ಚಾರ್ಮಾಡಿ ಘಾಟಿ ಸೌಂದರ್ಯ ಕಸಿದ ಭೂಕುಸಿತ

ಕಕ್ಕಿಂಜೆಯಲ್ಲಿ ಪಿಯುಸಿ ವಿಭಾಗ ತೆರೆಯಲು ಬೇಡಿಕೆ

Team Udayavani, Aug 28, 2021, 6:53 AM IST

ಚಾರ್ಮಾಡಿ ಘಾಟಿ ಸೌಂದರ್ಯ ಕಸಿದ ಭೂಕುಸಿತ

ಆವರಣ ಗೋಡೆ ಇಲ್ಲದ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ.

ಸೌಂದರ್ಯದ ಗಣಿಯನ್ನು ಹೊಂದಿರುವ ಚಾರ್ಮಾಡಿ ಗ್ರಾಮದಲ್ಲಿ ಪ್ರವಾಸೋದ್ಯಮ ಬೆಳೆಯಲು ವಿಪುಲ ಅವಕಾಶಗಳಿದ್ದರೂ ಇಲ್ಲಿರುವ ವ್ಯವಸ್ಥೆಗಳು ಅದಕ್ಕೆ ಪೂರಕವಾಗಿ ಇನ್ನೂ ಬೆಳೆದಿಲ್ಲ. ಇದು ಅಲ್ಲದೆ ಇಲ್ಲಿ ಮೂಲ ಸೌಕರ್ಯಗಳ ಹಲವು ಕೊರತೆ ಕಾಡುತ್ತಿದೆ. ಈ ಕುರಿತು ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ ಬೆಳಕು ಚೆಲ್ಲುವ ಪ್ರಯತ್ನ.

ಬೆಳ್ತಂಗಡಿ: ರಾಜ್ಯ ರಾಜಧಾನಿಗೆ ಬಹುಮುಖ್ಯ ಸಂಪರ್ಕ ಬೆಸುಗೆಯಾಗಿದ್ದುಕೊಂಡೇ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪಶ್ಚಿಮ ಘಟ್ಟದ ತಪ್ಪಲಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ವ್ಯಾಪ್ತಿಯ ಚಾರ್ಮಾಡಿ ಮಂದಿ ಮಾತ್ರ ಕರೆಗೆ ಸಿಗುತ್ತಿಲ್ಲ.

ಚಾರ್ಮಾಡಿ ಗ್ರಾಮ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿ ಕಳೆದ ಎರಡು ವರ್ಷಗಳ ಹಿಂದಿನ ಭೂಕುಸಿತದ ಹೊಡೆತಕ್ಕೆ ಸಿಲುಕಿ ಸೌಂದರ್ಯ ಕಳೆದು ಕೊಂಡಿದೆ. ಚಾರ್ಮಾಡಿ ಘಾಟಿಯ 11ನೇ ತಿರುವಿನವರೆಗೆ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಅಲ್ಲಿಂದ ಬಳಿಕ ಮೂಡಿಗೆರೆ ಗ್ರಾಮ. 2ನೇ ತಿರುವಿನಿಂದ ಆರಂಭವಾಗಿ ಮಲೆಯ ಮಾರುತದವರೆಗೆ ನೆಟ್‌ವರ್ಕ್‌ ಸಮಸ್ಯೆ ಇಂದು ನಿನ್ನೆಯದಲ್ಲ. ಅಪಘಾತ ವಲಯವಾಗಿದ್ದರೂ ಯಾವುದೇ ಕಾರಣಕ್ಕೂ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ರಾತ್ರಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಸೂಚನ ಫಲಕವಿಲ್ಲ, ಸಾರ್ವಜನಿಕ ಶೌಚಾಲಯ ಪ್ರಮುಖ ಬೇಡಿಕೆಯಾಗಿದೆ.

ಬಸ್‌ ಸಮಯಕ್ಕೆ ಬರುತ್ತಿಲ್ಲ
ಚಾರ್ಮಾಡಿ, ಅಣಿಯೂರು, ಪುದುವೆಟ್ಟು, ಕಾಯ ರ್ತಡ್ಕ ಗ್ರಾಮದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಚಾರ್ಮಾಡಿಗೆ ಬರಬೇಕು. ಕಕ್ಕಿಂಜೆಯಲ್ಲಿ 10ನೇ ತರಗತಿವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಾದಲ್ಲಿ 25 ಕಿ.ಮೀ. ದೂರ ಸಾಗುವ 500 ವಿದ್ಯಾರ್ಥಿಗಳು ಸ್ಥಳೀಯವಾಗಿಯೇ ಶಿಕ್ಷಣ ಪಡೆಯಬಹುದಾಗಿದೆ. ಬಸ್‌ ವ್ಯವಸ್ಥೆ ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಖಾಸಗಿ ವಾಹನ ಅವಲಂಬಿ ಸಬೇಕಾಗಿದ್ದು ಬಸ್‌ಗೆ ಉಜಿರೆಗೆ 14 ರೂ., ಇದ್ದರೆ ಖಾಸಗಿ ವಾಹನದವರು 25 ರೂ. ಪಡೆಯುತ್ತಾರೆ. ವಿದ್ಯಾರ್ಥಿಗಳು ದಿನಕ್ಕೆ 50 ರೂ. ಸಂಚಾರಕ್ಕೆ ಮೀಸಲಿರಿಸುವಂತಾಗಿದೆ.

