ನಿಂತಿಲ್ಲ ಭೂ ಕುಸಿತದ ಆತಂಕ| ನೆಲದ ಸಾರ ಉಳಿಸಿಕೊಳ್ಳವ ಯತ್ನ ಆಗಲಿ

ಕುಸಿತದ ಪ್ರಮಾಣ ತಗ್ಗಿಸಲು ಕೊರ್ಸೆ ಹಕ್ಕೊತ್ತಾಯ

Team Udayavani, Aug 22, 2021, 5:53 PM IST

htytryrt

ವರದಿ: ರಾಘವೇಂದ್ರ ಬೆಟ್ಟಕೊಪ್ಪ

ಶಿರಸಿ: ಮಳೆ ಅತಿಯಾಗಿ ಮತ್ತೆ ಬಂದರೆ ಭೂ ಕುಸಿತ ಆಗಬಹುದು. ಇಂಥ ಆತಂಕ ಇನ್ನೂ ಮಲೆನಾಡಿನ ಊರುಗಳಲ್ಲಿ ಬಿಟ್ಟು ಹೋಗಿಲ್ಲ. ಕಾಳಿ, ಅಘನಾಶಿನಿ, ಬೇಡ್ತಿ ಕೊಳ್ಳದಲ್ಲಿ ನಡೆದ ಭೂ ಕುಸಿತಗಳು ವನವಾಸಿಗಳಿಗೆ, ರೈತರಿಗೆ, ಅರಣ್ಯ ಭೂಮಿ, ಜನಜೀವನಕ್ಕೆ ಆತಂಕವಾಗಿದೆ.

ಕಳಚೆ, ತಳಕೆಬಯಲು, ಮತ್ತೀಘಟ್ಟದಂತಹ ಪ್ರದೇಶದಲ್ಲಿ ಕೊಡಗಿನ ರೌದ್ರತೆ ಬಿಚ್ಚಿಟ್ಟಿದೆ. ಕಳೆದ ಜು 22, 23ರಂದು ಸುರಿದ ಮಳೆಗೆ ಮಾಸದ ಗಾಯಗಳಾಗಿವೆ. ಈ ಘಟನೆ ನಡೆದು ತಿಂಗಳಾಗುತ್ತಿದ್ದರೂ ಇಡೀ ಜಿಲ್ಲೆಯಲ್ಲಿ ಭೂ ಕುಸಿತದ ಆತಂಕ, ಗುಡ್ಡದ ತಲೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಆತಂಕ ಹೆಚ್ಚಿಸಿದೆ.

ಇನ್ನು ಯಾರೂ ನೋಡದ ಸ್ಥಳದಲ್ಲೂ ಕುಸಿತ, ಬಿರುಕು ಬಿಟ್ಟಿರಲೂಬಹುದಾಗಿದೆ. ಇವುಗಳ ಸರ್ವೇ ಕೂಡ ಆಗಿಲ್ಲ. ಈ ಕುಸಿತಕ್ಕೆ ಕಾರಣ ಏನು? ಜನ, ಸಮುದಾಯ, ಸರಕಾರ ಏನು ಮಾಡಬೇಕು ಎಂಬುದಕ್ಕೆ ಪರಿಸರ ತಜ್ಞರು ವಿಶ್ಲೇಷಣೆ ನಡೆಸಿದ್ದಾರೆ. ಕೊಡಗಿನ ಕುಸಿತದ ಪ್ರದೇಶದಲ್ಲಿ ಭೂ ಅಧ್ಯಯನ ನಡೆಸಿದ ತಂಡದಲ್ಲಿ ಕೆಲಸ ಮಾಡಿದ, ಪರಿಸರ ತಜ್ಞ ಡಾ| ಕೇಶವ ಹೆಗಡೆ ಕೊರ್ಸೆ “ಉದಯವಾಣಿ’ ಜೊತೆ ಈ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ್ದಾರೆ. ಅವರು ಎತ್ತಿಕೊಟ್ಟ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸಬೇಕು.

