಾಗಡ್ಡಿ ಕಳೆ ಕಸ ತೆಗೆಯಲು ನೂರಾರು ರೈತರು, ರೈತ ಮಹಿಳೆಯರು, ಯುವಕರು ಕೃಷಿ ಕಾರ್ಯಕ್ಕೆ ಜಮೀನುಗಳಿಗೆ ತೆರಳಿದ್ದರು.
ಮಧ್ಯಾಹ್ನ ಏಕಾಏಕಿ ಸುರಿದ ಮಳೆಗೆ ಹಳ್ಳ ರಭಸವಾಗಿ ಹರಿದಿದೆ. ಹಳ್ಳ ದಾಟಿ ಜಮೀನುಗಳಿಗೆ ಹೋದ ವಾಹನ, ಬಂಡಿಗಳು ಅಲ್ಲಿಯೇ ಉಳಿದಿವೆ. ರಸ್ತೆಗೆ ಬ್ರಿಡ್ಜ ಕಂ ಬ್ಯಾರೇಜ್ ಅತಿ ಅವಶ್ಯಕತೆ ಇದೆ ಶೀಘ್ರದಲ್ಲೇ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು.
ಸಾಹಸ : ಜನರು ನಡು ಮಟ್ಟದಲ್ಲಿ ಹರಿಯುವ ನೀರಿನಲ್ಲಿ ಧೈರ್ಯವಾಗಿ ಹಗ್ಗ ಕಟ್ಟಿಕೊಂಡು ಹಳ್ಳ ದಾಟಿದ್ದು ದೊಡ್ಡ ಸಾಹಸವೇ ಆಗಿದೆ.
ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದೇವೆ. ಆದರೇ ಬೆಳೆದ ಬೆಳಗಳು ಹಾನಿಯಾಗಿವೆ ಎಂದು ರೈತರಾದ ಮಲ್ಲೇಶಪ್ಪ ಬಂಡ್ರಿ, ಶರಣಪ್ಪ ಕಳಸಪ್ಪನವರ, ಮುತ್ತು ಸಂಗಣ್ಣನವರ, ಗಾಳೆಪ್ಪ ತಮ್ಮ ವೇದನೆ ವ್ಯಕ್ತಪಡಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.