ಗಾಂಧಿನಗರ ಕಕ್ಕಿಂಜೆ ರಸ್ತೆ
ಗಾಂಧಿನಗರದಿಂದ ಕಕ್ಕಿಂಜೆಗೆ ಬರುವ ಎರಡು ಕಿ.ಮೀ. ಮಣ್ಣಿನ ರಸ್ತೆ ಕಳಪೆಯಾಗಿದೆ. 300ಕ್ಕೂ ಅಧಿಕ ಮನೆ ಗಳಿರುವುದರಿಂದ ಸರ್ವಋತು ರಸ್ತೆ ಆಗಬೇಕೆಂಬ ಬೇಡಿಕೆಯಿದೆ. ರಸ್ತೆ ನಿರ್ಮಾಣವಾದಲ್ಲಿ ಕಕ್ಕಿಂಜೆಗೆ ನೇರವಾಗಿ ತೆರಳಲು ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಖ್ಯ ರಸ್ತೆಯಾಗಿ 4 ಕಿ.ಮೀ. ಸುತ್ತು ಬಳಸಿ ಬರಬೇಕಿದೆ. ಅನ್ನಾರು ಕಾಲನಿಯಿಂದ ಚಿಬಿದ್ರೆ ಗ್ರಾಮದ ಎಸ್‌.ಟಿ. ಕಾಲನಿ 2 ಕಿ.ಮೀ. ರಸ್ತೆ ಹದಗೆಟ್ಟಿದೆ. ಈ ರಸ್ತೆಯಾದಲ್ಲಿ ಚಿಬಿದ್ರೆ ಹಾಗೂ ಚಾರ್ಮಾಡಿ ಗ್ರಾಮದ ಮಂದಿಗೆ ಪ್ರಮುಖ ರಸ್ತೆ ಸಂಪರ್ಕ ವಾಗಲಿದೆ. ಚಿಬಿದ್ರೆ ಗ್ರಾಮದಿಂದ ವಿದ್ಯಾರ್ಥಿಗಳಿಗೆ ಅನ್ನಾರು ಸೇತುವೆಯಾಗಿ ಬರಲೂ ಹತ್ತಿರದ ರಸ್ತೆಯಾಗಲಿದೆ.

ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

ಅನ್ನಾರು ಸೇತುವೆ ಸಂಪರ್ಕ ರಸ್ತೆ
ಕಕ್ಕಿಂಜೆಯಿಂದ ಅನ್ನಾರು ಸಾಗುವ 2 ಕಿ.ಮೀ. ರಸ್ತೆ ಕಾಂಕ್ರೀಟ್‌ ರಸ್ತೆಯಾಗಬೇಕೆಂಬ ಬೇಡಿಕೆ ಹಲವು ದಿನ ಗಳದ್ದು. ಕುಸಿತಗೊಂಡ ಅನ್ನಾರು ಸೇತುವೆ ನಿರ್ಮಾಣದ ಹಂತದಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಅನ್ನಾರು ಕಾಲ ನಿಯ ಮಲೆಕುಡಿಯ ಸಮುದಾಯಕ್ಕೆ ಕಕ್ಕಿಂಜೆಗೆ ಬರಲು ಪ್ರಯೋಜನವಾಗಲಿದೆ. ಬೀಟಿಗೆ ಪ್ರಾ.ಆರೋಗ್ಯ ಕೇಂದ್ರದ ಟ್ಯಾಂಕ್‌ ಹಳೆಯ ದಾಗಿದೆ. ಜತೆಗೆ ಆರೋಗ್ಯ ಕೇಂದ್ರಕ್ಕೆ 10 ಅಡಿ ಎತ್ತರ, 50 ಮೀಟರ್‌ ಉದ್ದದ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಗಾಂಧಿನಗರದಲ್ಲಿ 100ಕ್ಕೂ ಅಧಿಕ ಮನೆಗಳಿದ್ದು ನೀರಿನ ಸೌಕರ್ಯವಿಲ್ಲ. ಬೀಟಿಗೆ ಹಾಗೂ ಗಾಂಧಿನಗರದಲ್ಲಿ ಎರಡು ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾದಲ್ಲಿ ನೀರಿನ ತೊಂದರೆ ಶಾಶ್ವತ ನೀಗಲಿದೆ.

ಅರಣೆಪಾದೆ ಸೇತುವೆ
ಪ್ರತೀ ಮಳೆಗಾಲದಲ್ಲಿ ಅರಣೆ ಪಾದೆ ಸಂಪರ್ಕ ರಸ್ತೆಯದೇ ಸಮಸ್ಯೆ. 11 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಮಳೆಗಾಲದಲ್ಲಿ ಮರಮಟ್ಟು ಬಡಿದು ಹಾನಿಯಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾದಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಪ್ರಯೋಜನವಾಗಲಿದೆ. ಈಗಾಗಲೆ 2 ಕೋ.ರೂ. ವೆಚ್ಚದಲ್ಲಿ ಅನ್ನಾರಿನಿಂದ ಅರಣೆಪಾದೆವರೆಗೆ ರಸ್ತೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾದರೆ ಮತ್ತಷ್ಟು ಪ್ರಯೋಜನವಾಗಲಿದೆ.

ಇತರ ಬೇಡಿಕೆಗಳೇನು?
– ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
– ಚಾರ್ಮಾಡಿ ಘಾಟಿ ರಸ್ತೆಗೆ ಸೋಲಾರ್‌ ದೀಪ
– ಅಕ್ರಮ ಮರಳುಗಾರಿಕೆಗೆ ತಡೆ
– ಪೊಲೀಸ್‌ ಗೇಟ್‌ ಬಳಿ ಸಾರ್ವಜನಿಕ ಶೌಚಾಲಯ

– ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.