ಇಂಡಿಯಾ ಟುಡೇ ಆರೋಗ್ಯ ಸಮೀಕ್ಷೆ:  ಡಾ| ಸದಾನಂದ ಆರ್‌. ಶೆಟ್ಟಿ ಅವರಿಗೆ ಸ್ಥಾನ


Team Udayavani, Aug 24, 2021, 2:15 PM IST

ಇಂಡಿಯಾ ಟುಡೇ ಆರೋಗ್ಯ ಸಮೀಕ್ಷೆ:  ಡಾ| ಸದಾನಂದ ಆರ್‌. ಶೆಟ್ಟಿ ಅವರಿಗೆ ಸ್ಥಾನ

ಮುಂಬಯಿ: ಇಂಡಿಯಾ ಟುಡೇ ನಡೆಸಿದ ಟಾಪ್‌ ಡಾಕ್ಟರ್ಸ್‌ ಇನ್‌ ಮುಂಬಯಿ- 2021 ಸಮೀಕ್ಷೆಯಲ್ಲಿ ಮುಂಬಯಿಯ ವೈದ್ಯರ ಪಟ್ಟಿಯಲ್ಲಿ ತುಳು, ಕನ್ನಡಿಗ ಡಾ| ಸದಾ ನಂದ ಆರ್‌. ಶೆಟ್ಟಿ ಸ್ಥಾನ ಪಡೆದಿದ್ದಾರೆ.

ಮುಂಬಯಿಯಲ್ಲಿನ ಆಸ್ಪತ್ರೆ ಮತ್ತು ಆರೋಗ್ಯ ಚಿಕಿತ್ಸಾಲಯಗಳಲ್ಲಿನ ವೈದ್ಯ ಕೀಯ ವಿಭಾಗಗಳ ಅತ್ಯುತ್ತಮ ಸೇವೆಯನ್ನು ಮಾನದಂಡ ವಾಗಿರಿಸಿ ಹೆಲ್ತ್‌ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆ ಯಲ್ಲಿ ಸರ್ವೋತ್ಕೃಷ್ಟ ಸೇವೆಗೈದ ವೈದ್ಯರ ಹೆಸರುಗಳನ್ನು ಪರಿಗಣಿಸಿ ಆಯ್ಕೆ ನಡೆಸಿತ್ತು. ಮುಂಬಯಿ ಮಹಾ ನಗರದಲ್ಲಿರುವ ಹಿರಿಯ ವೈದ್ಯರ ಸರ್ವೇ ಆಧಾರದ ಮೇಲೆ ಈ ಆಯ್ಕೆ ನಡೆಸಲಾಗಿದ್ದು, ಡಿಜಿ ಮೀಡಿಯಾ ಇನ್‌ ಕಾರ್ಪೊರೇಶನ್‌ ಈ ಸಮೀಕ್ಷೆಯನ್ನು ಪ್ರಕಟಿಸಿದೆ.

ಡಾ| ಸದಾನಂದ ಆರ್‌. ಶೆಟ್ಟಿ ಮೂಲತಃ ಶಿರ್ವದ ರಘುನಾಥ್‌ ಶೆಟ್ಟಿ ಮತ್ತು ಮೂಲ್ಕಿ ಅತಿಕಾರಿ ಬೆಟ್ಟು ದೆಪ್ಪಣಿಗುತ್ತು ಗುಲಾಬಿ ಶೆಟ್ಟಿ ದಂಪತಿಯ ಪುತ್ರರಾಗಿರುವ ಸದಾನಂದ ಆರ್‌. ಶೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದವರು. ಡಿಎಂ (ಡಾಕ್ಟರೇಟ್‌ ಆಫ್‌ ಮೆಡಿಸಿನ್‌-ಹೃದ್ರೋಗ), ಎಂಡಿ (ಡಾಕ್ಟರ್‌ ಆಫ್‌ ಮೆಡಿಸಿನ್‌-ಮೆಡಿಕಲ್‌) ಸಹಿತ ಹತ್ತಾರು ವೈದ್ಯಕೀಯ ಪದವಿಗಳನ್ನು ಪಡೆದಿರುವ ಇವರು ನವಿ ಮುಂಬಯಿ ಯ ಡಾ| ಡಿ. ವೈ. ಪಾಟೀಲ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ ಇದರ ವಿಶ್ರಾಂತ ಪ್ರಾಧ್ಯಾಪಕರಾಗಿದ್ದಾರೆ.

ಇದನ್ನೂ ಓದಿ:ಇನ್ಮುಂದೆ ವಾಟ್ಸ್ಯಾಪ್ ಮೂಲಕವೂ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು : ಕೇಂದ್ರ

ಸಿವಿಡಿ ಇಂಡಿಯಾ ಮತ್ತು ಸಿಸಿಎ ಇಂಟರ್‌ನ್ಯಾಶನಲ್‌ ಇವುಗಳ ಸ್ಥಾಪಕ ಮತ್ತು ಸದಾನಂದ್‌ ಜಿ2ಎಸ್‌2 ಫೌಂಡೇಶನ್‌ ಇದರ ಸ್ಥಾಪಕರಾಗಿರುವ ಇವರು, ಪ್ರಸ್ತುತ ಸೋಮಯ್ಯ ಸೂಪರ್‌ ಸ್ಪೆಷಾಲಿಟಿ ಇನ್‌ಸ್ಟಿಟ್ಯೂಟ್‌ ಮುಂಬಯಿ ಇದರ ಹೃದಯಶಾಸ್ತ್ರ ವಿಭಾಗದ ನಿರ್ದೇಶಕರಾಗಿ, ಸದಾನಂದ್‌ ಹೆಲ್ತಿ ಲಿವಿಂಗ್‌ ಸೆಂಟರ್‌ ಲಿ. ಮುಂಬಯಿ ಇದರ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕಾರ್ಡಿಯಾಲಜಿ ಸೊಸೈಟಿ ಆಫ್‌ ಇಂಡಿಯಾ ಮುಂಬಯಿ ಇದರ ಅಧ್ಯಕ್ಷರಾಗಿ, ಕಾರ್ಡಿಯಾಲಜಿ “ಕ್ಲಿನಿಕಲ್‌ ಕೇಸಸ್‌’ ಮ್ಯಾಗಜಿನ್‌ ಇದರ ಸಂಪಾದಕರಾಗಿ, ಜೀವನಚರಿತ್ರೆ ಮತ್ತು ರೋಗಿಗಳ ಶಿಕ್ಷಣ ಪುಸ್ತಕ “ಕ್ಲೀವ್‌ ಲ್ಯಾಂಡ್‌ ಹಾಲ್‌ ಆಫ್‌ ಫೇಮ್‌’ ಇದರ ಪ್ರಧಾನ ಸಂಪಾದಕರಾಗಿ, ಅಮೇರಿಕನ್‌ ಕಾಲೇಜ್‌ ಆಫ್‌ ಕಾರ್ಡಿಯಾಲಜಿ ಮತ್ತು ಯುರೋಪಿಯನ್‌ ಸೊಸೈಟಿ ಆಫ್‌ ಕಾರ್ಡಿಯಾಲಜಿ ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.