![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 25, 2021, 1:24 PM IST
Representative Image
ಅಂತಾರಾಜ್ಯ ಮತ್ತು ಗಡಿಜಿಲ್ಲೆಗಳಿಂದ ಬೆಂಗಳೂರು ಮತ್ತು ಇತರ ಪ್ರದೇಶಗಳಿಗೆ ಬಂದು ಕಳ್ಳತನ, ದರೋಡೆ, ಸರಗಳವು ಮತ್ತಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರು ಮತ್ತು ಪೊಲೀಸರ ನೆಮ್ಮದಿಗೆ ಭಂಗ ತಂದಿರುವ ಹತ್ತು ಹಲವು ಗ್ಯಾಂಗ್ಗಳಬಗ್ಗೆವಿಸ್ತೃತ ವರದಿ ಸರಣಿ. ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವಂತೆ ಮಾಡುವುದು, ಅಪರಾಧ ನಿಯಂತ್ರಕ ಪೊಲೀಸರಿಗೆ ಸಹಾಯ ಮಾಡುವುದು ಉದಯವಾಣಿಕಾಳಜಿ
ಬೆಂಗಳೂರು: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಭೂಗತವಾಗಿದ್ದ ಅಂತಾರಾಜ್ಯ ಮತ್ತು ಗಡಿಭಾಗಗಳಕಳ್ಳರ ಗ್ಯಾಂಗ್ಗಳು ರಾಜಧಾನಿ ಮತ್ತು ಇತರೆ ನಗರಗಳಲ್ಲಿ ಸಕ್ರಿಯವಾಗಿದ್ದು, ತಮ್ಮ ಕೈ ಚಳಕ ತೋರಿಸಲಾರಂಭಿಸಿವೆ! ಹೆಚ್ಚೇಕೆ, ಇತರೆ ರಾಜ್ಯಗಳಿಂದ ಬೆಂಗಳೂರಿಗೆ ವಿಮಾನ ಮೂಲಕವೂ ಪ್ರಯಾಣ ಬೆಳೆಸಿ ತಮ್ಮಕೈಂಕರ್ಯದಲ್ಲಿ ನಿರತರಾಗಿದ್ದಾರೆ!!
ತಮಿಳುನಾಡಿನ ತಿರುಚ್ಚಿ, ಆಂಧ್ರಪ್ರದೇಶದ ಓಜಿಕುಪ್ಪಂ, ಮಧ್ಯಪ್ರದೇಶದ ಬೀಲ್ಸ್ ಸಮುದಾಯ, ರಾಜಸ್ಥಾನ ಭವೇರಿಯಾ, ರಾಮ್ಜೀ, ಇರಾನಿ, ನೇಪಾಳೀ ಗ್ಯಾಂಗ್, ಸನ್ಸಿ ಗ್ಯಾಂಗ್, ಶ್ಯಾಮ್ಲಿ, ಕೊಂಡಪೆಟ್ಟಿ ಮತ್ತಿತರ ಗ್ಯಾಂಗ್ ಗಳು ಬೆಂಗಳೂರು ಸೇರಿ ಕರ್ನಾಟಕದ ಕೆಲವಡೆ ಸಕ್ರಿಯ ವಾಗಿದ್ದು, ಸಾರ್ವಜನಿಕರ ಸುಲಿಗೆ ಮಾಡುತ್ತಿವೆ.
ಲಾಕ್ಡೌನ್ ಪರಿಣಾಮ ಸಂಚಾರ ನಿರ್ಬಂಧ ಇದಿದ್ದರಿಂದ ತಮ್ಮ ತಮ್ಮ ಊರುಗಳಿಗೆ ತೆರಳಿ “ಸುಮ್ಮನಾಗಿದ್ದ’ ನೆರೆ ರಾಜ್ಯಗಳ ಗ್ಯಾಂಗ್ ಈಗ ವಿಮಾನ, ರೈಲು, ಬಸ್ ಮತ್ತಿತರ ಮಾರ್ಗಗಳ ಮೂಲ ಕ ಬಂದು ಬೆಂಗಳೂರು ಸೇರಿ ಕರ್ನಾಟಕದ ನಾನಾ ಕಡೆಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವ ಪ್ರಕರಣಗಳು ಮತ್ತೆ ಅಲ್ಲಲ್ಲಿ ಬೆಳಕಿಗೆ ಬರುತ್ತಿವೆ. ಕೊರೊನಾ ಪೂರ್ವದಲ್ಲಿ ರಾಜ್ಯಕ್ಕೆ ಬಂದು ಸಾರ್ವಜನಿಕರ ಲಕ್ಷಾಂತರ ರೂ. ಮೌಲ್ಯದಚಿನ್ನಾಭರಣ,ವಾಹ ನಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್ಗಳು, ಕೊರೊನಾ ನಡುವೆಯೂ ಆಗಾಗ್ಗೆ ಬಂದು ಸಾರ್ವಜನಿಕರು ಮತ್ತು ಪೊಲೀಸರಿಗೆ ಕಂಟಕಪ್ರಾಯವಾಗಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ನೇಪಾಳ ಸೇರಿ ವಿವಿಧೆಡೆಯಿಂದ ಬಂದು ಸರಗಳ್ಳತನ, ವಾಹನ ಕಳವು, ದರೋಡೆ, ಡಕಾಯಿತಿ, ಗಮನ ಬೇರೆಡೆ ಸೆಳೆದು ಹಣಲೂಟಿ, ಒಂಟಿ ಮಹಿಳೆಯರ ಮನೆಗೆ ನುಗ್ಗಿ ದರೋಡೆ, ದೌರ್ಜನ್ಯ ಎಸಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದಾರೆ. ಹದಿನೈದು ದಿನ, ತಿಂಗಳಿಗೊಮ್ಮೆ ಬೆಂಗಳೂರಿಗೆ ಬರುವ ಈ ಗ್ಯಾಂಗ್ನ ಸದಸ್ಯರು ಬೆಂಗಳೂರಿನಲ್ಲಿ
ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಸಹಾಯಕ್ಕಾಗಿ ಕಮಿಷನ್ ಕೊಟ್ಟು ಸ್ಥಳೀಯ ಕಳವು ಆರೋಪಿಗಳನ್ನು ನೇಮಿಸಿಕೊಳ್ಳುತ್ತವೆ.