ಶಾಶ್ವತ ಪರಿಹಾರ ಅಥವಾ ಈ ಕುಸಿತದ ಪ್ರಮಾಣ ತಗ್ಗಿಸುವ ಕಾರ್ಯಕ್ಕೆ ಎಲ್ಲರೂ ಅವರವರ ಮಟ್ಟದಲ್ಲಿ ಕೆಲಸ ಮಾಡಬೇಕು. ಕೈ ಜೋಡಿಸಬೇಕಾದ ಕಾಲಘಟ್ಟದಲ್ಲಿ ನಿಂತಿದ್ದೇವೆ. ಸೂಕ್ಷ್ಮ ಸಂಗತಿಯಲ್ಲಿ ಎಡವಟ್ಟು ಮಾಡಿಕೊಂಡರೆ ಮತ್ತಷ್ಟು ಅಪಾಯ ಕಟ್ಟಿಕೊಂಡೇ ಬದುಕು ನಡೆಸಬೇಕಾಗುತ್ತದೆ. ಕೊರ್ಸೆ ಮೂರು ಪ್ರಮುಖ ಕಾರಣಗಳ ಜೊತೆ ಅದಕ್ಕೆ ಪರಿಹಾರದ ಸಲಹೆಗಳನ್ನೂ ನೀಡಿದ್ದಾರೆ. ಸಂಕಷ್ಟ ಅನುಭವಿಸುತ್ತಿದ್ದವರಿಗೆ ನೆರವಾಗಬೇಕು. ಕಾಳಿ ಕಣಿವೆ, ಅಘನಾಶಿನಿ, ಬೇಡ್ತಿ ಕಣಿವೆಯಲ್ಲಿ ಆದ ಭೂ ಕುಸಿತ ಭಯ ಹುಟ್ಟಿಸುತ್ತದೆ. ಇದು ಬಹಳ ದೊಡ್ಡ ದುರಂತ. ರೈತರು, ವನವಾಸಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರಿಗೆ ಸಹಾಯ ಹಸ್ತ ಚಾಚಬೇಕು. ಏಕೆ ಒಮ್ಮೆಲೆ ಭೂ ಕುಸಿತ ಆಗುತ್ತಿದೆ. ತಜ್ಞರ ಮೂಲಕ ಸಮಗ್ರ ಆಧ್ಯಯನ ಆಗಬೇಕು ಎಂದಿದ್ದಾರೆ.

ಭೂಮಿಯು ಕೆಲವೆಡೆ ಬಿರುದು ನಿಂತಿದೆ. ಜಾಗರೂಕತೆ, ಸುವ್ಯವಸ್ಥೆ ಭೂ ಬಳಕೆ ನೀತಿ ಜಾರಿಗೆ ಬರಬೇಕು. ಅರಣ್ಯೀಕರಣ, ಅಭಿವೃದ್ಧಿ ಕಾಮಗಾರಿಗಳಲ್ಲಿ ಮಣ್ಣಿನ ಸಾರದ ರಕ್ಷಣೆ ಮಾಡಬೇಕು. ಈ ಮೊದಲಿದ್ದ ಕಾಡಿನ ಮರು ಹೊದಿಕೆ ಪುನರ್‌ ನಿರ್ಮಾಣ ಮಾಡಬೇಕು. ಆಯಾ ಕಣಿವೆಯಲ್ಲಿ ಸೂಕ್ತವಾದ ಜಾತಿವಾರು ವೃಕ್ಷಗಳ ರಕ್ಷಣೆ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಜನ ಸಹಭಾಗಿತ್ವದಲ್ಲಿ ಇಂತಹ ಕೆಲಸ ಆಗಬೇಕು ಎಂದು ಸರಕಾರಕ್ಕೆ, ನೀತಿ ನಿರೂಪಕರಿಗೆ ಹಕ್ಕೊತ್ತಾಯ ಮಾಡಿದ್ದಾರೆ.