ಕೃತ್ಯ ಎಸಗುವ ಸ್ಥಳದ ಸಮೀಪದಲ್ಲಿಯೇ ಮುಸುಕುಧರಿಸಿ ದ್ವಿಚಕ್ರ ವಾಹನಗಳನ್ನುಕಳವು ಮಾಡಿ, ಅವುಗಳ ಮೂಲಕವೇ ಸುಲಿಗೆ, ದರೋಡೆ, ಸರಗಳ್ಳತನ ಸೇರಿ ಇತರೆ ಅಪರಾಧ ಕೃತ್ಯ ಎಸಗಿ ಅದೇ ವಾಹನದಲ್ಲಿ ರಾಜ್ಯ ತೊರೆಯುತ್ತಾರೆ. ಕೆಲವೊಮ್ಮೆ ಗಡಿಭಾಗದಲ್ಲಿ ವಾಹನಗನ್ನು ನಿಲ್ಲಿಸಿ ಪರಾರಿಯಾಗಿರುವ ಉದಾಹರಣೆಗಳು ಇವೆ. ವಿಶೇಷವೆಂದರೆ, ಪ್ರಮುಖ ಗ್ಯಾಂಗ್ಗಳಾದ ಭವೇರಿಯಾ, ರಾಮ್ಜೀ, ಇರಾನಿ, ಓಜಿಕುಪ್ಪಂ, ಶ್ಯಾಮ್ಲಿ ಗ್ಯಾಂಗ್ಗಳು ವಿಮಾನ, ರೈಲುಗಳ ಮೂಲಕ ಬೆಂಗಳೂರಿಗೆ ಬಂದು ಕೃತ್ಯ ಎಸಗಿದ ಬಳಿಕ ಅದೇ ಮಾರ್ಗ ದಲ್ಲಿ ತಮ್ಮ ಊರುಗಳು ಸೇರಿಕೊಳ್ಳುತ್ತವೆ ಎಂದು ಪೊಲೀಸರು ತಿಳಿಸುತ್ತಾರೆ.
ಊರಿಗೆ ಊರೇ ಕಳ್ಳರ ಸಂತೆ!: ಈ ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದಾಗ ಇಡೀ ಊರಿಗೆ ಊರೇ ಕಳ್ಳರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂಥ ಪ್ರದೇಶಕ್ಕೆ ಹೋಗಲು ಸ್ಥಳೀಯ ಪೊಲೀಸರೇ ಹಿಂದೇಟು ಹಾಕುತ್ತಾರೆ. ಪ್ರಮುಖವಾಗಿ ಬಿಲ್ಸ್, ಭವೇರಿಯಾ, ರಾಮ್ಜೀ, ಓಜಿಕುಪ್ಪಂ ಗ್ಯಾಂಗ್ಗಳ ಸದಸ್ಯರ ಮೇಲೆ ದಾಳಿಗೆ ಪೊಲೀಸರು ಹಿಂದೇಟು ಹಾಕುತ್ತಾರೆ. ಏಕೆಂದರೆ, ಪೊಲೀಸರ ಕಂಡರೆ ಇಡೀ ಊರಿನ ಸದಸ್ಯರೇ ಕಲ್ಲು, ದೊಣ್ಣೆ, ಬಾಣಗಳ ಮೂಲಕ ಬೆದರಿಕೆ ಹಾಕುತ್ತಾರೆ. ಆದರೆ, ಬೆಂಗಳೂರು ಪೊಲೀಸರು ಇಂಥ ಗ್ಯಾಂಗ್ನ ಸದಸ್ಯರನ್ನು ಸ್ಥಳೀಯಪೊಲೀಸರಜತೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ಕರೆ ತಂದಿದ್ದಾರೆ.
ದೇವರಿಗೆ ಹರಕೆ
ಇನ್ನುಕೆಲ ಗ್ಯಾಂಗ್ನ ಸದಸ್ಯರು ಅಪರಾಧಕೃತ್ಯಕ್ಕೆ ಹೊರಡುವ ಮೊದಲು ತಮ್ಮ ಗ್ರಾಮ ದೇವರಿಗೆ ಹರಕೆ ಕಟ್ಟಿಕೊಂಡು ಹೊರಡುತ್ತಾರೆ.ಕೃತ್ಯ ಎಸಗಿ ವಾಪಸ್
ಹೋದ ಬಳಿಕಕಳವು ವಸ್ತು ಮಾರಾಟ ಮಾಡಿ ಬಂದ ಹಣದಲ್ಲಿ ಹರಕೆ ತೀರಿಸುತ್ತಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
*ಮೋಹನ್ ಭದ್ರಾವತಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.