ಪಶ್ಚಿಮ ಘಟ್ಟದ ಮಲೆನಾಡಿನ, ಕಾಡಿನ ಪರಿಸರ ಇಳಿ ಜಾರಿನಲ್ಲಿ ಆಗಿದೆ. ನದಿ ಕಣಿವೆಯ ಪರಿಸರ ಇದಾಗಿದೆ. ಅದು ಸೂಕ್ಷ್ಮ ಪ್ರದೇಶ. ಅದರ ಮೇಲ್ಮಣ್ಣು ಬಹಳ 70-80 ಅಡಿಯಲ್ಲಿ ಗ್ರಾನೈಟ್‌, ಜೇಡಿ ಮಣ್ಣು ಬರಬಹುದು. ಮೇಲ್ಮಣ್ಣಿನಲ್ಲಿ ಇಂಗಿದ ನೀರು ಒಳಗೆ ಇಂಗಲಾಗದೇ ಗುರುತ್ವಾಕರ್ಷಣೆಯ ಕಾರಣಕ್ಕೆ ತಗ್ಗಿನ ಕಡೆಗೆ ನುಗ್ಗುತ್ತದೆ. ಆಗ ಮೇಲಿನ ಮಣ್ಣನ್ನು ಹಾಗೂ ಕಾಡನ್ನು ಜಾರಿಸುತ್ತದೆ. ಇನ್ನೂ ಆಳಕ್ಕೆ ಹೋಗದ ಸಂದರ್ಭದಲ್ಲಿ ಹೀಗಾಗುತ್ತದೆ. ಮೂಲತಃ ಪಶ್ಚಿಮ ಘಟ್ಟದಲ್ಲಿ ಈ ಕಾರಣಗಳಿಂದ ಭೂ ಕುಸಿತ ಆಗುವ ಸಾಧ್ಯತೆ ಹೆಚ್ಚು. ಇದನ್ನು ಬಹು ವರ್ಷದಿಂದ ಭೂಗರ್ಭ ಶಾಸ್ತ್ರಜರು ಹೇಳುತ್ತಿದ್ದಾರೆ.

ಒಂದೆರಡು ದಿನದಲ್ಲಿ 200, 250 ಮಿಲಿ ಮೀಟರ್‌ ಮಳೆ ಆದರೆ ಅದನ್ನು ತಡೆದುಕೊಳ್ಳುವ ಸಾಧ್ಯತೆ ಇಲ್ಲ. ಇದರಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಸಾಧ್ಯತೆ ಹೆಚ್ಚು ಎನ್ನುತ್ತಾರೆ. ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಕಾಡಿನ ರಕ್ಷಣಾ ಹೊದಿಕೆ ಮಳೆ ನೀರು ಜಾರಿ ನದಿ ಸಾಗುತ್ತದೆ. ಈಚೆಗಿನ ದಶಕಗಳಿಂದ ರಸ್ತೆ, ಕಂದಕ ನಿರ್ಮಾಣ, ಕೆರೆಗಳನ್ನು ತೋಡಿದ್ದು, ರಕ್ಷಣಾ ಕಂದಕ ನಿರ್ಮಾಣ ಮಾಡಿದ್ದು, ಗುಡ್ಡದ ಮೇಲ್ಭಾದಲ್ಲಿ ಅರಣ್ಯೀಕರಣ, ಕೃಷಿ ವಿಸ್ತಾರವಾಗಿದ್ದು, ಅನಾಹುತಗಳಿಗೆ ಕಾರಣವಾಗಿದೆ. ಜೆಸಿಬಿ ಬಳಸಿ ಮೇಲ್ಮಣ್ಣು ಬಿಡಿಸಿದಾಗ ನೀರು ಜಾರಿ ಹೋಗುವ ಬದಲು ಮಣ್ಣಿನೊಳಗೆ ಇಳಿಯತೊಡಗುತ್ತದೆ. ಭೂ ಕುಸಿತದ ಸಾಧ್ಯತೆ ಇದರಿಂದ ಇನ್ನೂ ಹೆಚ್ಚು ಆಗುತ್ತದೆ. ಮೊದಲೇ ಸೂಕ್ಷ್ಮ ನಿರ್ವಹಣೆ ಮಾಡಬೇಕಿದ್ದ ಪದರಿಗೆ ಏಟಾಗಿದೆ ಎಂದೂ ವಿಶ್ಲೇಷಿಸಿದ್ದಾರೆ ಕೇಶವ ಹೆಗಡೆ ಕೊರ್ಸೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.